ನೆವರ್ ಎಂಡಿಂಗ್ ಲವ್ ಸ್ಟೋರಿ
ಪ್ರೇಮಿಗಳಿಗೆ
ಸಾವುಂಟು ಆದರೆ ಪ್ರೀತಿಗಲ್ಲ, ಯುಗಗಳು ಉರುಳಿ ಹೋದ್ರು, ಕಾಲಗಳು ಕಳೆದು ಹೋದ್ರು ಪ್ರೀತಿ ಬದಲಾಗಿಲ್ಲ,
ಪ್ರೀತಿ ಪ್ರೀತಿಯಾಗೇ ಉಳಿದಿದೆ ಅಂತ ಅಳಿಯದ ಪ್ರೀತಿಯ ಕಥೆ ನೆವರ್ ಎಂಡಿಂಗ್ ಲವ್ ಸ್ಟೋರಿ
ಅವಳು ಬ್ರಾಹ್ಮಣರ ಮನೆ ಹುಡುಗಿ ನಾಗಾಂಬಿಕ, ಮುದ್ದು ಮುದ್ದಾಗಿ ಎಲ್ಲರ ಜೊತೆ ಮಾತಾಡ್ಕೊಂಡು ಓಡಾಡ್ತಿದ್ರೆ ನೋಡಿದವರ ದೃಷ್ಟಿ ಖಂಡಿತ ತಾಗ್ತಿತ್ತು. ಇಡೀ ಕಾಲೇಜಿಗೇ ಅವಳೊಂತರಾ ಚೆಲುವಾಂತ ರಾಜಕುಮಾರಿ, ಅವನ ಕಣ್ಣಿಗೂ ಬಿದ್ದೇ ಬಿಟ್ಲು, ಅವನೋ ನೋಡಿದವನೇ ಸುಸ್ತು ! ಇವಳೇ ನನ್ನ ಹೆಂಡತಿ ಅಂತ ಡಿಸೈಡ್ ಮಾಡ್ಬಿಟ್ಟ ! ಕಣ್ ಕಣ್ಣ ಸಲಿಗೆ ಅವರಿಬ್ಬರ ಮಧ್ಯೆ ಶುರುವಾಯ್ತು. ಅಂದಹಾಗೆ ಅವನು ಕ್ರೈಶ್ಚಿಯನ್ ಎರಿಯಾದ ಹುಡುಗ ಸ್ಯಾಮ್ ಸನ್. ಒಂದೇ ಊರು, ಒಂದೇ ಕಾಲೇಜು, ಒಂದೇ ಕ್ಲಾಸು, ಆದ್ರೆ ಜಾತಿ ಬೇರೆ ಬೇರೆ.. ಪ್ರೀತಿಗೆ ಜಾತಿ ಎಲ್ಲಿದೆ..? ಶುರುವಾಯ್ತು ಸ್ಯಾಮ್ ಸನ್ - ಅಂಬಿಕಾ ಪ್ರೇಮ್ ಕಹಾನಿ..!
ಅದು ಬೆಟ್ಟಗುಡ್ಡಗಳಿಂದ ಕೂಡಿದ, ನದಿ ಕಣಿವೆಯ, ಸುಂದರ ಕಾನನದ ಒಂದು ಸಣ್ಣ ಊರು ಹೊರಕೇರಿ ಎಲ್ಲಾ ಮತ ಧಮ್ರದವರು ಅಣ್ಣ-ತಮ್ಮ, ಅಕ್ಕ-ತಂಗಿಯರ ತರ ಇರೋ ಊರದು. ಇವರಿಬ್ಬರ ಲವ್ ಸ್ಟೋರಿ ಆರಂಭವಾಗೋದು ಇದೇ ಊರಲ್ಲಿ.. ಕ್ಲಾಸ್ ರೂಮಲ್ಲಿ, ಲ್ಯಾಬ್ ನಲ್ಲಿ, ಲೈಬ್ರರಿಯಲ್ಲಿ, ಕಾಲೇಜು ಪಾರ್ಕಲ್ಲಿ, ಬಸ್ ಸ್ಟ್ಯಾಂಡಲ್ಲಿ, ಹೀಗೆ ಅವರ ಲವ್ ನಾವಿಕನಿಲ್ಲದ ದೋಣಿಯಂತೆ ಸಾಗುತ್ತಿತ್ತು.
ಕಾಲೇಜು ದಿನಗಳು ಮುಗೀತು, ಕಾಮರ್ಸ್ ಓದ್ತಾ ಇದ್ದ ಸ್ಯಾಮ್ ಸನ್ ಗೆ ಬಿಸಿನೆಸ್ ಮನ್ ಆಗೋ ಆಸೆ. ಆದ್ರೆ ಅದಕ್ಕೆ ಡಿಗ್ರಿ ಮಾಡ್ಬೇಕಲ್ಲ. ಅಷ್ಟರೊಳಗೆ ಅಂಬಿಕಾಗೆ ಮದುವೆ ಮಾಡಿದ್ರೆ ಕಷ್ಟ ಅಂತ ಬಿಸಿನೆಸ್ ಮನ್ ಆಸೆ ಬಿಟ್ಟು ಡಿ.ಎಡ್ ಮಾಡ್ದ..! ಡಿ.ಎಡ್ ಮುಗೀತಿದ್ದ ಹಾಗೇ ಪಿಯುಸಿ ಮೇಲೆ ಅವನಿಗೆ ಪೊಲೀಸ್ ಕೆಲಸವೂ ಸಿಕ್ತು.. ! ಅವಳೂ ಬೇರೆ ಕಡೆ ಡಿ.ಎಡ್ ಮುಗಿಸಿ ಮನೆಗೆ ವಾಪಸ್ ಬಂದ್ಲು! ಸ್ಯಾಮ್ ಪೊಲೀಸ್ ಟ್ರೈನಿಂಗ್ ಹೊರಡೋಕೆ ಮುಂಚೆ ಪಕ್ಕದ ಊರಿನ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿ, ನಂಗೆ ತಾಳಿ ಕಟ್ಟು ಅಂತ ಅರಿಶಿನ ಕೊಂಬು ಕಟ್ಟಿಸ್ಕೊಂಡು ಬರ್ತಾಳೆ ಅಂಬಿಕಾ.. !
ಅದಾದ ಮೇಲೆ ಸ್ಯಾಮ್ ಟ್ರೈನಿಂಗ್ ಪಿರಿಯಡ್ ನಲ್ಲಿದ್ದ. ಅವಳು ಒಂದು ದಿನ ಫೋನ್ ಮಾಡಿದ್ಲು.. `ಲೋ ಸ್ಯಾಮ್ ನೀನು ಪೊಲೀಸ್ ಆದ್ರೆ ಮನೆಗೆ ತುಂಬಾ ಲೇಟಾಗಿ ಬರ್ತೀಯ, ನಂಗೆ ಮದುವೆಯಾದ ಮೇಲೆ ರಾತ್ರಿ ಒಬ್ಬಳೇ ಮನೇಲಿರೋಕೆ ಭಯ ಆಗುತ್ತೆ. ಆ ಪೊಲೀಸ್ ಕೆಲಸ ಬಿಟ್ಟುಬಿಡು’ ಅಂದ್ಲು ! ಅಷ್ಟೆ.. ಮರು ಮಾತಾಡದೇ ಓಕೆ ಹೇಳಿ ಕೈಯಲ್ಲಿದ್ದ ಪೊಲೀಸ್ ಕೆಲಸ ಬಿಟ್ಟು ಬಂದೇ ಬಿಟ್ಟ ಸ್ಯಾಮ್ ! ವಾಪಸ್ ಬಂದು ತನ್ನೂರಿನಲ್ಲೇ ಡಿ.ಎಡ್ ಆಧಾರದ ಮೇಲೆ ಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರ್ಕೊಂಡ. ಈ ಟೈಮಲ್ಲಿ ಅಂಬಿಕಾ ಮನೆಯಲ್ಲಿ ಇವರಿಬ್ಬರ ಪ್ರೇಮ ಪುರಾಣ ಗೊತ್ತಾಗಿತ್ತು. ಯಾವಾಗ ಸ್ಯಾಮ್ ಮತ್ತು ಅಂಬಿಕಾ ಲವ್ ಮಾಡ್ತಿದಾರೆ ಅಂತ ಗೊತ್ತಾಯ್ತೊ, ಅವತ್ತಿಂದ ಅಂಬಿಕಾ ಎಲ್ಲಿದ್ದಾಳೆ ಅಂತಾನೆ ಗೊತ್ತಾಗಲಿಲ್ಲ, ಎಲ್ಲೇ ಹುಡುಕಿದ್ರು ಅರ್ಚನಾ ಇಲ್ಲ, ಅವಳಪ್ಪನಿಗೆ ವಿಚಾರಿಸಿದ್ರೆ ಗೊತ್ತಿಲ್ಲ ಅನ್ನೋ ಉತ್ತರ. ಸ್ಯಾಮ್ ತನ್ನ ಸ್ನೇಹಿತರನ್ನು ಬಿಟ್ಟು ಬೇಹುಗಾರಿಕೆ ಮಾಡಿದ್ರೂ ನೋ ಯೂಸ್, ಅರ್ಚನಾ ಇಲ್ಲ, ಇಲ್ಲ, ಇಲ್ಲ.
ಸ್ಯಾಮ್ ಹುಚ್ಚನಾಗಿಹೋಗ್ತಾನೆ, ಊಟ ತಿಂಡಿ ಬಿಟ್ಟು ಅವಳನ್ನ ಹುಡುಕ್ತಾನೆ, ಅವರಪ್ಪನ್ನ ಕೈಕಾಲು ಹಿಡೀತಾನೆ.. ಆದ್ರೆ ಎಲ್ಲೂ ಅರ್ಚನಾ ಸುಳಿವು ಸಿಗೋದೇ ಇಲ್ಲ. ಆದ್ರೆ ಅವತ್ತು ರಾತ್ರಿ ಮರೆಯಲ್ಲಿ ನಿಂತು ಅವರಪ್ಪನ ಹಿಂದೆ ಬೀಳ್ತಾನೆ.. ರಾತ್ರಿ 12 ಗಂಟೆಗೆ ಅವರಪ್ಪ ಮನೆಯಿಂದ ಹೊರಡ್ತಾನೆ.
ಅವರಿಗೆ ಗೊತ್ತಾಗದ ಹಾಗೆ ಸ್ಯಾಮ್ ಅವನ ಸ್ನೇಹಿತನ ಜೊತೆ ಫಾಲೋ ಮಾಡ್ತಾನೆ. ನಾಲ್ಕೈದು ಬೀದಿ ದಾಟಿದ ಮೇಲೆ ಬೀದಿದೀಪವೂ ಇಲ್ಲದ ಬೀದಿಯ ಕೊನೆಯ ಮನೆಗೆ ಅವರಪ್ಪ ಹೋಗ್ತಾನೆ.. ಅವರಪ್ಪ ಬಂದು ಹೋಗುವ ತನಕ ಕಾದು ಕೂತು, ಅವರು ಹೋದ ತಕ್ಷಣ ಆ ಮನೆಯ ಕಿಟಕಿಯಲ್ಲಿ ನೋಡಿದ್ರೆ ಅವಳು ಕಣ್ಣೀರು ಹಾಕ್ಕೊಂಡು ಕೂತಿದ್ದಾಳೆ. ಅವಳ ಕೈಗೆ ಹಗ್ಗ ಬಿಗಿದಿಟ್ಟಿದ್ದಾರೆ.. ಅದರ ಇನ್ನೊಂದು ತುದಿ ಅಂಬಿಕಾಳ ಅಮ್ಮನ ಕೈಗೆ ಕಟ್ಟಿದ್ದಾರೆ.. `ನನ್ನ ಬಿಡಮ್ಮ, ನಾನ್ ಸ್ಯಾಮ್ ಜೊತೆ ಚೆನ್ನಾಗಿರ್ತೀನಿ ಅಂತ ಗೋಗರೀತಾ ಇರೋ ಅಂಬಿಕಾಳನ್ನ ನೋಡಿ ಸ್ಯಾಮ್ ಕರುಳು ಕಿತ್ತು ಬರುತ್ತೆ..! ಆದ್ರೆ ಏನೂ ಮಾಡೋ ಪರಿಸ್ಥಿತಿಯಲ್ಲಿರೋದಿಲ್ಲ ಅವನು. ಆದ್ರೆ ಅವಳು ಜೀವಂತವಾಗಿದ್ದಾಳೆ ಅಂತ ಗೊತ್ತಾಗಿ ಸಣ್ಣ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಡ್ತಾನೆ. ಈ ಕಡೆ ಅಂಬಿಕಾ ಊಟ ನೀರು ಬಿಟ್ಟು ಹಠ ಮಾಡ್ತಾಳೆ.
ವಿಧಿ ಇಲ್ಲದೇ ಅವಳಪ್ಪನೇ ಅವರ ಮೊಬೈಲ್ ನಿಂದ ಕಾಲ್ ಮಾಡಿಸಿ ಅವನ ಜೊತೆ ಮಾತಾಡಿಸ್ತಾರೆ. ಊಟ ಮಾಡೋಕ್ ಹೇಳಪ್ಪ, ನೀರೂ ಕುಡ್ದಿಲ್ಲ ನನ್ನ ಮಗಳು ಅಂತ ಗೋಗರೆದು, ನೀನು ಬ್ರಾಹ್ಮಣನಾಗಿದ್ರೆ ಈಗ್ಲೇ ಮದುವೆ ಮಾಡಿಸಿಬಿಡ್ತಿದ್ದೆ, ನಿಂಗೆ ನನ್ನ ಮಗಳನ್ನು ಕೊಟ್ಟು ನಾವು ಈ ಊರಲ್ಲಿ ತಲೆ ಎತ್ತಿಕೊಂಡು ತಿರುಗೋಕಾಗಲ್ಲ.. ಪ್ಲೀಸ್ ನನ್ನ ಮಗಳನ್ನು ಮರೆತುಬಿಡು’ ಅಂತ ಬೇಡ್ತಾರೆ.. ಅಷ್ಟು ಪ್ರೀತಿಸೋ ಹುಡುಗೀನ ಸ್ಯಾಮ್ ಸನ್ ಬಿಟ್ಟುಬಿಡೋ ಯೋಚನೇನೂ ಮಾಡಲ್ಲ. ಶಾಹಿದ್ ಊರ ಮುಖಂಡರನ್ನೆಲ್ಲಾ ಕರೆಸಿ ಪಂಚಾಯ್ತಿ ಮಾಡಿಸ್ತಾನೆ.. ಊರಿನ ಧಾಮ್ರಿಕ ಮುಖಂಡರ ಎದುರು ಜೋರುಜೋರು ಚರ್ಚೆ ನಡೆಯುತ್ತೆ. ಅವಳು ಎಲ್ಲರ ಎದುರಲ್ಲೇ ಕೂಗಿ ಹೇಳ್ತಾಳೆ.. ನಂಗೆ ಸ್ಯಾಮ್ ಬೇಕು.. ನಾನು ಮದ್ವೆ ಅಂತಾದ್ರೆ ಅವನನ್ನೇ ಅಂತ. ಅಲ್ಲೇ ಅವರಪ್ಪ ಅವಳ ಕೆನ್ನೆಗೆ ಬಾರಿಸಿ, ನನ್ನ ಮಗಳು ನನ್ನಿಷ್ಟ ಅಂತ ಹೇಳಿ ಎಳೆದುಕೊಂಡು ಹೋಗ್ತಾರೆ. ಊರ ಮುಖಂಡರಿಗೂ ಏನು ಮಾಡ್ಬೇಕು ಅಂತ ಗೊತ್ತಾಗದೇ ಕೈಚೆಲ್ಲಿ ಬಿಡ್ತಾರೆ. ಈ ಕಡೆ ಸ್ಯಾಮ್ ಸನ್ ಅಪ್ಪ ಅಮ್ಮನಿಗೆ ಮಗ ಏನಾಗಿಬಿಡ್ತಾನೋ ಅನ್ನೋ ಚಿಂತೆ ಶುರುವಾಗುತ್ತೆ.. ಸ್ಯಾಮ್ ಅವಳ ಮನೆಯ ಎದುರಿಗೆ ತನ್ನ ರಾತ್ರಿಗಳನ್ನು ಕಳೆಯೋಕೆ ಶುರು ಮಾಡ್ತಾನೆ. ಅವಳು ಮನೆಯ ಒಳಗಿಂದ ಸ್ಯಾಮ್ ಸ್ಯಾಮ್ ಅಂತ ಕೂಗ್ತಾ ಕಣ್ಣೀರಿಟ್ರೆ, ಈ ಕಡೆ ಸ್ಯಾಮ್ ಗೆ ಅಮ್ಮು, ಅಮ್ಮು ಅಂತ ಬಿಕ್ಕಿಬಿಕ್ಕಿ ಅಳೋದು ಬಿಟ್ಟು ಬೇರೆ ದಾರಿಯೇ ತೋಚೋದಿಲ್ಲ.
ಹೀಗೆ ಸ್ವಲ್ಪ ದಿನ ಕಳೆಯುತ್ತೆ.. ಆದ್ರೆ ಅಂಬಿಕಾಳ ಧ್ವನಿ ಸ್ಯಾಮ್ ಕಿವಿಗೆ ಬೀಳೋದೇ ಇಲ್ಲ. ಇವನು ಅಮ್ಮು ಅಮ್ಮು ಅಂತ ಎಷ್ಟೇ ಕೂಗಿದ್ರೂ ಅವಳ ಕಡೆಯಿಂದ ಯಾವ ಉತ್ತರವೂ ಬರೋದಿಲ್ಲ. ಸ್ಯಾಮ್ ಗೆ ಭಯ ಶುರುವಾಗುತ್ತೆ. ಇನ್ನು ಸುಮ್ಮನಿದ್ರೆ ಆಗಲ್ಲ ಅಂತ ಡಿಸೈಡ್ ಮಾಡ್ಕೊಂಡು, ಅವನ ಸ್ನೇಹಿತರ ಸಹಾಯದಿಂದ ಅವರ ಮನೆಯ ಬಗಿಲು ಮುರಿದು ಒಳಗೆ ನುಗ್ಗೇ ಬಿಡ್ತಾನೆ..! ಅವಳು ಅಲ್ಲೆಲ್ಲೂ ಕಾಣೋದಿಲ್ಲ.. ಅವರಪ್ಪ ತುಂಬಾ ಕೂಲಾಗಿ ಹೇಳ್ತಾರೆ, ಬಾಗಿಲು ಮುರ್ಕೊಂಡು ಒಳಗೆ ಬಂದ್ಯಲ್ಲಾ, ಅವಳು ಬಂದ್ರೆ ಕರ್ಕೊಂಡು ಹೋಗು. ಸ್ಯಾಮ್ ಸಂತೋಷಕ್ಕೆ ಪಾರವೇ ಇಲ್ಲ, ಅವಳ ಜೊತೆಗೆ ಮದುವೆಯ ಕನಸು ಕಾಣೋಕೆ ಶುರು ಮಾಡ್ಬಿಟ್ಟ. ಅಷ್ಟರಲ್ಲಿ ಮನೆಯ ಒಳಗಿಂದ ಹೊರಬಂದ ಅಂಬಿಕಾ ಓಡಿ ಬಂದು ಸ್ಯಾಮ್ ಕಾಲು ಹಿಡೀತಾಳೆ. ದಯವಿಟ್ಟು ನನ್ನ ಕ್ಷಮಿಸಿಬಿಡು, ನಂಗೆ ನಮ್ಮಪ್ಪ ಅಮ್ಮ ಮುಖ್ಯ. ನಿನ್ನ ಮದ್ವೆ ಆದ್ರೆ ಅವರು ಸತ್ತೇ ಹೋಗ್ತಾರೆ, ಪ್ಲೀಸ್ ನನ್ನ ಮರೆತುಬಿಡು..!’
ಸ್ಯಾಮ್ ಜೀವಂತ ಶವವಾಗಿಬಿಟ್ಟ.. ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ.. ಯಾರ ಸಲುವಾಗಿ ಊಟ-ನೀರು-ನಿದ್ದೆ ಬಿಟ್ಟು ಒದ್ದಾಡಿದ್ನೋ, ಅವಳೇ ಕಾಲು ಹಿಡಿದು ಮರೆತುಬಿಡು ಅಂದ್ರೆ ಹೇಗಾಗಬೇಡ.. ಒಂದೇ ಒಂದು ಮಾತಾಡದೇ ಅವಳ ಕೈಯಿಂದ ತನ್ನ ಕಾಲು ಬಿಡಿಸಿಕೊಂಡ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರು ಒರೆಸಿಕೊಂಡು ಅಲ್ಲಿಂದ ಹೊರನಡೆದ.
ಮತ್ಯಾವತ್ತೂ ಅವಳ ಮನೆಯ ಕಡೆ ನೋಡಲೂ ಇಲ್ಲ. ಊಟ ಬಿಟ್ಟ, ಅವಳಿಗೋಸ್ಕರ ಸಿಕ್ಕಿದ್ದ ಕೆಲಸ ಬಿಟ್ಟ, ಉದ್ದುದ್ದ ಗಡ್ಡ ಬಿಟ್ಟ.. ಊರಲ್ಲೆಲ್ಲಾ ದೇವ್ ದಾಸ್ ಅಂತ ರೇಗಿಸೋಕೆ ಶುರುಮಾಡಿದ್ರು. ಯಾವತ್ತೂ ಡ್ರಿಂಕ್ಸ್ ಮಾಡದವನು ಕಂಠಪೂರ್ತಿ ಕುಡಿದು ರೋಡಲ್ಲಿ ಬೀಳೋಕೆ ಶುರು ಮಾಡ್ದ. ಅವನಪ್ಪ ಅಮ್ಮನಿಗೆ ಕಣ್ಣೀರಷ್ಟೇ ಸ್ವಂತ. ಪ್ರೀತಿಯ ಹಿಂದೆಬಿದ್ದು ಮಗನ ಜೀವನ ಹೀಗೆ ಸರ್ವನಾಶವಾಗ್ತಿದ್ರೆ ಅವರಾದ್ರೂ ಹೇಗೆ ಸಹಿಸಬೇಕು..?
ಇದನ್ನೆಲ್ಲ ನೋಡಿಕೊಂಡು ಇರೋಕೆ ಅಂಬಿಕಳಿಗೆ
ಮನಸ್ಸಾಗಲಿಲ್ಲ, ಆದದ್ದು ಆಗಲಿ ಎಂದು ಮನೆಯ ಬಾಗಿಲನ್ನು ಧಾಟಿದಳು, ಇತ್ತ ಸ್ಯಾಮ್ ಸ್ನೇಹಿತರು
ಸೇರಿ ದೂರದ ಉರಲ್ಲಿ ಮುದುವೆ ಮಾಡಿಸಿ ಅಲ್ಲಿಂದ ಬೇರೆ ಕಡೆ ಅವರನ್ನು ಕಳಿಸ್ತಾರೆ. ವಿಷಯ ತಿಳಿದ
ಅಂಬಿಕಾಳ ಅಪ್ಪ ಅಮ್ಮ ಪೋಲಿಸರ ಮೊರೆ ಹೋಗ್ತಾರೆ. ವಿಷಯ ಗೊತ್ತಾದ ಪೋಲಿಸರು ಸ್ಯಾಮ್ ಸ್ನೇಹಿತರನ್ನ
ಎಳೆದು ತಂದು ಚೆನ್ನಾಗಿ ಹೊಡಿತಾರೆ ಬಡಿತಾರೆ ಯಾರಿಂದಲೂ ಸಣ್ಣ ಸುಳಿವು ಸಿಗೊದಿಲ್ಲ. ಕೊನೆಗೆ ಅವಳ
ಹಣೆ ಬರಹ ಇದ್ದಂಗೆ ಆಗುತ್ತೆ ಅಂತ ಕಂಪ್ಲೇಟ್ ವಾಪಸ್ ತಗೊತಾರೆ ಅಂಬಿಕಾಳ ಅಪ್ಪಾ.
ಇದಾದ 5 ವರುಷಕ್ಕೆ ಅಂಬಿಕಾ ಮತ್ತು ಸ್ಯಾಮ್ ಸನ್ ಮತ್ತು
ಅವರಿಗೆ ಹುಟ್ಟಿದ ಮಗುವಿನೊಂದಿಗೆ ತನ್ನೂರಿಗೆ ಬರ್ತಾರೆ. ಊರಿನವರ, ಸ್ನೇಹಿತರ ಆನಂದಕ್ಕೆ ಪಾರವೇ
ಇರಲಿಲ್ಲ ಅಂದು ಧಮ್ರ, ಬೇದ ಬಾವ ಮರೆತು ಅವರನ್ನ ಬರ ಮಾಡಿಕೊಳ್ತಾರೆ. ಪ್ರೀತಿಯ ಮುಂದೆ ಧಮ್ರ,
ಸಂಪ್ರದಾಯ, ಗೊಡ್ಡು ಆಚರಣೆಗೆ ತಲೆ ಬಾಗಿತ್ತು.
ಮಂಜುನಾಥ್
ಹೆಚ್.ಆರ್.
Emai
: manjunathahr1991@gmail.com