Saturday 22 October 2016

ಒಂದು ಕ್ಷಣ

 ಒಂದು ಕ್ಷಣ
  ಮಾಧವ್ ಕಾಲ್ ಮಾಡಿ ನನ್ನನ್ನು ಮದುವೆಗೆ ಕರೆದಾಗ ಮನದ ಮೂಲೆಯಲ್ಲಿದ್ದ ಅಪರೂಪದ ನಂಬಿಕೆ ಎಂಬ ತಿಳಿಯಾದ ನೀರು ಒಂದು ಕ್ಷಣ ಅಲುಗಾಡಿದ್ದು ಉಂಟು. ಯಾಕೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ ಅವಳು ಕೂಡ ಮದುವೆಗೆ  ಬರುತ್ತಾಳೆ ಎಂದು ಲೋಕೇಶ್ ಹೇಳಿದಾಗ ಅವನಿಗೆ ಏನು ಹೇಳಬೇಕು ಎಂದು ತಿಳಿಯದೆ. ನಾನು ಮದುವೆಗೆ ಬರೋದು ಅನುಮಾನ ಲೋಕೆಶ್ ಮಾಧವನಿಗೆ ಈ ವಿಷಯ ಹೇಳ ಬೇಡ ಸುಮ್ಮನೆ ಬೇಜಾರು ಮಾಡ್ಕೊತಾನೆ ಎಂದು ಫೋನ್ ಕಟ್ ಮಾಡಿದ್ದೆ.
  ರಾತ್ರಿಯಲ್ಲ ಒಬ್ಬರಾದ ಮೇಲೊಬ್ಬರಂತೆ ಮೆಸೆಜ್ ಗಳ ಸುರಿಮಳೆ, ಕಾಲ್ ಗಳ ಸೋನೆ ಮಳೆ, ಯಾಕೆ ನೀನು ಬರೊದಿಲ್ಲ? ತುಂಬಾ ದಿನ ಆಗಿದೆ ಎಲ್ಲರನ್ನ ಮೀಟ್ ಮಾಡಿ, ಮಾತನಾಡಿಸಿ, ಎಲ್ಲರು ಬರಬೇಕಾದರೆ ನಿನ್ನದೇನೋ ಕಷ್ಟ ಸುಮ್ನೆ ಬಾರೋ ಎಂದು ಅರುಣ್ ಸಾರಿ ಸಾರಿ ಹೇಳಿದರು  ಮನಸೇಕೊ ಅತ್ತ ಕಡೆ ವಾಲುತ್ತಲೆ ಇಲ್ಲ.
  ಹರಿದು ಹೋದ ಹಾಳೆಯನ್ನು ಜೋಡಿಸುತ್ತಾ ಕುಳಿದ್ದಾಗ ಅವಳು ಕೊಟ್ಟು ಮರೆತು ಹೋದ ಕೊನೆಯ ಬಾರಿ ಹೇಳಿದ ‘ಈ ನಿನ್ನ ಕೆಟ್ಟ ಮುಖ ಯಾವತ್ತು ತೋರಿಸ ಬೇಡ’ ಅನ್ನೋ ಮಾತು ಪದೇ ಪದೇ ನೆನಪಿಗೆ ಬರುತ್ತಿತ್ತು. ಅತೀಯಾಗಿ ಪ್ರೀತಿಸಿದ ಕಾರಣ ಕಳೆದುಕೊಂಡ ಅವಳ ನಿರ್ಮಲ ಮನಸ್ಸು ಇನ್ನೆಂದು ನನಗೆ ಸಿಗದು. ಮನ ನೋಯಿಸುವಂತೆ ಮಾಡಿದ ತಪ್ಪು, ಅಹಂಕಾರಿಯಾಗಿ ಮಾತನಾಡುವ ನನ್ನಂತ ಎಷ್ಟೋ ಮಂದಿಗೆ ಅರ್ಥವಾಗುವುದಿಲ್ಲ.
  ಮದುವೆಗೆ ಹೋಗುವುದು ಬೇಡ ಎನ್ನುವ ನಿರ್ಧಾರ ಬಲವಾಗಿರುವಾಗಲೇ ನನ್ನ ಸೆಲ್ ಫೋನ್ ರಿಂಗ್ ಎದೆ ಬಡಿತದ ನಡುವೆ ಜೋರಾಗಿ ಹೊಡೆದುಕೊಂಡಿತು. ಯಾರೆಂದು ಟೇಬಲ್ ಮೇಲಿದ್ದ ಮೊಬೈಲ್ ಗೆ ಕೈನ ಸಹಾಯ ಕೊಟ್ಟೆ ದೊಡ್ಡ ಶಾಕ್ ನನಗಾಗಿತ್ತು…?

ಮಂಜುನಾಥ್ ಜೈ

Tuesday 24 May 2016

ಪ್ರಾದೇಶಿಕ ಭಾಷೆಗೆ ಪರ್ವಕಾಲ

   ನಮ್ಮೂರಿನ ತಾಲೂಕು ಕೇಂದ್ರದಿಂದ ಹಿಡಿದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭಾಷೆಯ ಘೋಷಣೆಗಳು ಸಾಮಾನ್ಯ ಯಾಕೆಂದರೆ ಅದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ರೈಲ್ವೇ ಇಲಾಖೆ ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ್ದರೂ ಅಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗಳಿಗೋ ಮಣೆ ಹಾಕಿದ್ದರೂ. ಆದರೆ ಈಗ ಸ್ಥಳೀಯರೆಲ್ಲರು ಸಂತಸ ಪಡುವಂತಹ ವಿಚಾರ, ಸ್ಥಳೀಯ ಭಾಷೆಗಳಲ್ಲಿ ವಿಮಾನ ಯಾನದ ಮಾಹಿತಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಇದು ಎಲ್ಲಾ ಪ್ರಾದೇಶಿಕ ಭಾಷಿಗರು ಹೆಮ್ಮೆ ಪಡುವಂತೆ ಮಾಡಿದೆ. 
   ಎಷ್ಟೋ ಬಾರಿ ವಿಮಾನ ನಿಲ್ದಾಣಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಘೋಷಣೆಗಳನ್ನು ಕಿವಿಕೊಟ್ಟು ಆಲಿಸುವಾಗ, ಸ್ಥಳೀಯ ಭಾಷೆಯಲ್ಲಿ ಇರಬಾರದೇ ಎಂದು ಎಷ್ಟೋ ಜನಕ್ಕೆ ಅನ್ನಿಸಿದೆ. ಹೌದು ಆ ನಿಮ್ಮ ಮನದ ಮಾತು ತಲುಪಬೇಕಾದವರಿಗೆ ತಲುಪಿದೆ. ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಘೋಷಣೆಗಳು ಪ್ರದೇಶಿಕ ಭಾಷೆಯಲ್ಲಿ ಕೂಡ ಇರಬೇಕೆಂದು ಕಡ್ಡಾಯಗೊಳಿಸಿವ ಸಾಧ್ಯತೆ ಇದೆ.
   ಸಾಮಾನ್ಯ ಜನರ ದೀರ್ಘ ಕಾಲದ ಬೇಡಿಕೆಯಿಂದಾಗಿ ದೇಶದ ನಾನಾ ಕಡೆಗಳಲ್ಲಿ ಹಲವಾರು ಸಣ್ಣ ಪುಟ್ಟ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಪಡಿಸುವುದಕ್ಕೆ ಹಾಗೂ ವೈಮಾನಿಕ ಸಂಪರ್ಕ ಹೆಚ್ಚಿಸಲು ಸರ್ಕಾರ ಯತ್ನಿಸುತ್ತಿದೆ. ವಿಮಾನ ಹಾರಾಟ ಮಾಡುವ ಸಮಯ ಮತ್ತು ಅದಕ್ಕೆ ಸಂಬಂಧಿಸಿದ ಘೋಷಣೆಗಳನ್ನು ನಿಲ್ದಾಣದಲ್ಲಿ  ಸ್ಥಳೀಯ ಭಾಷೆಯಲ್ಲೂ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೇ ಇತ್ತು. ಈ ಸಂಬಂಧ ನಾಗರೀಕ ವಿಮಾನ ಯಾನ ಸಚಿವಾಲಯ ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ. 
    ಸದ್ಯದಲ್ಲಿ ಉತ್ತರ ಭಾರತದಲ್ಲಿರುವ ಏರ್‍ಫೋರ್ಟ್‍ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಘೋಷಣೆಗಳನ್ನು ಮಾಡುತ್ತಾರೆ. ದಕ್ಷಿಣ ಭಾರತದ ಕೆಲ ಏರ್‍ಪೋರ್ಟ್‍ಗಳಲ್ಲಿ ಹಿಂದಿ-ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆ ಉಪಯೋಗಿಸಲಾಗುತ್ತಿದೆ. ಆದರೆ ಸ್ಥಳೀಯ ಭಾಷೆಯ ಘೋಷಣೆ ಕಡ್ಡಾಯವಾಗು ಸಂದರ್ಭ ಇದೀಗ ಒದಗಿ ಬಂದಿದೆ. ಭಾರತದಲ್ಲಿ 65 ವಿಮಾನ ನಿಲ್ದಾಣಗಳಲ್ಲಿ ದೇಶಿಯ ಮಾರ್ಗದ ವಿಮಾನಗಳು ಹಾರಾಟ ನಡೆಸುತ್ತಿವೆ. ಸ್ಥಳೀಯ ಭಾಷೆಯಲ್ಲಿ ಘೋಷಣೆ ಬೇಕೆಂದು ಅನೇಕ ಪ್ರಯಾಣಿಕರು ನಾಗರೀಕ ವಿಮಾನ ಇಲಾಖೆಗೆ ಒತ್ತಾಯಿಸಿದ್ದರು.
   ಕಳೆದ ಜನವರಿ-ಏಪ್ರಿಲ್‍ನಲ್ಲಿ ದೇಶಿಯ ಏರ್ ಲೈನ್ ವಲಯದಲ್ಲಿ 23.29 ಪರ್ಸೆಂಟ್ ಬೆಳವಣಿಗೆ ದಾಖಲಾಗಿತ್ತು. ಸಣ್ಣ ಪುಟ್ಟ ಪಟ್ಟಣಗಳಿಂದಲೂ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸ್ಥಳೀಯ ಭಾಷೆಯನ್ನು ಬಳಸುವುದು ಅನಿವಾರ್ಯವಾಗುತ್ತಿದೆ. ಭಾರತದಲ್ಲಿ 400 ಮೀಟರ್‍ನಿಂದ 1 ಕಿ.ಮೀ ತನಕದ ರನ್ ವೇ ಇರುವ ವಿಮಾನ ನಿಲ್ದಾಣಗಳಿವೆ. ಇವುಗಳು ಭಾಗಶಃ ಸಕ್ರಿಯವಾಗಿವೆ. ಇವುಗಳ ಪೈಕಿ 10 ಏರ್ ಪೋರ್ಟ್‍ಗಳಿಗೆ ಪ್ರಸಕ್ತ ಸಾಲಿನಲ್ಲಿ ಕಾಯಕಲ್ಪ ನೀಡಲು ನಿರ್ಧರಿಸಿದ್ದಾರೆ. 
    ಅಂತೂ ಇಂತು ಪ್ರಾದೇಶಿಕ ಭಾಷೆಗಳಿಗೆ ಒಂದೊಳ್ಳೆ ಕಾಲ ಬಂದಿದೆ. ಅಳಿವಿನ ಅಂಚಿಗೆ ಸೇರುತ್ತಿದ್ದ ಭಾಷೆಗಳು ದೊಡ್ಡವರ ಅಂಗಳದಲ್ಲಿ ಬೆಳಗಲಿವೆ. ಇನ್ನೂ ಮುಂದೆಯಾದರು ಪ್ರಾದೇಶಿಕ ಭಾಷೆಯನ್ನ ಉಳಿಸುವತ್ತ ಸರ್ಕಾರಗಳು ಗಮನ ಹರಿಸಲಿ. ಇದು ಕನ್ನಡ ಭಾಷೆಗೆ ಎಷ್ಟರ ಮಟ್ಟಿಗೆ ಅನುಕೂಲವಾದಿತು ಎಂಬುದು ಪ್ರಶ್ನೆ ಯಾದರೆ, ಇಲ್ಲಿಯಾದರೂ ಉಳಿಯಲಿ ಅನ್ನುವುದು ನಮ್ಮವರ ಆಶಯ.


ಮಂಜುನಾಥ ಹೆಚ್.ಆರ್
email : manjunathahr1991@gmail.com

Saturday 21 May 2016

ಇವನೊಬ್ಬ ಫೀಲಿಂಗ್ ಸ್ನೇಹಿತ


   

ನಮಗೆ ನೋವಾದಾಗ ಅಥವಾ ತುಂಬಾ ಖುಷಿಯಾದಗ ಯಾರ ಬಳಿಯಾದ್ರೂ ಹೇಳಿಕೊಳ್ಳಬೇಕು, ಅಂತ ಅನ್ಸುತ್ತೆ ಆದ್ರೆ ಯಾರ ಹತ್ರನ್ನೂ ಹೇಳಿಕೊಳ್ಳಲಾಗದ ಮನಸ್ಥಿತಿ, ಯಾರಾದ್ರು ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ತಾರೇನೋ, ನಮ್ಮ ಮೇಲೆ ತಪ್ಪು ಭಾವನೆ ಮೂಡಬಹುದೇನು ಎಂಬ ತಳಮಳ ಮನದೊಳಗೆ. ಇಂತ ಕಷ್ಟ ಪರಿಸ್ಥಿಯಲ್ಲಿ ಅಪತ್ಬಾಂವನಂತೆ ಕಾಣುವವನೇ ವಾಟ್ಸ್ ಆಪ್. ಇವನೊಬ್ಬ ಇದ್ರೆ ಸಾಕು ಯಾರು ಬೇಡ, ಏನು ಬೇಡ.
   ಇಫ್ ಯು ಗೆಟ್ ಎ ಗುಡ್ ವೈಫ್ ಯು ವಿಲ್ ಬಿ ಹ್ಯಾಪಿ,  ಇಪ್ ಯು ಗೆಟ್ ಎ ಬ್ಯಾಡ್ ಒನ್ ಯು ವಿಲ್ ಬಿಕಮ್ ಫಿಲೋಸಫರ್, ಇಂತ ಸ್ಟೇಟಸ್ ಮದುವೆಯಾದ ಅನುಭವಿ ಗಂಡದೀರ ಮನದಾಳದ ಮಾತು, ಐ ಆಮ್ ವೈಟಿಂಗ್, ಅಂತ ಕೆಲವರು ಹಾಕಿಕೊಂಡಿರ್ತಾರೆ. ಅವರ ಗರ್ಲ್ ಫ್ರಂಡ್‍ಗೋಸ್ಕರ ವೈಟ್ ಮಾಡ್ತಿದರೂ ಅಥವಾ ಜೀವನದ ಒಳ್ಳೆ ಅವಕಾಶಕ್ಕಾಗಿ ಕಾಯ್ತಾ ಇರ್ತಾರೋ ಗೊತ್ತಿಲ್ಲ ಒಟ್ಟಿನಲ್ಲಿ ಜೀವನವೆಲ್ಲಾ ವೈಟ್ ಮಾಡ್ತಾನೇ ಇರ್ತಾರೆ. ಮೈ ಆಟಿಟ್ಯೂಡ್ ಇಸ್ ಮೈ ಐಡೆಂಟಿಟಿ, ಇದು ಅವರ ಬಗ್ಗೆ ಇರುವ ಹೋಫ್ ಅಂತಾನೇ ಹೇಳ್ಬೋದು. ಇನ್ ಮೈ ಡ್ರೀಮ್ಸ್ ಯು ಆರ್ ಮೈ ಲೈಫ್, ಭಟ್, ಇನ್ ಮೈ ಲೈಫ್ ಯು ಆರ್ ಎ ಡ್ರೀಮ್,  ಇದು ಬೇರೆಯವರ ಬಗ್ಗೆ ಆದ್ರೆ, ಮೈ ಬ್ಯೂಟಿಫುಲ್ ಫ್ಯಾಮೀಲಿ, ಮೈ ಕ್ಯೂಟ್ ಹೌಸ್, ಮೈ ಸ್ವೀಟ್ ಡಾಟರ್, ಸನ್. ಇವೆಲ್ಲಾ ಮತ್ತೊಬ್ಬರಿಗೆ ತಮ್ಮ ಬಗ್ಗೆ ತಾವೇ ಪರಿಚಯ ಮಾಡಿಕೊಳ್ಳುವಂತೆ ಮಾಡುತ್ವೆ.
   ವಾಟ್ಸ್ ಆಫ್ ಲವ್, ಸೆಂಟಿಮೆಂಟ್, ಅಲ್ಲದೆ, ಕೋಪ, ಅಸಹನೆ, ಸ್ವಾಭಿಮಾನದ ಸಾಲುಗಳಿಗೆ ವೇದಿಕೆಯನ್ನ ಒದಗಿದುಸುತ್ತೆ. ಅಲ್ಲಿ ಬೇರೆಯವರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಭಯವಾಗಲಿ, ಮತ್ತೊಬ್ಬರ ಮನಸ್ಸಿಗೆ ನೋವಾಗುವಂತ ಸನ್ನಿವೇಶವಾಗಲಿ ಉಂಟಾಗುವುದಿಲ್ಲ. ಇತ್ತೀಚೆಗೆ ಆತ್ಮೀಯ ಗೆಳೆಯನಾಗಿದ್ದಾನೆ. ನಮ್ಮ ಭಾವನೆ, ಈಗಿರುವ ಮನಸ್ಥಿತಿ ಎಲ್ಲವನ್ನು ಬೇರೆಯವರಿಗೆ ತೋರಿಸುತ್ತಾನೆ ವಾಟ್ಸ್ ಆಫ್ ಗೆಳೆಯ. ಕೋಪವನ್ನು ಇದರ ಮೂಲಕ ವ್ಯಕ್ತಪಡಿಸಿ ತಮಗೆ ತಾವೇ ಸಮಾದಾನ ತಂದುಕೊಳುವಂತಹ ಮನಸ್ಥಿತಿಯನ್ನ ತಂದುಕೊಳ್ಳುವತ್ತಾ ಇಂದಿನ ಮಂದಿ ಮುನ್ನಡೆದಿದ್ದಾರೆ. ಯಾರಿಗೂ ಬೇಡ ಯಾವುದಕ್ಕೂ ಬೇಡ ಎನ್ನುವವರು ಶಾಟ್ ಲೈನ್ ಬರೆದುಕೊಂಡು ಸುಮ್ಮನಿದ್ದರೆ ಸಾಕು. ಯಾರಿಗೆ ಏನು ತಲುಪಬೇಕು ಅದು ತಲುಪುತ್ತದೆ. ತಲುಪೇ ತಲುಪುತ್ತದೆ ಅನ್ನೋ ಮೊಂಡ ಭರವಸೆ ಅಂತೂ ಇದ್ದೇ ಇರುತ್ತದೆ.
ಮಂಜುನಾಥ ಹೆಚ್.ಆರ್
manjunathahr1991@gmail.com

ವಿಶ್ವ ಮಾನವ ಗೀತೆ ಹುಡುಕಲು ಹೊರಟಾಗ..........


Saturday 14 May 2016

ನೂರು ಕದನಗಳ ಸಿಂಹ

ನೆಪೋಲಿಯನ್ ಬೊನಪಾರ್ಟೆ



   ನೆಪೋಲಿಯನ್ ಕಾರ್ಸಿಕಾ ದ್ವೀಪದ ಅಜಾಶಿಯೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು. ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ನೆಪೋಲೆಯೋನ್ ದಿ ಬೋನೋಪಾರ್ಟೆಎಂದು ಹೆಸರಿಟ್ಟಿದ್ದರು. ಇವನ ತಂದೆ ಕಾರ್ಲೋ ಬೊನಪಾರ್ಟೆ ಫ್ರೆಂಚ್ ರಾಜ ೧೬ ಲೂಯಿಸ್ನ ಅರಮನೆಯಲ್ಲಿ ಕಾರ್ಸಿಕಾ ದ್ವೀಪದ ಪ್ರತಿನಿಧಿಯಾಗಿದ್ದರು.
   1779 ರಲ್ಲಿ 9 ವರ್ಷದ ನೆಪೋಲಿಯನ್ ಸೈನ್ಯವನ್ನು ಸೇರಿದ. 1789ರ ಫ್ರೆಂಚ್ ಕ್ರಾಂತಿ ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು. 1793ರ "ಸೀಜ್ ಆಫ್ ಟೂಲನ್" ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು. ೫ ಅಕ್ಟೋಬರ್ 1795ರಲ್ಲಿ "13 ವೆಂಡೆಮಿಯರ್"ರಲ್ಲಿ ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.
  ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನರಲ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೂದಲಿಸುತ್ತಿದ್ದರು. ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ. ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಡಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ತೋರಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ. ಸಿಕ್ಕ ಈ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ.
   ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಗಣಿಸುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವದವನಲ್ಲದೇ ಆಗಾಗ ಹಸನ್ಮುಖಿಯಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ. 
   ಆಗ ಅವನು ನೇತೃತ್ವ ವಹಿಸಿಕೊಂಡಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು. ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು.
   ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಮೊದಲಾದ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು.
  ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು. ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
  ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – ಸೈನಿಕರೇ, ನಿಮ್ಮ ಹೊಟ್ಟೆ ಅರ್ಧ ಹಸಿದಿದೆ, ಸರ್ಕಾರ ನಿಮಗೆ ಸಾಕಷ್ಟು ಅನುಕೂಲಗಳನ್ನು ಇನ್ನೂ ಮಾಡಿಕೊಡಬೇಕಿದೆ, ಆದರೆ ಅದಕ್ಕೆ ಏನೂ ಮಾಡಲಾಗುತ್ತಿಲ್ಲ. ನಿಮ್ಮ ತಾಳ್ಮೆ ಧೈರ್ಯ ನಿಮಗೆ ಗೌರವ ನೀಡುತ್ತಿದೆ. ಆದರೆ ಯಾವ ವೈಭವ ಅಥವಾ ಉಪಯೋಗ ಅದರಿಂದಾಗುವುದಿಲ್ಲ ್ಲ. ನಾನು ನಿಮ್ಮನ್ನು ಪ್ರಪಂಚದ ಸಂವೃದ್ಧ ಪ್ರದೇಶದ ಕಡೆಗೆ ಮುನ್ನಡೆಸುತ್ತೇನೆ.  ಅಲ್ಲಿ ನೀವು ಪ್ರವರ್ಧಮಾನಕ್ಕೆ ಬರುತ್ತಿರುವ ನರಗಳು, ಕಳೆದು ಹೋಗುತ್ತಿರುವ ಪ್ರಾಂತ್ಯಗಳನ್ನು ಕಾಣುವಿರಿ. ಅಲ್ಲಿ ನೀವು ಗೌರವ ಮತ್ತು ವೈಭವದ ಸಂಪತ್ತಿನ ಬೆಳೆಯನ್ನು ಕೊಯ್ಲು ಮಾಡಬಹುದು. ಇಟಲಿಯ ಸೈನ್ಯದ ಸೈನಿಕರೇ ಭದ್ರತೆ ಮತ್ತು ಧೈರ್ಯವನ್ನು ಬಯಸುವುದಾದರೆ ಬನ್ನಿ.
    ನೆಪೋಲಿಯನ್ನಿನ ಈ ಮಾತುಗಳಿಗೆ ಕೇವಲ ನೀರಸ ಪ್ರತಿಕ್ರಿಯೆ ಇರುತಿತ್ತು. ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – 
ನೀವು ನನ್ನಿಂದ ಪವಾಡವನ್ನು ನಿರೀಕ್ಷಿಸಿದ್ದೀರಿ, ಆದರೆ ನಾನದನ್ನು ಮಾಡಲಾಗುವುದಿಲ್ಲ. ವಿವೇಕ ಮತ್ತು ಮುಂದಾಲೋಚನೆಯೊಂದಿಗೆ ಮಹತ್ತರವಾದುದನ್ನು ಸಾಧಿಸಬಹುದು. ಆದರೆ ಅದು ಯಶಸ್ಸಿನಿಂದ ಪರಾಭವದ ಕಡೆಗಿನ ನಡೆಯಾಗುತ್ತದೆ. ವ್ಯಾವಹಾರಿಕ ಅನುಭವದ ಪರಿಮಾಣದಿಂದ ನಾನು ಅರಿತಿರುವುದೇನೆಂದರೆ ಅಂತ್ಯೋಪಾಯದ ಎಲ್ಲವೂ ಏಕರೂಪವಾಗಿ ಕೆಲಸಕ್ಕೆ ಬಾರದ ವಸ್ತುವಿನ ಕಡೆ ತಿರುಗುತ್ತದೆ.
    ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ. ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ. ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60,000 ಬಲದ ಸೇನೆ. ಅದರಲ್ಲಿ 25,000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35,000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . 
    ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ.
   ನೆಪೋಲಿಯನ್ ಮತ್ತೆ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ. ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು. ಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿನಂದಿಸಿದ.
  ನೆಪೋಲಿಯನ್ನನ ಮಿಂಚಿನ ಆಕ್ರಮಣಕ್ಕೆ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು. ಅದ್ಯಾರೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳ್ಳೆಯದೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು. ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ಮತ್ತೂ ಇನ್ನೂ ಮುಂದೆ ತಲುಪಿದ. ಆಸ್ಟ್ರಿಯಾದ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .
   ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು. ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ. ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯ ತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ. ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು. 
  ಈ ಹೋರಾಟದ ನಡುವೆ ನಪೋಲಿಯನ್ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ. ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ. ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ. ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು. ಆಗಿನ್ನೂ ಅವನಿಗೆ ಕೇವಲ 28 ವಯಸ್ಸು, ಚಕ್ರವರ್ತಿಯೂ ಆಗಿರಲಿಲ್ಲ ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ.
   ಅಕ್ಟೋಬರ್ 1799ರಲ್ಲಿ ನೆಪೋಲಿಯನ್ ಯುದ್ಧಗಳ ಗೆಲುವಿನ ನಂತರ ಪ್ಯಾರಿಸ್ಗೆ ವಾಪಾಸ್ ಬಂದನು. ಆ ಸಮಯದಲ್ಲಿ ಪ್ರಾನ್ಸ್ನ ವ್ಯೆವಸ್ಥೆ ಸರಿಯಾಗಿರಲಿಲ್ಲ.  ಫ್ರೆಂಚ್ ಕ್ರಾಂತಿಯಾದ ಮೇಲೆ ಬಂದ ಜಾಕೊಬಿನ್ ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ಡೈರೆಕ್ಟರಿಗಳು ಜಗಳವಾಡುತ್ತಿದ್ದರು. ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು.
  2 ನೆ ಡಿಸಂಬರ್ 1804ರಲ್ಲಿ ಗ್ರಾಂಡ್ ಕೊರೋನೇಷನ್ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ ಪ್ರಾನ್ಸ್ ಚಕ್ರವರ್ತಿಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.
ಇಡೀ ಫ್ರಾನ್ಸ್ ದೇಶದಲ್ಲಿ ಇವನ ಆಳ್ವಿಕೆಯಲ್ಲಿ ಕಾನೂನು ಕೋಡ್ ಮಾಡಿದ್ದನು. ಇದೇ ನೆಪೋಲಿಯನಿಕ್ ಕೋಡ್. ಇದರಲ್ಲಿ ಸಮಾನತೆ, ಜಾತ್ಯಾತೀತ ಮುಂತಾದ ಸರ್ಕಾರವನ್ನು ರೂಪಿಸಿದ್ದನು. ಆದರೆ ಫ್ರೆಂಚ್ ಕ್ರಾಂತಿಯು ಮಹಿಳೆಯರಿಗೆ ತಂದು ಕೊಟ್ಟ ಹಕ್ಕುಗಳನ್ನು ನೆಪೋಲಿಯನ್ ತೆಗೆದುಹಾಕಿದನು.
1. ಧಾರ್ಮಿಕ ಸುಧಾರಣೆಗಳು-1801 ರಲ್ಲಿ ಕೊಂಕೋರ್ಡಟ್ನಲ್ಲಿ ಕತೋಲಿಕ್ ಗಳ ಜತೆ ಶಾಂತಿ ಮಾಡಿದನು.
2. ಆರ್ಥಿಕ ಸುಧಾರಣೆ-ಆರ್ಥಿಕತೆಯನ್ನು ಹೆಚ್ಚಿಸಲು ನೆಪೋಲಿಯನ್ ಹೊಸ ಕೈಗಾರಿಕಾ ಉದ್ಯಮವನ್ನು ಬೆಂಬಲಿಸಿದನು.
3. ಲೋಕೋಪಯೋಗಿ- ರಸ್ತೆಗಳನ್ನು ಹಾಗು ನೀರಿನ ಕೊಡ್ಲುಗಳನ್ನು ತಯಾರಿಸಿ ಜನರಿಗೆ ಸಹಾಯ ಮಾಡಿದನು. ಶಿಕ್ಷಣದಲ್ಲು ಸುಶಾರಣೆಯನ್ನು ತಂದ ಇವನು ಶಾಲೆಗಳನ್ನು ಸರ್ಕಾರದ ಕೆಳಗೆ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಬರುವಹಾಗೆ ಮಾಡಿದನು.ಹಾಗೆಯೆ ಇಡೀ ಫ್ರಾನ್ಸ್ನಲ್ಲಿ ಏಕಪ್ರಕಾರದ ಅಳತೆ ಸಾಧನವನ್ನು ತಂದನು.
4. ಯುದ್ಧ ಸುಧಾರಣೆ-ಯುದ್ಧ ತಂತ್ರಜ್ಞಾನ, ಸೇನಾ ನಡೆಸುವಿಕೆ ಹಾಗು ಆಯುಧ ವಿಜ್ಞಾನಕ್ಕೆ ಫ್ರಾನ್ಸ್ನಲ್ಲಿ ಇವನದ್ದೆ ಹೆಸರು.
ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಇದರಂತೆ 1805ರಲ್ಲಿ ಆಸ್ತರ್ಲಿಟ್ಜಿ ಯುದ್ಧದಲ್ಲಿ ಆಸ್ಟ್ರಿಯ ಮತ್ತು ರಷ್ಯಾ ಸೈನ್ಯಗಳನ್ನು ಸೋಲಿಸಿ, 1806ರಲ್ಲಿ ಜೇನ ಎಂಬ ಊರಿನಲ್ಲಿ ಪ್ರಷ್ಯಾ ಸೈನ್ಯವನ್ನು ಮುಳುಗಿಸಿದನು. ಅದೇ ವರ್ಷದಲ್ಲಿ ಡಚ್ ರಾಜ್ಯವನ್ನು ಗೆದ್ದು ಗ್ರಾಂಡ್ ಎಂಪೈರ್ ಸೃಷ್ಟಿಸಿದನು.
    ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು. ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ಕಂಡ ಇದರಿಂದಾಗಿ ಇವನನ್ನು ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾನ್ಸ್ಗೆವಾಪಸ್ ಬಂದನು. ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು.  ನೂರು ಕದನಗಳ ಸಿಂಹ ಎಂಬ ಹೆಸರನ್ನು ಪಡೆದ ತನ್ನ ಪ್ರಪಂಚ ಗೆಲ್ಲುವ ಕನಸಿಗೆ ತಡೆಗೋಡೆಯಾಗಿದ್ದು ವಾಟರ್ಲೂ ಕದನ. ಇವನು ಅನುಭವಿಸಿದ ಮತ್ತೊಮ್ಮೆ ಸೋಲಿನಿಂದಾಗಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡಲಾಗುತ್ತೆ. ಇದೇ ಅವನ ಕೊನೆಯ ಯುದ್ಧವಾಗಿತ್ತು.
ನೆಪೋಲಿಯನ್ ಇನ್ನೈದು ವರ್ಷಗಳನ್ನು ಹೆಲೆನ ದ್ವೀಪದಲ್ಲೆ ಕಳೆದನು. ಇವನ ಆರೊಗ್ಯ ಅಸ್ಥಿರವಾಗಿದ್ದು ಟ್ಯೂಬರ್ಕ್ಯುಲೋಸಿಸ್ ಹಾಗು ಲಿವರ್ ತೊಂದರೆಗಳು ಅಂಟಿತ್ತು. ಮೇ 5 1821ರಂದು ಹೊಟ್ಟೆಯ ಕಾನ್ಸರ್ದಿಂದಾಗಿ ನೆಪೋಲಿಯನ್ ವಿಧಿವಶನಾದನು. 
   ಆದರೆ ಇಂದಿಗೂ ಇವನ ಸಾವಿನ ಕಾರಣ ವಿವಾದಾಸ್ಪದವಾಗಿದ್ದು ನಿಗೂಡ ಎನಿಸುತ್ತದೆ.ಕೆಲವರು ನೆಪೋಲಿಯನ್ ಸತ್ತಿದ್ದು ಕಾನ್ಸರ್ದಿಂದಾಗಿ ಎಂದರೆ. ಕೆಲವರು ಅವನನ್ನು ಅರ್ಸೆನಿಕ್ ವಿಷದಿಂದ ಸಾಯಿಸಿದ್ದು ಎನ್ನುತ್ತಾರೆ. ಇಂದಿಗೂ ಫ್ರಾನ್ಸ್ ದೇಶ ನೆಪೋಲಿಯನ್ ದಿನಗಳ ಬಗ್ಗೆ ಹೆಮ್ಮೆ ಪಡುತ್ತದೆ. ಇವನ ನೆಪೋಲಿಯನಿಕ್ ಕೋಡ್ ಈಗಿನ ಫ್ರೆಂಚ್ ಸಂವಿಧಾನವನ್ನು ರೂಪಿಸುತ್ತದೆ. ಆಯುಧ ವಿಜ್ಞಾನ, ಸೇನಾ ನಡವಳಿಕೆ, ಯುದ್ಧ ತಂತ್ರಜ್ಞಾನ ಈಗಲು ಬಳಿಕೆಯಲ್ಲಿದೆ. ವಿಶ್ವದ ಅಡಿಯಲ್ಲಿ ನೆಪೋಲಿಯನ್ ತನ್ನ ನಡತೆಯಿಂದ ಜನರ ಮನಗಳನ್ನು ಗೆದ್ದು, ಅವರಲ್ಲಿ ಮಹತ್ತರ ಬದಲಾವಣೆಯ ಕಲ್ಪನೆಯನ್ನು ಹಾಕಿದನು. ನೆಪೋಲಿಯನ್ ಇಡೀ ವಿಶ್ವವನ್ನು ಗೆಲ್ಲಲಿಕ್ಕಾಗದಿದ್ದರು, ಯುರೋಪ್ ಜನರಲ್ಲಿ ದೇಶಭಕ್ತಿ ಮನೋಭಾವನೆಯನ್ನು ರೋಪಿಸಿದ್ದಾನೆ.
     1796ರಲ್ಲಿ ನೆಪೋಲಿಯನ್ ಜೋಸೆಫೈನ್ಳನ್ನು ಮದುವೆಯಾದನು. ಜೋಸೆಫೈನ್ ಗೆ ಮಕ್ಕಳಿಲ್ಲದ ಕಾರಣ ೧೮೧೦ರಲ್ಲಿ ಮೇರಿ ಲುಯಿಸಿಳನ್ನು ಮದುವೆಯಾದನು. ಇವರಿಬ್ಬರಿಗೆ ನೆಪೋಲಿಯನ್ ಚಾರ್ಲೆಸ್ ಎಂಬ ಮಗನು ಹುಟ್ಟಿದನು. ಅವನು ಮುಂದೆ ನೆಪೋಲಿಯನ್-೨ ಎಂದು ಪ್ರಸಿದ್ಧಿಯಾದನು.
     ನೆಪೋಲಿಯನ್ ಮತ್ತು ಕರುನಾಡಿಗೂ ನಂಟಿರುವುದನ್ನು ಕಾಣಬಹುದು. ನೆಪೋಲಿಯನ್ ಮತ್ತು ಮೈಸೂರಿನ ಹುಲಿ ಟಿಪ್ಪುಸುಲ್ತಾನನ ನಡುವೆ ಸ್ನೇಹ ವಿತ್ತು ಅನ್ನೋದು ಒಂದಂಶದಿಂದ ತಿಳಿದು ಬರುತ್ತೆ. ಬ್ರೀಟೀಷರನ್ನು ಹೊಡೆದೋಡಿಸಬೇಕು ಎಂಬ ದೃಡ ಸಂಕಲ್ಪ ಮಾಡಿದ್ದ ಟಿಪ್ಪು ನೆಪೋಲಿಯನ್ ನ್ನನ ಸಹಾಯ ಯಾಚಿಸಿದ್ದ. ವಿಧಿಯಾಟವೆಂಬಂತೆ ಆ ಸಮಯದಲ್ಲಿ ಫ್ರಾನ್ಸಿನ ಸೈನ್ಯ ಆತಂಕದಲ್ಲಿದ್ದ ಕಾರಣ ನೆಪೋಲಿಯನ್ ಬರುವೆನೆಂದು ಮಾತುಕೊಟ್ಟು ನಂತರ ನಿರಾಕರಿಸಿದ್ರು. ಇದು ನಡೆದ್ದು ಹದಿನೆಂಟನೆಯ ಶತಮಾನದಲ್ಲಿ ಬಹುಶಃ ಅಂದು ನೆಪೋಲಿಯನ್ ಟಿಪ್ಪುವಿಗೆ ಸಹಾಯ ಹಸ್ತ ಚಾಚಿದ್ರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಮೊದಲೇ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಮಂಜುನಾಥ್ ಹೆಚ್.ಆರ್
Mail : m


anjunathahr1991@gmail.com

Thursday 12 May 2016

ಕೋಪ


   ಕೆಲವರಿಗೆ ತಮ್ಮ ಬಗ್ಗೆ ತಿಳಿದುಕೊಳ್ಳುವ ಕುತುಹಲ ಮತ್ತೆ ಕೆಲವರಿಗೆ ಅದರಿಂದಾಗುವ ಪ್ರಯೋಜನವೇನಿಲ್ಲ ಎಂಬ ಜಂಬದ  ಮಾತು. ಇವರೆಡರ ಮಧ್ಯೆ ತಮ್ಮ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳುವ ತವಕ ಕುತೂಹಲ. ಇದರ ಪಟ್ಟಿಗೆ ಸೇರಿದವನು ಮೋಹನ್. ತುಂಬಾ ನೀಟ್, ಕಬ್ಬು ಕತ್ತರಿಸಿದಂತೆ ಮಾತು, ಈ ಕೆಲಸ ಹೀಗೆ ಆಗಬೇಕಂದರೆ ಅದು ಆ ಕ್ಷಣದಲ್ಲೇ ಆಗಬೇಕು. ಸ್ವಲ್ಪ ಲೇಟಾಯಿತೆಂದರೆ ಅವನ ಮುಖದಲ್ಲಿ ಆಗುವಂತ ಬದಲಾವಣೆ ಉಹೆ ಮಾಡುವುದಕ್ಕೂ ಆಗುವುದಿಲ್ಲ. ಮೂಗಿನ ತುದಿಯ ಮೇಲಿರುವ ಕೋಪ.
  ಹುಡುಗರ ಅಡ್ಡ ಸೋಮಾರಿ ಕಟ್ಟೆಯ ಮೇಲೆ ಕುಳಿತು ಮಾತನಾಡುವಾಗ ಆ ದಿನ ಮೋಹನ್ ಖುಷಿಯಾಗಿ ಇದ್ದ, ಇದೇ ಸಮಯ ಒಳ್ಳೆಯದೆಂದು ಜೀವಾ, ಮಗಾ ನಿನಗೊಂದು ಮಾತು ಹೇಳ್ತಿನಿ  ಬೇಜಾರು ಮಾಡ್ಕೊಬೇಡ, ನಿನ್ನತ್ರ ಎಂತ ಬೇಜಾರು ಹೇಳು ಮಗಾ, ಮೊದಲು ನಿನ್ನ ಕೋಪನ ಕಡಿಮೆ ಮಾಡ್ಕೊ, ಮೋಹನನಿಗೆ ಫುಲ್ ಶಾಕ್, ಏನಪ್ಪ ಇವನು ನನ್ನ ಬಗ್ಗೆ ಈ ರೀತಿ ಹೇಳತಿದನಲ್ಲ. ಯಾಕೆಂದ್ರೆ ಜೀವಾ ಇಂದು ನೆನ್ನೆ ಫ್ರಂಡ್ ಆದವನಲ್ಲ ಬಾಲ್ಯದಿಂದಲೇ ಒಟ್ಟಿಗೆ ಆಡಿ ಬೆಳೆದವರು. ನಾನೆಂದು ಇವನಿಂದ ಇಂತ ಮಾತನ್ನು ಬಯಸಿರಲಿಲ್ಲ ಅನ್ನೊ ಸಾಲು ಮನದೊಳಗೆ ಗಿರಕಿ ಹೊಡೆಯುತ್ತಿತ್ತು.
ಅದಕ್ಕೂ ಒಂದು ಕಾರಣ ಇದೆ. ಇದುವರೆಗೂ ಮೋಹನನ ಹತ್ತಿರದಿಂದ ಬಲ್ಲವರು, ಅವನ ಗೆಳೆತನವನ್ನು ಮಾಡಿದವರು ಮೋಹನ್ ಒಬ್ಬ ಇನೊಸೆಂಟ್, ಸೈಲೆಂಟ್, ಕೊಪನೇ ಮಾಡ್ಕೊಳದಿಲ್ಲ ಇವನ ಹಾಗೆ ನಮಗೆ ಇರೋದಕ್ಕೆ ಆಗಲ್ಲವಲ್ಲ ಅನ್ನೋ ಮಾತುಗಳೆ ಕೇಳುತ್ತಿದ್ದ ಇನನಿಗೆ ಇದೊಂದು ಹೊಸದು ಅನ್ನಿಸಿಬಿಟ್ಟಿತ್ತು.
   ಮುಂಗೋಪವನ್ನು ಕಡಿಮೆ ಮಾಡಿಕೊಳ್ಳೋ ಅನ್ನು ಮಾತು ಕೇಳಿ ಮೋಹನ್ ಗೆ ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ, ನಿಧಾನವಾಗಿ ಯೋಚನೆ ಮಾಡಿದ, ಹಿಂದೆ ಕೆಲವರು ಅವನ ಗುಣದ ಬಗ್ಗೆ ಹೇಳಿದ್ದೆಲ್ಲ ನೆನಪಾಯಿತು. ಇರಬಹುದೇನೋ ಎನ್ನುವ ನಿದ್ರಾರಕ್ಕೆ ಬಂದ.
   ಅದು ಅವನ ಕುಟುಂಬದಿಂದ ಬಂದ ಬಳುವಳಿ, ಅಮ್ಮ ತುಂಬಾ ಸ್ಟ್ರಿಟ್, ಮನೆಯಲ್ಲಾಗಲಿ ಹೊರಗೆಯಾಗಲಿ, ನಿಟಾಗಿ ಇರ್ಬೇಕು ಅನ್ನೋದು ಅವರ ವಾದ, ಇದಕ್ಕೆ ಅಪ್ಪಾ ಏನು ಕಡಿಮೆ ಅಲ್ಲ ಶಿಸ್ತಿನಲ್ಲಿ ಅವರು ಒಂದು ಹೆಜ್ಜೆ ಮುಂದೇನೆ ಇರ್ತಾರೆ. ಆದ್ರೆ ಒಂದು ಅಮ್ಮನಿಗೆ ಕೋಪ ಜಾಸ್ತಿ, ಅಪ್ಪನಿಗೆ ತಾಳ್ಮೆ ಜಾಸ್ತಿ, ಇದರಿಂದಾಗಿ ಮೋಹನ್ ಬೇಗ ಕೋಪನು ಬರುತ್ತೆ ಅಷ್ಟೇ ಬೇಗ ತಾಳ್ಮೆನೂ ತಗೊತಾನೆ. ತಾಳ್ಮೆಗಿಂತ ಮುಂಗೋಪ ಇವನನ್ನ ಬಿಟ್ಟಿರಲಾರದೇನೋ ಅನ್ನಿಸಿ ಬಿಡುತ್ತೆ.
  ಮುಂಗೋಪದಿಂದಾಗಿ ಬಹಳ ತೊಂದರೆಗಳಿಗೆ ಒಳಗಾಗಿದ್ದ, ತುಂಬಾ ಆತ್ಮೀಯರನ್ನು ಕಳೆದುಕೊಂಡಿದ್ದಾ. ಜೀವಾನ ಮಾತನ್ನು ಸಮಾದಾನದಿಂದ ಕೇಳಿದ ಮೋಹನ್ ತನ್ನ ಬಗ್ಗೆ ಬೇರೆಯವರಲ್ಲಿ ಇರುವ ಅಭಿಪ್ರಾಯವನ್ನ ಪಡೆದುಕೊಂಡ. ಒಂದು ವೇಳೆ ಆಗ ಕೋಪ ಮಾಡಿಕೊಂಡಿದ್ದರೆ. ಜೀವನ ಬದಲಾಗುತ್ತಿರಲಿಲ್ಲ. ಜೀವವೇ ಬದಲಾಗುತ್ತಿತ್ತು.
  ಕೋಪ ಎಲ್ಲರಿಗೂ ಬರುತ್ತೆ ಅದನ್ನ ತಾಳ್ಮೆಗೆ ತೆಗೆದುಕೊಂಡು ನಡೆದರೆ ಜೀವನ ಸುಂದರ, ಸ್ವಲ್ಪ ಹೆಚ್ಚಾದರೆ ನರಕದ ದರುಶನ, ನಮಗೆ ಮಾತ್ರವೇ ಕೋಪ ಬರುವುದು ಎಂದು ಮಾತನಾಡುವವರು ಇದ್ದಾರೆ. ಅದು ಅವರ ದಡ್ಡತನ, ಕೋಪ ಬಂದರೆ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚೇ ಇರುತ್ತಾರೆ.
ಮಂಜುನಾಥ್ ಹೆಚ್.ಆರ್.
Gmail : manjunathahr1991@gmail.com

ಆತುರದ ಻ಅವಾತಂರಗಳು....

ವೃತ್ತಿ ಜೀವನದ ಮೊದಲ ಲೇಖನ ಸರಿಯೋ ತಪ್ಪೋ, ಬರೆಯಲೇ ಬೇಕೆಂದಾಗ ಸರಿ ತಪ್ಪುಗಳನ್ನು ತಿದ್ದಿದವರಿಗೆ ನನ್ನ ಕೃತಜ್ಞತೆ..........

Sunday 1 May 2016

ಅದೇ ಹದಿನೆಂಟನೇ ಪಾಠ - ಪ್ರೀತಿಯ ಕಾಟ


    ಕೆಲವು ಸಲ ಇಷ್ಟ ಪಟ್ಟು ಬರೆಯುವುದಕ್ಕಿಂತ ಕಷ್ಟ ಪಟ್ಟು ಬರೆಯಬೇಕಾಗುತ್ತೆ ಯಾಕೆ ಅಂತ ಗೊತ್ತಿಲ್ಲದೆ, ಯಾರಿಗೆ ಅಂತ ಹೇಳದೆ, ಕೈ ಹಿಡಿದ ಲೇಖನಿ ಒಂದೇ ಆಧಾರವಾಗಿ ನಿಂತಿರುತ್ತೆ. ಬಿಳಿಯ ಸ್ವಚ್ಚಂದ ಹಾಳೆಯ ಮೇಲೆ ಕಪ್ಪು ಮಸಿಯ ಆಲಿಂಗನ ಆಗುವಲ್ಲಿ. ಮನದೊಳಗೆ ಮುಚ್ಚಿಟ್ಟ ಮನದ ಭಾವನೆಯ ಗೂಡು ನಿಧಾನವಾಗಿ ತೆರೆದುಕೊಳ್ಳುತ್ತೆ. ಇದನ್ನು ಬರೆಯುವುದಕ್ಕೆ ಇಷ್ಟು ದಿನ ಬೇಕಾಯಿತಲ್ಲ ಅನ್ನುವುದು ಒಂದು ಕಡೆ, ಇಷ್ಟು ದಿನವಾದರು ಯಾಕೆ ಬರೆಯಲಿಲ್ಲ ಅನ್ನುವುದು ಮತ್ತೊಂದು ಕಡೆ. ಈಗಲಾದರೂ ಬರೆಯುತ್ತಿದ್ದೇನಲ್ಲ ಅನ್ನುವುದು ಒಳಗೊಳಗೆ ಸಂತೋಷದ ಖುಷಿಯ ಕಡೆಗೆ. ಪ್ರೀತಿಯ ಮೂಲೆಗೆ.
  ತಲೆಗೆ ಅರಳೆಣ್ಣೆ ಮೆತ್ತಿಕೊಂಡು, ಪಟ್ಟೆ ಪಟ್ಟೆ ಅಂಗಿ ತೊಟ್ಟ, ದೊಗಲೆಯ ಪ್ಯಾಂಟ್ ಸೇರಿಸಿಕೊಡು, ಸವೆಯಲು ಇನ್ನೇನು ಇಲ್ಲದ ಹಾವಾಯ್ ಚಪ್ಪಲಿಯ ಕಾಲಿಗೆ ಸಿಕ್ಕಿಸಿ ಓಡಾಡುತ್ತಿದ್ದವನಿಗೆ, ಆಕಸ್ಮಿಕವಾಗಿ ಪಿಯುಸಿ ಪಾಸ್ ಮಾಡಿಕೊಂಡು, ಫ್ಯಾಷನ್ ತನ್ನ ಉಸಿರಾಗಿಸಿಕೊಂಡು ತಿರುಗಾಡುವ ಕಾಂಕ್ಟ್ರಿ್ ನಗರಕ್ಕೆ ಕಾಲಿಟ್ಟರೆ ಹೇಗೆ ಆಗಬೇಡ. ಅಲ್ಲಿ ಏನು ಮಾಡಬೇಕು ಎಂದು ತೋಚದೆ. ಕಾಲೇಜಿನ ಮರ ಒರಗಿ ನಿಂತ್ತಿದ್ದೆ.
  ಅವಸರ ಅವಸರವಾಗಿ ಗುಳಿ ಕೆನ್ನೆಯ ಹುಡಿಗಿಯೊಬ್ಬಳು ಹತ್ತಿರ ಬಂದು ಕೆಮಿಸ್ಟ್ರಿ ಲ್ಯಾಬ್ ಯಾವ ಕಡೆ ಎಂದು ಹೇಳಿ, ಅವಳ ಮುಖವನ್ನೇ ನೋಡುತ್ತಿದ್ದ. ನನ್ನ ಮುಖವನ್ನು ನೋಡಿ. ಅವಳೇ ಮಾತನಾಡಿಕೊಳ್ಳುತ್ತಾ ಥ್ಯಾಂಕ್ಸ್ ಹೇಳಿ ಹೋದಳು. ಹಳ್ಳಿಯಲ್ಲಿ ದೆವ್ವ ಬಂದವರು ಬಿಡುವ ಹಾಗೆ ಕೂದಲು, ಅವರಪ್ಪ ಚಿಕ್ಕ ವಯಸ್ಸಿನವಳಾಗಿದ್ದಾಗ ತಂದಿದ್ದ ಟೀ ಶಟ್ರ್, ಹರಿದ ಬಟ್ಟೆ ಹಾಕುವ ಬಡವರಂತೆ ಹರಿದ ಜೀನ್ಸ್ ಪ್ಯಾಂಟ್ ಎಲ್ಲಾ ಹೊಸತರಲ್ಲಿ ಹೊಸತು.
  ಮರುದಿನ ಹತ್ತಿರ ಬಂದು ಅವಳೇ ಮಾತನಾಡಿಸುವಾಗ, ಗಂಟಲಿನಲ್ಲಿ ನೀರು ಹಿಂಗಿ ಹೋಗಿದ್ದು ಅವಳಿಂದಾಗಿಯೇ, ಅವಳ ಮಿಂಚಿನ ಕಣ್ಣಿನಿಂದಾಗಿಯೇ, ಬಯಸಿ ಬಂದ ಅವಳ ಸ್ನೇಹ ಬೇಡ ಎನ್ನಲು ಮನಸ್ಸಾಗದೇ ಅವಳನ್ನೇ ಹಿಂಬಾಲಿಸಿತ್ತು. ಅವಳ ನೋಡುತ್ತಾ ಬದಲಾಗಿದ್ದು, ನಾನು ನನ್ನ ಜೀವನ ಶೈಲಿ. ಬರು ಬರುತ್ತಾ ಬಿಟ್ಟಿರಲಾರದ ಸಂಬಂಧ. ಏನೆಂದು ಹೇಳಬೇಕು ಅವಳ ಚಂದ.
 ಸಾಲು ಸಾಲು ಮರ ಸುತ್ತುವ ಹಂಬಲ, ಕೆಳಬೇಕೆ ಅವಳ ಅನುಮತಿ, ತಿರಸ್ಕರಿಸಿದರೆ ಏನು ಮಾಡುವುದು, ಕಳೆದುಕೊಳ್ಳುವುದಕ್ಕಿಂತ. ಅವಳ ನೆನಪಿನಲ್ಲಿ ಕೊನೆಯವರೆಗೂ ಇರಲೇ. ಕೊನೆಯವರೆಗೂ ನನ್ನ ಮನದ ಒಡತಿ ಬರುವವರೆಗೂ.
ಮಂಜುನಾಥ್ ಹೆಚ್.ಆರ್.
Email : manjunathahr1991@gmil.com





Friday 22 April 2016

ಸಾವಿನ ಕದ ತಟ್ಟಿದಾಗಿನ ಆ ಕ್ಷಣ


    ಡಿಗ್ರಿ ಅಂದ್ರೆ, ಅಲ್ಲಿ ಎಂಜಾಯ್ ಮೆಂಟ್ ಗೆ ಏನು ಬರ ಇರೊದಿಲ್ಲ, ಕಾಲೇಜ್ ಪ್ರೋಗ್ರಾಂ, ಸಿಂಪಲ್ ಸೆಮಿನಾರಸ್, ಕಲರ್ ಫೂಲ್ ಕ್ಲಾಸ್ ರೂಮ್, ಬೋರಿಂಗ್ ಟಿಚಿಂಗ್, ಬೇಕಾ ಬಿಟ್ಟಿ ವಾಕಿಂಕ್. ಇವೆಲ್ಲ ಒಂದು ಭಾಗ ಅಂತ ಅಂದು ಕೊಳ್ಳದವರು ಸ್ಟೂಡೆಂಟೆ ಅಲ್ಲಾ. ಅನ್ನೋ ರೇಂಜಿಗೆ ಥಿಂಕ್ ಮಾಡೋ ಜಾಯಮಾನ ನಮ್ಮದು. ಅದನ್ನ ಬಿಟ್ಟು ಕೊಡದ ಮನಸ್ಸು, ಏನನ್ನು ಬೇಕಾದರೂ ಮಾಡೂ ಹುಮ್ಮಸ್ಸು ಆಗ ಇಲ್ಲಾ ಅಂದ್ರೆ ಹೇಗೆ.
   ಹೀಗೆ ಒಂದಿನ ಕಾಲೇಜಿಗೆ ಮಾಸ್ ಬಂಕ್ ಹೊಡೆದು ಸಿನಿಮಾಗೆ ಹೊಗೋಣ ಅಂಥ ಪ್ಲಾನ್ ಮಾಡಿಕೊಂಡು, ಕಾಲೇಜಿನ ಕಾಂಪೌಂಡ್ ಹಾರಿದ್ವಿ. ನಮಗೇನು ಅದು ಬಂಕ್ ಆಗಿರ್ಲಿಲ್ಲ ಯಾಕೆಂದ್ರೆ, ಕಾಲೇಜಿಕೆ ಅಪರೂಪಕ್ಕೆ ಹೋಗುವವರಿಗೆ, ಕ್ಲಾಸ್ ಗೆ ಹೋದ್ರೂ ಒಂದೇ ಹೋಗದೇ ಇದ್ರು ಒಂದೇ. ಕಾಂಪೌಂಡ್ ಹಾರಿದ್ದಕ್ಕು ಕಾರಣ ಇದೆ. ಸೋಶಿಯಾಲಜಿ ಲೆಚ್ಚರರ್ ಸ್ವಲ್ಪ ಸ್ಟ್ರಿಟ್ ಕಾಲೇಜಿಗೆ ಬರದೆ ಹೊರಗೆ ಹೋಗ್ತಿದರೆ ಅಂತ ಗೊತ್ತಾದರಂತೂ ಮುಗಿಯಿತೂ ಕಥೆ. ಯಾವೂದೋ ಓಬಿರಾಯನ ಕಾಲದ ಕಥೆಯನ್ನು ರಿವೈಮಡ್ ಮಾಡಿ ನಮ್ ಕಾಲದಲ್ಲಿ ಹಾಗೆ ಓದಿದ್ವಿ, ಆಗ ಹೀಗೆ ಇರ್ಲಿಲ್ಲ. ತಮ್ಮ ಮಾತಿನ ಚಾಟಿಯನ್ನು ಬೀಸುತ್ತ ಇದ್ರು. ಇವರಿಗೆ ಎದುರು ಮಾತನಾಡಲು ಭಯ ಅಂತ ಅಲ್ಲಾ, ಯಾರ ಮೇಲು ಇಲ್ಲದ ಗೌರವ, ಅಭಿಮಾನ, ಪ್ರೀತಿ ಶಂಕರಪ್ಪ ಸರ್ ಅಂದರೆ, ತಂದೆಯ ವಯಸ್ಸಿನವರಾದ ಇವರನ್ನು ಕಂಡರೆ ಎಲ್ಲಾ ಸ್ಟೂಡೆಂಟ್ಸ್ಗೂ ಒಂದೇ ರೀತಿಯ ಗೌರವ.
    ಕಾಂಪೌಂಡ್ ಹಾರಿ ಸಾಲು ಸಾಲಾಗಿ ಗೋಡೆಯನ್ನು ಒರಗಿಕೊಂಡು ಮೋರಿಯನ್ನು ನೆಗೆದು, ರೋಡನ್ನು ದಾಟಿ ಸಿಟಿಯ ಒಳಗೆ ಹೊರಟ್ವಿ. ಯಾವ ಥಿಯೇಟರ್ ಗೆ ಹೋಗ್ಬೇಕು, ಯಾವ ಸಿನಿಮಾವನ್ನು ನೋಡ್ಬೇಕು ಒಬ್ಬರಿಗೂ ಐಡಿಯಾ ಇಲ್ಲಾ, ಒಬ್ಬೋಬ್ಬರು ಒಂದೊಂದು ಸಿನಿಮಾ ಹೆಸರನ್ನು ಬಾಯಿಂದ ಒಗೆದರು. ಒಬ್ಬ ತೆಲುಗು ಸಿನಿಮಾ ಎಂದರೆ, ಮತ್ತೊಬ್ಬ ಹಿಂದಿ ಎನ್ನುತ್ತಾನೆ, ಇನ್ನೊಬ್ಬ ತಮಿಳು ಎನ್ನುತ್ತಾನೆ. ನಾನು ದೃಡವಾಗಿ ಇವತ್ತು ಕನ್ನಡ ಸಿನಿಮಾ ನೋಡಲೇ ಬೇಕೆಂದು ಒತ್ತಾಯಿಸಿದ ಮೇಲೆ ಎಲ್ಲರು ಒಪ್ಪಿ ತುಮಕೂರಿನ ದೊಡ್ಡ ಥಿಯೇಟರ್ ‘ಮಾರುತಿ ಥಿಯೇಟರ್’ ಬಳಿಗೆ ಸುತ್ತಾಡಿಕೊಂಡು ಬಂದೆವು.
   ಜನ ಕಡಿಮೆ ಇದ್ದರು ಹಾಗೇ ಸುಲಭವಾಗಿ ಟಿಕೇಟ್ ಕೂಡ ಸಿಕ್ಕಿತು. ಒಳಗೆ ಹೋದೆವು. ಕೈಬೆರಳಿನಿಂದ ಎಲ್ಲರನ್ನು ಎಣಿಸಬಹುದಿತ್ತು, ಅಷ್ಟು ಜನ ನಮ್ಮ ಕನ್ನಡ ಸಿನಿಮಾವನ್ನ ಉದ್ದಾರ ಮಾಡಲು ಬಂದಿದ್ದರು. ನಮ್ಮ ಬಂದು ಭಾಂದವರು ನಮ್ಮ ಗೆಳೆಯರು ಸಿನಿಮಾ ಆರಭವಾಗಿ 10 ನಿಮಿಷವಾಗಿತ್ತು ಅಷ್ಟೇ ಅಷ್ಟರಲ್ಲೇ ನನ್ನನ್ನು ಬೈದುಕೊಳ್ಳುವುದಕ್ಕೆ ಸ್ಟ್ರಾಟ್ ಮಾಡಿದ್ರು. ಯಾಕೆಂದರೆ ಅವರ ಆಲೋಚನೆಗೆ ತಕ್ಕನಾಗಿ ಸಿನಿಮಾ ಇಲ್ಲದ್ದು ಎಲ್ಲರಿಗೂ ಬೇಜಾರು ತರಿಸಿತ್ತು.
  ಅಂಗೂ ಇಂಗೋ ಸಿನಿಮಾ ನೋಡಿ, ಆಚೆ ಬಂದರು ಅವರ ಹೊಗಳಿಕೆ (ಬೈಗುಳ) ಇನ್ನೂ ನಿಂತಿರಲಿಲ್ಲ. ಅದೇ ಆಲೋಚನೆಯಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಹೈವೇ ಪಕ್ಕದಲ್ಲಿ ನಿದಾನವಾಗಿ ನಡೆದುಕೊಂಡು. ಹಿಂದಿನಿಂದ ಗೌರ್ನ್ ಮೆಂಟ್ ಬಸ್ಸೋಂದು ನಿಧಾನವಾಗಿ ನನ್ನ ಬೆನ್ನಿಗೆ ತಾಕಿತು. ನಿಧಾನವಾಗಿ ಹಿಂತಿರುಗಿ ನೋಡಿದ ತಕ್ಷಣ ಹೆದರಿ ಏನು ಮಾಡುತ್ತಿದ್ದೇನೆ, ಏನು ಮಾಡಬೇಕು ಎಂದು ತಿಳಿಯದೆ ಕರೆಂಟ್ ಹೊಡೆದ ಕಾಗೆಯ ಹಾಗೆ ಆಗಿತ್ತು ಆಗಿನ ಪರಿಸ್ಥಿತಿ. ಸ್ನೇತರೆಲ್ಲರು ಅವನ ಮೇಲೆ ಜೋರು ಮಾಡುತ್ತಿದ್ದರೆ. ನನಗೆ ಏನು ಮಾತನಾಡದೆ ಹೊರಗೆ ಬಂದಿದ್ದೆ ರೋಡ್ನಿಂದ. ಇಂತ ಅನುಭವ ಜೀವನದಲ್ಲಿ ಎಂದು ಮರಯುವುದಕ್ಕೆ ಸಾಧ್ಯ ಆಗಿಲ್ಲ. ಸಾವನ್ನು ಸಮೀಪಕ್ಕೆ ಬಂದು ಹೋಯಿತು.
ಮಂಜುನಾಥ ಹೆಚ್.ಆರ್.

Email : manjunathahr1991@gmail.com 

Monday 18 April 2016

ಕನ್ನಡದ ಮಕ್ಕಳಿಗೆ ಬೇಡವೇ ಜಂಗಲ್ ಕಥೆ.........


   ಡಬ್ಬಿಂಗ್ ವಿವಾದ ಒಂದಲ್ಲ ಒಂದು ತಿರುವು ಪಡೆದುಕೊಂಡು ಬುದಿ ಮುಚ್ಚಿದ ಕೆಂಡದಂತೆ ಆಗಿದೆ. ಪದೇ ಪದೇ ಅದು ಹೊಗೆಯಾಡುತ್ತಿದೆ ಎನ್ನುವುದಕ್ಕೆ ಇತ್ತಿಚೆಗೆ ತೆರೆ ಕಂಡ 'ದಿ ಜಂಗಲ್ ಬುಕ್' ಚಿತ್ರ ಸಾಕ್ಷಿಯಾಗುತ್ತಿದೆ. ಪ್ರಪಂಚದಾದ್ಯಂತ ಬಿಡುಗಡೆಯಾದ ಈ ಚಿತ್ರವನ್ನ ಇಂಗ್ಲಿಷ್ ಭಾಷೆಯಲ್ಲದೆ ಭಾರತದಲ್ಲಿ ನಮ್ಮ ಸೋದರ ಭಾಷೆ ತಮಿಳು, ತೆಲುಗಿನನ್ನೂ ತೆರೆ ಕಂಡು ಅಲ್ಲಿನ ಮಕ್ಕಳಿಗೆ ಇಂಗ್ಲೀಷ್ ಗೊತ್ತಿಲ್ಲದವರಿಗೆ ಅವರದೇ ಭಾಷೆಯಲ್ಲಿ ಚಿತ್ರ ತೋರಿಸಿದ್ದು ಆಯ್ತು. ಕನ್ನಡಕ್ಕೆ, ಕನ್ನಡದ ಮಕ್ಕಳಿಗೆ, ಕನ್ನಡ ಗೊತ್ತಿಲ್ಲದವರು ಪರ ಭಾಷೆಯಲ್ಲೇ ಸಿನಿಮಾ ನೋಡಬೇಕಾದ ದುಸ್ಥಿತಿ ಕನ್ನಡದ್ದು. ಇಷ್ಟೆಲ್ಲ ಮಾತನಾಡುವುದಕ್ಕೂ ಒಂದು ಕಾರಣವಿದೆ.
    ದಿ ಜಂಗಲ್ ಬುಕ್ ಚಿತ್ರದ ತಂತ್ರಜ್ಞಾನ, ನಟನೆ, 3ಡಿ ಎಫೆಕ್ಟ್ಸ್ ಬಗ್ಗೆ ತಿಳಿದುಕೊಳ್ಳುವ ಹಂಬಲದಿಂದ ತುಮಕೂರಿನಲ್ಲಿನ ಹತ್ತಿರದ ಥಿಯೇಟರ್ ಗೆ ಹೆಜ್ಜೆ ಹಾಕಿದ್ದೆವು. ನಮಗೇನು ಭಾಷೆಯ ಸಮಸ್ಯೆಯಾಗಲಿ, ಅಥವಾ ಇನ್ನಾವುದೇ ಸಮಸ್ಯ ಎದುರಾಗಲಿಲ್ಲ ಆದರೆ ನಮ್ಮ ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಅಪ್ಪ-ಅಮ್ಮ ಒಂದು ಪುಟ್ಟ ಮಗುವಿನ ಕುಟುಂಬದ ಮಾತು ಕಥೆ ಎಲ್ಲಾ ಡಬ್ಬಿಂಗ್ ವಿವಾದಗಳನ್ನ ಕಣ್ಣ ಮುಂದೆ ತರಿಸಿಕೊಟ್ಟಿತು.
    ಅಪ್ಪ ಅಪ್ಪ ಆ ಹುಲಿ ಏನು ಹೇಳ್ತಿದೆ? ಅಪ್ಪ ಮೊಗ್ಲಿ ಏನ್ ಹೇಳ್ತಿದನೆ? ಅಪ್ಪ ಕರಡಿ ಏನು ಹೇಳ್ತು? ಇವಕ್ಕೆಲ್ಲ ಉತ್ತರವನ್ನ ಕನ್ನಡದಲ್ಲಿ ಆ ಮಗುವಿಗೆ ಅಪ್ಪ ವಿವರಿಸ್ತಾ ಇದ್ರು. ಅತ್ತಾ ನೋಡಲು ಆಗದೆ ಮಗಳಿನ ಮಾತಿಗೆ ಉತ್ತರಿಸಲಾಗದೆ ಅಪ್ಪಾ ಗೊಂದಲದಿಂದಲೇ ವಿವರಿಸ್ತಾ ಇದ್ರು. ಅವರ ಗೊಳನ್ನು ನೋಡಲಾಗದೆ ನಾವು ಆ ಮಗುವನ್ನು ಕರೆದು ತೊಡೆಯ ಮೇಲೆ ಕುರಿಸಿಕೊಂಡು ಮಗುವಿಗೆ ಕನ್ನಡದಲ್ಲಿ ಟ್ರಾನ್ಸ್ ಲೆಟ್ ಮಾಡಿದ್ವಿ.
   ಇಂತ ಪರಿಸ್ಥಿತಿ ಯಾರೊಬ್ಬರಿಗೆ ಬಂದಿದ ಸ್ಥಿತಿ ಅಲ್ಲಾ, ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ನಮ್ಮಿಂದಾಗುವ ಸಿನಿಮಾಗಳ ಡಬ್ಬಿಂಗ್ ಮಾಡುವುದು ಬೇಡ ಕೊನೆಯ ಪಕ್ಷ ಇಂತಹ ಸಿನಿಮಾಗಳನ್ನಾದರು ಡಬ್ಬಿಂಗ್ ಮಾಡಿದರೆ. ಕನ್ನಡವೂ ಉಳಿಯುತ್ತದೆ, ಕನ್ನಡಿಗರು ಉಳಿಯುತ್ತಾರೆ, ಕನ್ನಡ ಸಿನಿಮಾಗಳಿಗೆ ಬೇಡಿಕೆಯ ಕಾಲವೂ ಬರುತ್ತೆ.
ಮಂಜುನಾಥ್ ಹೆಚ್.ಆರ್.

Email : manjunathahr1991@gmail.com

Saturday 9 April 2016

ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್....................


    ಅವಸರವಾಗಿ ಆಡಿಟೋರಿಯಂ ಫಿಕ್ಸ್ ಆಯ್ತು ಎಕ್ಸಾಂ ಹತ್ತಿರ ಇದೆ. ಇದೆಲ್ಲಾ ಬೇಡ ಸುಮ್ನೆ ಓದ್ಕೋ ಹೋಗಿ ಎಂದು ಡೈರೆಕ್ಟರ್ ಹೇಳಿಯಾಗಿತ್ತು. ಅದನ್ನ ಅಷ್ಟಕ್ಕೆ ಬಿಟ್ಟುಬಿಡುವ ಮನಸ್ಥಿತಿ ನಮ್ಮದಾಗಿರಲಿಲ್ಲದಿದ್ದರಿಂದ ನಮ್ಮ ಪ್ರಯತ್ನ ಮುಂದುವರೆದಿತ್ತು. ನಮ್ಮ ಫಿಕಲಾಟಕ್ಕೆ ಒಪ್ಪಿಗೆ ಸಿಕ್ಕಿದ್ದೇ ತಡ ನಮ್ಮ ಸೀನಿಯರ್ಸ್‍ಗೆ ಬಿಳ್ಕೊಡದಕ್ಕೆ ಅದ್ಧೂರಿ ತಯಾರಿಗಳು ಆರಂಭವಾದವು.
    ಇದು ನಡೆದದ್ದು ಸಮೂಹ ಸಂವಹನ ಸ್ನಾತಕೋತ್ತರ ಪದವಿಯನ್ನು ಮಡಬೇಕಾದ್ರೆ. ಅದನ್ನ ಮುಗಿಸಿ ಮೊನ್ನೆಯಷ್ಟೇ ಆಗಿದೆ. ತಯಾರಿಯ ಬಗ್ಗೆ ಅಲ್ಲಿ ನಡೆದ ಪ್ರತಿಯೊಂದು ಘಟನೆಗಳು ಮನಸ್ಸಿಗೆ ಖುಷಿಯನ್ನ ಕೊಡುತ್ತವೆ. 
   ಅಂದು ಪ್ರಥಮ ವರ್ಷದ ವಿಧ್ಯಾರ್ಥಿಗಳು ಅದರಲ್ಲೂ ಹುಡುಗರು ಪಂಚೆ ಬಿಳಿ ಅಂಗಿಯಿಂದ ಮಧುಮಗನಂತೆ ಕಾಣುತ್ತಿದ್ದರೆ. ಇತ್ತ ಹುಡುಗಿಯರು ನಾವೇನು ಹುಡುಗರಿಂತ ಕಮ್ಮಿ ಇಲ್ಲ ಅನ್ನೋ ರೀತಿ ರೆಡಿ ಆಗಿದ್ದರು. ಸಮಯ ಬೆಳಗ್ಗೆ 10 ಆಗಿತ್ತು ಗೆಸ್ಟ್ ಬರೋದಕ್ಕೆ ಇನ್ನ ಅರ್ಧಗಂಟೆ ಮಾತ್ರ ಬಾಕಿ ಉಳಿದ್ದು. ‘ಎಲ್ರಯ್ಯ ನಿಮ್ ಸೀನಿಯರ್ಸ್ ಒಬ್ಬರು ಕಾಣ್ತಿಲ್ಲ’ ಡೈರೆಕಟ್ಟರ್ ಮಾತಿಗೆ ನಮ್ಮಲ್ಲಿ ಉತ್ತರ ಇರಲಿಲ್ಲ. 
  ಎಲ್ಲರೂ ತಮ್ಮ ತಮ್ಮ ಮೊಬೈಲ್ ತೆಗೆದು ಎಲ್ಲರಿಗೂ ಕಾಲ್ ಮಾಡಿ ಬಿಳ್ಕೊಡುಗೆ ಸಮಾರಂಬಕ್ಕೆ ಬರುವುದಕ್ಕೆ ವಿನಂತಿಸಿಕೊಂಡಿದ್ದು. ಕಡೆಗೆ ಸಮಾರಂಭಕ್ಕೆ ಒಬ್ಬಬ್ಬರು ಒಂದು ರೀತಿಯಲ್ಲಿ ಅಂದರೆ ಕೆಲವರು ಖುಷಿಯಿಂದ ಬಂದರೆ ಮತ್ತೆ ಕೆಲವರು ಯಾಕಾದರೂ ಹೋಗುತ್ತೇವೋ ಅನ್ನೋ ಬೇಸರದಿಂದಲೇ ಬಂದಿದ್ದರು.
 ಗಂಡ ಹೆಡತಿ ಮಧ್ಯ ಕೂಸು ಬಡವಾಯಿತು ಅನ್ನೋಹಾಗೆ. ಉಪನ್ಯಾಸಕರು ಸೀನಿಯರ್ ವಿದ್ಯಾರ್ಥಿಗಳ ನಡುವೆ ಜೂನಿಯರ್ಸ್ ಸೊರಗಿ ಹೋಗಿದ್ದೆವು. ಸಮಾರಂಭದ ತುಂಬೆಲ್ಲಾ ಮಾತು ಕಥೆ, ಹರಟೆ, ಕಾರ್ಯಕ್ರಮದಲ್ಲಿ ಖುಷಿಗಳೆ ತುಂಬಿದ್ದವು. ನಮ್ಮ ಖುಷಿಗೆ ತಣ್ಣೀರೆರಚುವ ಸಂಗತಿ ಬಂದೊದಗುತ್ತದೆ ಎಂದು ಯಾರು ಉಹಿಸಿರಲಿಲ್ಲ. 
 

ವೇದಿಕೆಯ ಮೇಲೆ ಇಷ್ಟು ವರ್ಷದ ಸಿಹಿ, ಕಹಿ ಘಟನೆಗಳನ್ನ ಹಂಚಿಕೊಳ್ಳುವ ಎಲ್ಲಾ ಸೀನಿಯರ್ಸ್‍ಗೆ ಪೆಟ್ ನೇಮ್ ಇಟ್ಟು ಕರೆದದ್ದು. ಇದು ಅವರಿಗೆ ಇಷ್ಟವಾಗುತ್ತದೆ ಎಂದು ಎಲ್ಲರು ಭಾವಿಸಿದ್ದರು. ಅದು ತಲೆಕೆಳಗಾಗಿ ಹೋಗಿತ್ತು. ಮತ್ತೆ ಸಮಾಧಾನ ಮಾಡಿ ಎಲ್ಲರೂ ಕ್ಷಮೆ ಕೇಳೀದ್ದಾಯಿತು. ನಮ್ಮ ಅವರ ಸಂಬಂಧ ಗಟ್ಟಿ ಇದ್ದುದ್ದರಿಂದ ಅದು ಅವರ ಮನಸ್ಸಿನಲ್ಲಿ ಉಳಿದಿರಲಿಲ್ಲ.
ಅವರ ಜೊತೆ ಕಳೆದ ಒಂದೊಂದು ಕ್ಷಣವು ಸಿಹಿಯ ಕ್ಷಣಗಳಾಗಿದ್ದವು. ಒಂದು ವರ್ಷ ಕಳೆದ್ದು ಗೊತ್ತಾಗಲೇ ಇಲ್ಲ ಇಂದಿಗೂ ನಮ್ಮ ಸಂಬಂಧ ಹಾಗೇ ಇದೆ. ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್. 
ಮಂಜುನಾಥ್ ಹೆಚ್.ಆರ್. 
Email : manjunathahr1991@gmail.com

Thursday 7 April 2016

ಸುಳ್ಳೇ ಸತ್ಯ


     ಗಣೇಶ್ ಮುಂಜಾನೆ ಎದ್ದವನೇ, ಲೋ ಗಿರಿ ನೀನು ಮಾತಾಡೊಹಾಗಿದ್ರೆ ಆಚೆ ಹೋಗು ನನ್ನ ನಿದ್ರೆ ಹಾಳ್ಮಡ್ಬೇಡ ಹೋಗೋ ಆಚೆ ಎಂದು ರೇಗಿದನು. ಇವನ ಟಾರ್ಚರ್ ತಡೆಯೋಕೆ ಆಗದೆ ಗಣೇಶ್ ರೂಮಿನಿಂದ ಆಚೆ ಬಂದು ಮಾತನಾಡುತ್ತಿದ್ದನು. ಶಶಿ ರೂಮಿಗೆ ಬಂದು ಯಾಕೊ ಆಚೆ ಬಂದಿದ್ದಿಯಾ ಒಳಗೆ ಮಾತಾಡೋಕೆ ಆಗಲ್ವಾ? ಅಲ್ಲಿ ಗಿರಿ ಕಾಟ ಮಗಾ ನೆಮ್ಮದಿಯಾಗಿ ಮಾತಾಡೋಕು ಆಗಲ್ಲ ಎಂದು ಹೇಳಿ ಫೋನಿನಲ್ಲಿ ಮಾತು ಆರಂಭಿಸಿದನು.
   ಶಶಿ ಒಳಗೆ ಬಂದವನೆ ಯಾಕೊ ಬೆಳ-ಬೆಳಗ್ಗೆ ಅವನ ಮೇಲೆ ಕೂಗಾಡ್ತಿದಿಯಾ? ಇವನ್ದೇನು ಹೊಸದ ಬೆಳಗಾದ್ರೆ ಸಾಕು ಬೇಜಾನ್ ಕುಯ್ತಿರ್‍ತಾನೆ ಕೆಲಸಕ್ಕ ಬಾರದ ಮಾತಾಡ್ಕೊಂಡು. ಅದ್ ಯಾರ್ ಮಾತಾಡ್ತರೊ ಬೆಳ-ಬೆಳಗ್ಗೆ? ಇನ್ ಯಾರ್ ಮಾಡ್ತರೋ ಹುಡ್ಗೀರ್ ನಂಬರ್ ಕಲೆಕ್ಟ್ ಮಾಡ್ಕೊಂಡ್ ಬರ್ತನೆ ಬೇಜಾನ್ ಕುಯ್ತನೆ, ರಾತ್ರಿಯೆಲ್ಲ ನಿದ್ರೆ ಕೊಡಲ್ಲ. ಈ ಹುಡ್ಗೀರ್‍ಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಅವರೆಲ್ಲ ಅದೇ ರೂಟಲ್ಲಿ ಇರೋರು ಕಣೋ ಅವರ್ಗು ಮಾತಾಡೋಕೆ ಒಬ್ಬ ಬೇಕು ಮಾತಾಡ್ತರೆ.
   ಇವನೇನು ಸಾಮಾನ್ಯ ಅಂದ್ಕೂಡಿದ್ದಿಯಾ ಭಲೇ ಚಾಣಾಕ್ಷ, ಕಳ್ಳನ್ನ ನಂಬಿದ್ರು ಕುಳ್ಳನ್ನ ನಂಬಾರ್ದು ಅಂತಾರಲ್ಲ ಹಾಗೆ, ಸುಳ್ಳು ಹೇಳ್ತಾನೆ ಅಂದ್ರೆ! ಚಂದ್ರನ್ನ ತಂದು ಕೊಡ್ತಾನೆ, ಮಾತಲ್ಲೆ ಮನೆ ಕಟ್ತೆನೆ. ಈ ಹುಡ್ಗೀರು ಹೇಗೆ ನಂಬತ್ತರೆ ಇವನ್ನ ಮಾತನ್ನ?
    ಇಲ್ಲಿ ಕೇಳು ಒಂದಿನ ಬೆಳಗ್ಗೆ 5 ಗಂಟೆಗೆ ಒಂದು ಹುಡುಗಿ ಕಾಲ್ ಮಾಡಿ ಎಲ್ಲಿದಿಯಾ ಗಣಿ ಎಂದಳು. ಇಲ್ಲೆ ಮನೇಲಿ ಮಲಗಿದ್ದಿನಿ ಎಂದನು. ಸರಿ 6 ಗಂಟೆಗೆ ಹೊರಡು ಮೈಸೂರಿಗೆ ಹೋಗ್ಬರೋಣ ಎಂದಳು. ಸರಿ ಕಾರ್ ಬೇರೆ ಇಲ್ಲ ಅಷ್ಟು ದೂರ ಬೈಕಲ್ಲಿ ಹೋಗ್ಬರೋಕೆ ಆಗಲ್ಲ ಎಂದು ಕಥೆ ಹೇಳಿದ. ಸರಿ ನಾನ್ ಕಾರ್ ತರ್ತಿನಿ ಬೇಗ ಯುನಿವರ್ಸಿಟಿ ಹತ್ರ ಬಾ ಎಂದಳು. ಸರಿ ಎಂದು ಫೊನ್ ಕಟ್ ಮಾಡಿ ಇನ್ನೊಬ್ಬಳಿಗೆ ಫೋನ್ ಮಾಡಿ ನನ್ ಫ್ರಂಡ್‍ಗೆ ಆಕ್ಸಿಡೆಂಟ್ ಆಗಿದೆಕಣೆ  ದುಡ್ ಬೇಕು ಎಂದು ಹೇಳಿದನು ಸರಿ ಹಾಸ್ಟಲ್ ಹತ್ರ ಬಾ ಕೊಡ್ತಿನಿ ಎಂದಳು. ಇನ್ನೊಬ್ಬಳಿಗೆ ಮಿಸ್ಡ್ ಕಾಲ್ ಮಾಡ್ದ ಅವಳು ಕಾಲ್ ಮಾಡಿದ್ಲು ನಿನ್ನತ್ರ ಮಾತಾಡ್ಬೇಕು ಬ್ಯಾಲೆನ್ಸ್ ಕಾಲಿಯಾಗದೆ ಬೇಗ ಹಾಕ್ಸು ಎಂದನು ಸರಿ ಕಣೋ ಆಮೇಲ್ ಹಾಕಿಸ್ತಿನಿ ಎಂದಳು.
  ಇವನದೇನೊ ಒಂದ-ಎರಡ ದಿನಾ ಇದ್ದದ್ದೇ ಕಾಗೆ ಹಾರಿಸ್ತನೆ ಇರ್ತನೆ. ಇವನು ಹಾಕೊಳ್ಳೂ ಚಪ್ಪಲಿಯಿಂದ ತಲೆ ಬಾಚೊ ಬಾಚಣಿಗೆವರೆಗೂ ಎಲ್ಲಾ ಹುಡ್ಗೀರು ತೆಕ್ಕೊಟ್ಟಿರೊದು. ಹೇಗೂ ಇದೆಲ್ಲಾ? ಸುಳ್ಳು ಮಗಾ ಸುಳ್ಳು ನೋಡೋಕೆ ಸ್ವಲ್ಪ ಚೆನ್ನಾಗಿದನೆ ಅದನ್ನ ಈ ರೀತಿ ಎನ್ಕ್ಯಾಷ್ ಮಾಡ್ಕೊತಿದನೆ. ಸುಳ್ಳನ್ನೆ ನಿಜ ಅಂತ ನಂಬುತ್ತಿದ್ದಾರೆ. ಇವರಿಗೆ ಯಾವಾಗ ಬುದ್ಧಿ ಬರುತ್ತೊ?
ಮಂಜುನಾಥ ಹೆಚ್.ಆರ್
email : manjunathahr1991@gmail.com

ಮಾಡದ ತಪ್ಪಿಗೆ ಶಿಕ್ಷೆಯೇ ಈ ಪ್ರೀತಿ


   ಅವಳಿಗೆ ಹದಿನಾಲ್ಕಾರ ವಯಸ್ಸು ಅವನಿಗೆ ಹದಿನಾರರ ಹುಮ್ಮಸ್ಸು ಅವರಿಬ್ಬರ ನಡುವೆ ಪ್ರೀತಿ ಎಂಬ ಸುಳಿ ಗಾಳಿ ಸುಳಿದಾಗಿತ್ತು. ಅದು ಇಡೀ ಸ್ಕೂಲಿಗೆ. ಅಲ್ಲಾ ಅಲ್ಲಾ ಸ್ಕೂಲಿನ ಎಲ್ಲಾ ವಿದ್ಯಾರ್ಥಿಗಳ ನಾಲಿಗೆಯ ತುದಿ ಮೇಲೆ ಹರಿದಾಡುತ್ತಿತ್ತು. ಹೌದು ಅದು ಹೈಸ್ಕೂಲ್ ಪ್ರೀತಿ, ಅದರಲ್ಲಿ ಕಳಂಕವಿಲ್ಲ ಮೋಸವೆಂಬುದು ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟರಲು ಆಗದ ಸ್ಥಿತಿ.
ಹೆಚ್ಚು ದಿನ ಅವರಿಬ್ಬರ ಪ್ರೀತಿಯನ್ನು ಮುಚ್ಚಿಡಲು ಆಗಲಿಲ್ಲ ಸ್ಕೂಲಿನ ಪ್ರಿನ್ಸಿಪಾಲ್‍ನಿಂದ ಅಟೆಂಡರ್‍ವರೆಗೂ ತಿಳಿದು ಆ ಹುಡುಗಿಗೆ ಮೇಡಮ್ಮಂದೀರು ತಮಗೆ ತಿಳಿದ ಮಟ್ಟಿಗೆ ಬುದ್ಧಿವಾದ ಹೇಳಿದ್ದು ಆಗಿತ್ತು. ಈ ಹುಡುಗನಿಗೆ ಮೇಷ್ಟ್ರು ಎನ್ನುವ ವ್ಯಕ್ತಿಗಳು ದಂಡದ ಪ್ರಯೋಗವನ್ನು ಮಾಡಿದ್ದು ಮುಗಿದಿತ್ತು. ಏಕೆಂದರೆ ಅವಳು 9ನೇ ತರಗತಿ ಇವನು 10ನೇ ತರಗತಿ ಆ ಸ್ಕೂಲಿನ ಎಲ್ಲಾ ವಿಷಯದಲ್ಲೂ ಮಿನುಗುವ ಎರಡು ದೃವ ತಾರೆಗಳು.
      ಇವರ ಈ ನಡವಳಿಕೆಯನ್ನು ಅವರ ಪೋಷಕರಿಗೆ ತಿಳಿಸಿ ಇವರನ್ನು ಬೇರೆ ಮಾಡುವ ಪ್ರಯತ್ನ ಕೂಡ ನಡೆದಿತ್ತು. ಅವಳನ್ನು ಬಿಟ್ಟಿರಲಾಗದ ಇವನ ಸ್ಥಿತಿ, ಅನುಭವಿಸಿದ ಯಾತನೆ ಅವನಿಗೆ ಮಾತ್ರ ಗೊತ್ತು. ಅವನನ್ನು ಮರೆಯಲಾಗದ ಯಾವ ಲಕ್ಷಣವು ಇವಳಲಲ್ಲಿ ಕಾಣದೇ ಇದ್ದಾಗಿ ಅವಳ ತಂದೆ ತಾಯಿಗೆ ಉಳಿದದ್ದು ಒಂದೇ ದಾರಿ ಅವಳ ಮದುವೆ. ಹಾದಿನಾರರ ಆ ಹುಡುಗಿಗೆ ವರ ನೋಡಿ ಮದುವೆ ನಿಶ್ಚಯ ತಯಾರಿ.
    ಮದುವೆಗೂ ಮುನ್ನ ಅವನ ಜೊತೆ ಒಮ್ಮೆ ಮಾತನಾಡಬೇಕೆಂದು ಸ್ಕೂಲಿನ ಬಳಿ ಓಡೋಡಿ ಬರುತ್ತಾಳೆ. ಅವನು ಸ್ಕೂಲಿನಿಂದ ಆಚೆ ಬರುವವರೆಗೂ ಅವನಿಗಾಗಿ ಕಾಯುತ್ತ ಆಚೆಗಿದ್ದ ಆಲದ ಮರದ ಬಳಿ ನಿಲ್ಲುತ್ತಾಳೆ. ಅವನ ಕಂಡೊಡನೆ ಅವಳಿಗಾದ ಆನಂದಕ್ಕೆ ಇವನಿಗಾದ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಅವಳ ಮದುವೆಯ ವಿಚಾರವನ್ನು ಬಗೆ ಬಗೆಯಾಗಿ ಹೇಳಿ ಮನೆಬಿಟ್ಟು ಹೋಗುವ ನಿರ್ಧಾವನ್ನು ವ್ಯಕ್ತಪಡಿಸುತ್ತಾಳೆ. ಅದಕ್ಕೆ ನಾನು ಇನ್ನೂ ಓದ ಬೇಕು, ನಿನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರೆ ದುಡ್ಡು ಬೇಕಲ್ಲವ ಅದು ಅಲ್ಲದೆ ನಾವಿನ್ನು ಮೈನರ್ ಎಂದು ಅವಳನ್ನು ಸಮಾಧಾನಿಸುತ್ತಾನೆ. ಅದಕ್ಕೆ ತೃಪ್ತಳಾದ ಅವಳು ಮರು ಮಾತನಾಡದೆ ಅಲ್ಲಿಂದ ಓಡಿ ಬರುತ್ತಾಳೆ. ನೋಡು ನೋಡುತ್ತಿದ್ದಂತೆ ಅವಳ ಮದುವೆ ನಡೆದು ಹೋಗುತ್ತದೆ. ಯಾವುದೇ ಪ್ರತಿರೋಧವನ್ನು ತೋರಲಾಗದ ಪರಿಸ್ಥಿತಿ ಅವನದು.
    ಅದೇ ನೆನಪಿನಲ್ಲಿ ಅವನು ಮಾನಸಿಕವಾಗಿ ಕುಂದು ಹೋಗುತ್ತಾನೆ. ಇವನ ವೇದನೆಯನ್ನು ನೋಡಲಾದ ಇವನ ಅಪ್ಪ ಅಮ್ಮ ಇವನ್ನು ಆರ್ಮಿಗೆ ಹೋಗುವಂತೆ ಪ್ರೆರೇಪಿಸುತ್ತಾರೆ. ಅವರ ಆಸೆಯಂತೆ ಒಂದು ಪ್ರಯತ್ನವನ್ನು ಮಾಡಲಾಗಿ ಅವನ ಅದೃಷ್ಟವೆಂಬಂತೆ ಆಯ್ಕೆಯಾಗುತ್ತಾನೆ. ಮುಂದೆ ಓದದೆ ಎಲ್ಲವನ್ನು ಬಿಟ್ಟು ದೂರದ ಊರಿಗೆ ದೇಶ ಸೇವೆ ಮಾಡಲು ಹೊರಡುತ್ತಾನೆ.
   ಹತ್ತು ವರ್ಷಗಳ ನಂತರ ಅವನು ತನ್ನೂರಿಗೆ ಬಂದಾಗ ಆಕಸ್ಮಕವಾಗಿ ಅವಳನ್ನು ಕಾಣುತ್ತಾನೆ. ಅವಳ ಮುಖವು ಬಾಡಿಹೋಗಿ, ಹತಾಶೆಯಿಂದ ತುಂಬಿದ ನಿರಾಶೆಯ ಭಾವ ಹೊತ್ತ ಕರುಣಾಜನಕ ಸ್ಥಿತಿ ಅವಳದು ಕೈಯಲ್ಲೊಂದು ಮಗು, ಆ ಮಗುವಿನ ಸ್ಥಿತಿಯೇನು ಅವಳಿಗಿಂದ ಭಿನ್ನವಾಗಿಲ್ಲ. ಅವಳ ಕಣ್ಣಿನಿಂದ ಜಾರುತ್ತಿದದ್ದ ಹನಿಗಳೇ ಎಲ್ಲವನ್ನು ವಿವರಿಸುವಂತಿದ್ದವು. ಅವಳೇನು ಮಾತನಾಡದೆ ಮೂಕಳಾದವಳಂತೆ ಅವನನ್ನು ದಾಟಿ ಹೋದಳು.
   


ನಂತರ ತಿಳಿಯುತ್ತದೆ. ಅವನ ಗಂಡ ಕ್ಯಾಬ್ ಡ್ರೈವರ್, ಅವಳ ಪ್ರೀತಿಯ ಬಗ್ಗೆ ತಿಳಿದು ಪ್ರತಿ ಕ್ಷಣವು ಅವಳಿಗೆ ಚುಚ್ಚಿ ಮಾತನಾಡುತ್ತಿದ್ದನೆ. ಅವರಿಬ್ಬರ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು. ಇದನ್ನು ತಿಳಿದ ಅವನು ಜರ್ಜರಿತನಾಗುತ್ತಾನೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಳೆದು ಹೊದ ದಿನಗಳನ್ನು ನೆನೆಯುತ್ತಾ, ಅನು ಕ್ಷಣವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾ. ವಿಧಿಯ ಆಟಕ್ಕೆ ಶಪಿಸುತ್ತಾನೆ.
ಮಂಜುನಾಥ ಹೆಚ್.ಆರ್.
 email : manjunathahr1991@gmail.com


  

Thursday 31 March 2016

ಎಕ್ಸ್‍ಪೀರಿಯನ್ಸ್ ಲವ್ ಸ್ಟೋರಿ


    ಅಂದು ರಮೇಶ್ ಸರ್ ಸತ್ಯನನ್ನು ಕರೆದು, ಸತ್ಯ ಶಾರ್ಟ್ ಮೂವಿ ಮಾಡ್ಬೇಕು ಒಂದು ಲವ್ ಸಬ್ಜಕ್ಟ್ ತಗೊಂಡು ಒನ್‍ಲೈನ್ ಸ್ಟೋರಿ ಮಾಡ್ಕೊಂಡ್ ಬನ್ನಿ ಜಸ್ಟ್ ಒನ್ ಮಂತ್ ಇದೆ ಅಷ್ಟೆ ಬೇಗ ರೆಡಿ ಮಾಡ್ಬೇಕು, ಮಾಡ್ತಿರಾ ತಾನೆ? ಸತ್ಯ ತಲೆ ಕೆರೆದುಕೊಂಡು ಆಯ್ತು ಸಾರ್ ಮಾಡ್ಕೊಂಡು ಬರ್ತಿನಿ ಎಂದು ಕಾಲೇಜಿನಿಂದ ಹೊರ ಬಂದು ಎದುರಿಗಿದ್ದ ಅರಳಿ ಮರವನ್ನು ನೋಡುತ್ತಿದ್ದ. ಹಿಂದಿನಿಂದ ಬಂದ ಹರ್ಷ ಏನೋ ಸತ್ಯ ರಮೇಶ್ ಸರ್ ಏನೋ ಗುಟ್ಟಾಗಿ ಹೇಳ್ದಾಗಿತ್ತು. 
   ಎಂತದು ಇಲ್ಲಾ ಮರಾಯ ಶಾರ್ಟ್ ಮೂವಿ ಮಾಡೋಕೆ ಒಂದು ಲವ್ ಸಬ್ಜಕ್ಟ್ ತಗೊಂಡು ಒನ್ ಲೈನ್ ಸ್ಟೋರಿ ಮಾಡ್ಬೇಕಂತೆ. ಎಂತ ಚಾನ್ಸೋ ಒಳ್ಳೆ ಸ್ಟೋರಿ ಮಾಡೋ ಪಕ್ಕ ಕ್ಲಿಕ್ ಆಗ್ತಿಯಾ. ಸುಮ್ನೆ ಇರೊ, ಯಾಕೋ? ತಲೆಗೆ ಒಂದ್ ಲವ್ ಸ್ಟೋರಿನೂ ಹೊಳಿತಿಲ್ಲ. ಲೋ ನಿಂದೆ ಒಂದ್ ಸ್ಟೋರಿ ಮಾಡೋ. ಸತ್ಯ ಹರ್ಷನ ಮುಖವನ್ನೊಮ್ಮೆ ಕೋಪದಿಂದ ನೋಡಿ, ನೀನು ನನ್ನ ಹೈಸ್ಕೂಲ್‍ಮೆಟ್, ಆಗಿನಿಂದ ನೋಡ್ತಿದಿಯ ನಾನು ಯಾರನ್ನಾದ್ರು ಲವ್ ಮಾಡಿದ್ನ? ಆಗ ಇರ್ಲಿಲ್ಲ ಈಗ ಇರ್ಬೋದಲ್ಲ ಎಂದು ಅವನಿಗೆ ಕೇಳಿಸದ ಹಾಗೆ ಹೇಳಿದನು. ಅದಕ್ಕೆ ಸತ್ಯ ಏನಂದೆ? ಎನಿಲ್ಲ ನಮ್ಗೆ ಗೊತ್ತಿಲ್ಲದಂಗೆ ಮಾಡ್ರಿಬೋದಲ್ವ. ಲೋ ಹಾಗೇನು ಇಲ್ವೋ.
     ಹಾಗಾದ್ರೆ ಅದುಕ್ಕೋಸ್ಕರನಾದ್ರು ಲವ್ ಮಾಡು, ಏನು? ಹೇಗೂ ನೀನು ಲವ್ ಮಾಡಿಲ್ಲ ಎಕ್ಸಪಿರಿಯನ್ಸ್‍ಗೋಸ್ಕರನಾದ್ರು ಲವ್ ಮಾಡು. ಹೋಗೊ ಲೋ ಎನ್  ಮಾತು ಅಂತ ಹೇಳ್ತಿದಿಯಾ. ಬೇಡ ಅಂದ್ರೆ ಬಿಡಪ್ಪ ನೀನ್ಗೆ ಎಕ್ಸ್‍ಪೀಯನ್ಸ್ ಹಾಗೋವರೆಗೂ ನೀನ್ ಒಂದ್ ಲವ್ ಸ್ಟೋರಿನೂ ಮಾಡಲ್ಲ ಬೇಕಾದ್ರೆ ಖಾಲಿ ಪೇಪರ್ ಮೇಲೆ ಬರ್ದ್ ಕೊಡ್ತಿನಿ. ಹಾಗಾದ್ರೆ ಲವ್ ಮಾಡು ಅಂತಿಯಾ, ವಿಧಿನೇ ಇಲ್ಲಾಪ್ಪ. ಹೇಗೋ ಲವ್ ಮಾಡೋದು? ಅದನ್ನೂ ನಾನೇ ಹೇಳ್ಕೋಡ್ಬೇಕ? ಫ್ಲೀಸ್ ಹೇಳೊ. ಮೊದಲು ಒಂದು ಹುಡುಗಿ ಹುಡುಕು, ಆಮೇಲೆ? ಅವಳತ್ರ ಚನ್ನಾಗಿ ಮಾತಾಡು, ಒಂದೆರಡು ದಿನ ಕಳೆದ ಮೇಲೆ ಅವಳ ಫೋನ್ ನಂಬರ್ ಕೇಳು, ಅವಳಿಗೆ ಏನಿಷ್ಟ ಅಂತ ತಿಳ್ಕೋ ಅದನ್ನ ಕೊಡ್ಸು, ಹೊರಗಡೆ ಸುತ್ತಾಡ್ಸು, ಪ್ರಪೋಸ್ ಮಾಡು, ಅವಳು ಒಪ್ಪಿಕೊಳ್ಳದಿದ್ರೆ? ಅದು ಈಗ ಬೇಕ? ಮುಂದೆ, ಒಪ್ಪ್ಕೋಂಡ್ ಮೇಲೆ, ಅಮೇಲೆ, ಅಮೇಲೆ ನಿನಗಿಷ್ಟ ಬಂದಂಗೆ ಮಾಡು.
   ಸಾಕು ಬಿಡಪ್ಪ ಇಷ್ಟೆ, ಮುಂದೇ ಇನ್ನೇನು ಬೇಡ. ಇದನ್ನ ಸರಿಯಾಗಿ ನೋಟ್ ಮಾಡ್ಕೊಂಡು ಸ್ಕ್ರಿಪ್ಟ್ ಮಾಡು, ಇದೆಲ್ಲಾ ಒಂದ್ ಮಂತ್‍ನಲ್ಲಿ ಆಗುತ್ತ? ಲೋ ನಿನಿನ್ನು ಏಲ್ಲಿದ್ದಿಯಾ ಹುಡುಗೀರು ತುಂಬಾ ಫಾಸ್ಟು ಹೋಗು ಹೋಗು ಎಲ್ಲಾ ಅವರೆ ಕಲಿಸ್ತಾರೆ. ಹಾಗಂತಿಯಾ ಸರಿ ಈಗಲೇ ಒಂದ್ ಹುಡುಗಿ ಹುಡುಕ್ತಿನಿ, ಸರಿ ಬರ್ಲ. ಎಂದು ಸತ್ಯ ಅರಳಿ ಕಟ್ಟೆಯನ್ನು ಬಿಟ್ಟು ಮುಂದೆ ನಡೆದನು. ಅಲ್ಲೆ ಕುಳಿತಿದ್ದ ಹರ್ಷ ಏನಾದ್ರು ಎಡವಟ್ಟಾದ್ರೆ ನಾನ್ ಜವಾಬ್ದಾರನಲ್ಲಪ್ಪ ಎಂದು ಮೆಲು ಧ್ವನಿಯಲ್ಲಿ ಗುನುಗಿದನು. ಏನಾದ್ರು ಕರೆದಾ ಎಂದು ಸತ್ಯ ಹಿಂದಿರುಗಿ ನೋಡಿದ ಅದಕ್ಕೆ ಹರ್ಷ ಎರಡು ಕೈಯನ್ನು ಮೇಲೆತ್ತಿ ನನ್ನ ಆರ್ಶಿವಾದ ನಿನ್ನ ಮೇಲಿದೆ ಹೋಗಿ ಬಾ ಮಗನೆ ಎಂದು ಹಾಸ್ಯವಾಗಿ ನುಡಿದನು. ಎನಾದ್ರು ಎಡವಟ್ಟಾದ್ರೆ ಮಗನೆ ಸಾಬ್ರಾಣಿ ದೂಪನೇ ನಿನಗೆ ಎಂದು ಸತ್ಯ ಹೊರಟು ಹೋದನು. ಯಪ್ಪಾ ಇನ್ನೂ ಒಂದು ತಿಂಗಳು ಇವನ ಕಣ್ಣಿಗೆ ಬಿಳ್ದೇ ಇರೋದೆ ಒಳ್ಳೆದು ಎಂದು ಜಾಗ ಖಾಲಿ ಮಾಡಿದನು ಹರ್ಷ.
ಮಂಜುನಾಥ ಹೆಚ್.ಆರ್.
email : manjunathahr1991@gmail.com

Wednesday 30 March 2016

ಸ್ನೇಹಾ ಅಂದ್ರೆ ಇದೇನಾ..........?

  ಸ್ನೇಹ ಅಂದ್ರೆ ಇದೇ ಅಲ್ವ


 ನನ್ನ ಹತ್ರ ಯಾವುದು ದುಡ್ಡಿಲ್ಲ, ಮಗೂನ ಸ್ಕೂಲಿಗೆ ಸೇರ್ಸಿಬೇಕು ಅರ್ಥಮಾಡ್ಕೋ ನಿನೇನು ಚಿಕ್ಕವನಲ್ಲ ನನ್ನ ಸಂಸಾರದ ಬಗ್ಗೆ ನಾನೂ ಯೋಚ್ನೆ ಮಾಡ್ಬೇಕು ಸರೀನಾ. ಎಂದು ರವೀಶ್ ಫೋನ್ ಕಟ್ ಮಾಡಿದನು.
   ಲಕ್ಷ್ಮಿ ನಾರಾಯಣನ ಅಣ್ಣ ರವೀಶ್ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿರೋದು, ಸಂಬಳ? ಎಷ್ಟೆಂದು ಕೇಳಬೇಡಿ, ಅದು ಬಹುಶಹ ರವೀಶ್‍ಗೂ ಗೊತ್ತಿರಲಿಕ್ಕಿಲ್ಲ ಏಕೆಂದರೆ ಬರುವ ಪೂರ್ತಿ ಸಂಬಳ ಅವನ ಹೆಂಡತಿಯ ಕೈ ಸೇರುತ್ತಿತ್ತು. ಮೊದಲು ಹಿಗಿರಲಿಲ್ಲ ಮದುವೆ ಆದ ಮೇಲೆ ಹಿಗಾಗುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ.
   ಫೋನ್ ಹಿಡಿದು ತಲೆ ತಗ್ಗಿಸಿ ಕುಳಿತಿದ್ದ ಲಕ್ಷ್ಮಿಯ ಮುಂದೆ ವರುಣ್ ಜೋರಾಗಿ ಬೈಕ್‍ನಲ್ಲಿ ಬಂದವನೆ ಧೂಳೆಬ್ಬಿಸಿ ಅವನೆದುರು ಬೈಕ್‍ಗೆ ಬ್ರೇಕ್ ಹೊಡೆದು ನಿಲ್ಲಿಸಿ ಬೈಕ್‍ನಿಂದಿಳಿದು ಲಕ್ಷ್ಮಿಯನ್ನು ಕಿಚಾಯಿಸಿದನು ಲಕ್ಷ್ಮಿ ಏನನ್ನು ಮಾತನಾಡಲಿಲ್ಲ ವರುಣ್ ಲಕ್ಷ್ಮಿಯ ತಲೆಯನ್ನು ಹಿಡಿದು ಮೇಲೆತ್ತಿದನು ಕಣ್ಣಿನಲ್ಲಿ ನೀರು ತುಂಬಿದ್ದನ್ನು ನೋಡಿ. ಯಾಕೋ ಏನಾಯ್ತೊ ಎಂದು ಕೇಳುವ ಬದಲು ಅಣ್ಣನಿಗೆ ಫೋನ್ ಮಾಡಿದ್ದ ಎಂದನು. ಇವನಿಗೆ ವಿದಿ ಇಲ್ಲದೆ ನಿಜ ಹೇಳಬೇಕಾಯಿತು. ನಾನು ಎಷ್ಟು ಸಲ ಹೇಳಿದ್ದಿನಿ ಅವನಿಗೆ ಫೋನ್ ಮಾಡ್ಬೇಡ ಅಂತ ನನ್ನ ಮಾತೇ ಕೇಳಲ್ಲ ಈಗ ಸಮಾಧಾನ ಆಯ್ತ ಎಂದು ಏರು ಧ್ವನಿಯಲ್ಲಿ ಕೂಗಿದನು.
  ಅದು ಹಾಗಲ್ಲ ಕಣೊ ವರುಣ್ ಮತ್ತೇಗೋ ಅವನೊಬ್ಬ ಅಣ್ಣ, ಯಾವಾಗಲೂ ಹೆಂಡತಿ ಸೆರಗು ಹಿಡುಕೊಂಡು ಒಡಾತ್ತಿರೊ ಸಂಗ ಅವನು. ವರುಣ್ ಪ್ಲೀಸ್ ಹಾಗೆಲ್ಲ ಮಾತಾಡ್ಬೇಡ. ಸರಿ ಬಿಡು ಏನ್ ನಿನ್ನ ಸಮಸ್ಯೆ ಯಾಕೆ ಅವನಿಗೆ ಫೋನ್ ಮಾಡಿದ್ದೆ? ಏನಿಲ್ಲ ಬಿಡೋ, ಪರವಗಿಲ್ಲ ಹೇಳಮ್ಮ? ಪರವಗಿಲ್ಲ ಅಂತ ಹೇಳಿನಲ್ಲ ಬಿಡೋ. ನನಗೆ ಕೋಪ ಬರಿಸ್ಬೇಡ ಸುಮ್ನೆ ಹೇಳು? ಫೀಸ್ ಕಟ್ಬೇಕು ನಾಳೆ ಲಾಸ್ಟ್ ಡೇಟ್ ಎಂದು ಮೆಲು ಧ್ವನಿಯಲ್ಲಿ ಹೇಳಿದನು. ವರುಣ್ ಕ್ಷಣ ಕಾಲ ಯೋಚನೆ ಮಾಡಿ ಎಷ್ಟು ಎಂದನು? 30 ಸಾವಿರ, ಹೌದ? ಸರಿ ನಾಳೆ ಮಧ್ಯಾಹ್ನದ ಒಳಗೆ ಅರೇಂಜ್ ಮಾಡ್ತಿನಿ ಬಿಡು.
   ಬೇಡ ಕಣೊ, ಯಾಕೆ? ಲೋ ಹೇಗೋ ತಗೊಳ್ಳಿ ನಿನ್ನತ್ರ ಫಸ್ಟ್ ಇಯರ್ ಎಂಎಸ್ಸಿ ಫೀಸ್ ಎಲ್ಲಾ ನೀನೆ ಕಟ್ಟಿದಿಯಾ ಇವಗ ನೋಡಿದ್ರೆ ಇದಕ್ಕೂ ನೀನೆ ಕೊಡ್ತಿನಿ ಅಂತಿದಿಯ ಬೇಡ ಕಣೋ. ಫ್ರಂಡ್ಸ್ ಅಂದ್ರೆ ಅಷ್ಟೇಯೇನೋ ಕುಡಿಯೋದು, ತನ್ನೋದು, ಟ್ರಿಪ್ ಮಾಡೋದು, ಪಾರ್ಟಿ ಮಾಡೋದು ಅಷ್ಟೇ ಅಲ್ಲ ಕಷ್ಟದಲ್ಲಿ ಹೆಗಲಿಗೆ ಹೆಗಲಾಗಿ ಇರ್ಬೇಕು. ನೋವಲ್ಲಿ ಕಣ್ಣೀರ್ ಒರೆಸೊ ಮೊದಲ ಕೈ ಅದು ಇದೆಲ್ಲ ನಿನಗೆ ಅರ್ಥ ಆಗಲ್ಲ ಬಿಡು ಎಂದು ಬೈಕ್ ಹತ್ತಿ ನಾಳೆ ದುಡ್ಡಿನ ಜೊತೆ ಬರ್ತಿನಿ ಅಂತಹೇಳಿ ಹೊರಟು ಹೋದನು.
    ಮರುದಿನ ಲಕ್ಷ್ಮಿ ನಾರಾಯಣ ಬ್ಯಾಂಕ್ ಹತ್ತಿರ ಅವನಿಗಾಗಿ ಕಾಯುತ್ತಿದ್ದ. ವರುಣ್ ಜೋರಾಗಿ ಓಡಿ ಬಂದು ಲಕ್ಷ್ಮಿಗೆ 30 ಸಾವಿರ ನೀಡಿ ಬೇಗ ಹೋಗಿ ಕಟ್ಟು ಬ್ಯಾಂಕ್ ಕ್ಲೋಸ್ ಆಗುತ್ತೆ ಎಂದನು. ನಿನ್ನ ಬೈಕ್ ಎಲ್ಲಿ ಮಗಾ? ಈಗ ಅದೆಲ್ಲಾ ಬೇಕಾ? ಹೇಳೂ ಏನ್ ಮಾಡ್ದೆ ಅದು ಅದು ಎಂದು ರಾಗ ಎಳೆದು ಎಲ್ಲೂ ದುಡ್ಡು ಅಡ್ಜೆಸ್ಟ್ ಆಗ್ಲಿಲ್ಲ ಆದಕ್ಕೆ ಅದನ್ನ ಮಾರ್ಬಿಟ್ಟೆ. ಲೋ ಅದು ನೀನು ಇಷ್ಟ ಪಟ್ಟು ತಗೊಂಡಿದಲ್ವ ಬೇರೆ ತಗೊಂಡ್ರೆ ಆಯ್ತು ಬಿಡೋ ಫ್ರಂಡ್ಸ್‍ಗಿಂತ ಬೈಕ್ ಹೆಚ್ಚಲ್ಲ. ನೀನು ಕೆಲಸಕ್ಕೆ ಸೆರ್ದಿಮೇಲೆ ಹೊಸ ಬೈಕ್ ತೆಕ್ಕೊಡಿವಂತೆ ಬಿಡು. ಎಂದು ಲಕ್ಷ್ಮಿ ನಾರಾಯಣನನ್ನು ಮುಂದೆ ಮಾತನಾಡಲು ಬಿಡದೆ ಬ್ಯಾಂಕ್ ಒಳಗೆ ಎಳೆದುಕೊಂಡು ಹೋದನು. ಸ್ನೇಹ ಅಂದ್ರೆ ಇದೇ ಅಲ್ವ.
ಮಂಜುನಾಥ ಹೆಚ್.ಆರ್.
email : manjunathahr1991@gmail.com

Monday 28 March 2016

ದತ್ತಾಂಶ ಸಂಗ್ರಹಣೆ ಕನ್ನಡದಲ್ಲಿ ಆಗಲಿ


     ಇದು ತಂತ್ರ ಜ್ಣಾನ ಜಗತ್ತು ಯಾವುದೇ ಮಾಹಿತಿ, ವಿಚಾರವನ್ನು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ಇದು ದೊರೆಯುವುದಂತೂ ಖಚಿತ ಇದರಿಂದಾಗಿಯೇ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮವಾಗಿದೆ.
     ಒಂದು ದುರಾದೃಷ್ಟಕರ ಸಂಗತಿಯೆಂದರೆ ಎಲ್ಲಾ ಮಾಹಿತಿಗಳು ಪ್ರಾದೇಶಿಕ ಭಾಷೆಗಳಲ್ಲಿ ದೊರೆಯದೆ ಇರುವಂತಹದು. ಇದರಲ್ಲಿ ಕನ್ನಡವೇನು ಹೊರತಾಗಿಲ್ಲ ಇಂಟರ್‍ನೆಟ್ ಸೌಲಭ್ಯದಿಂದ ಮಾಹಿತಿಯನ್ನು ಹುಡುಕಲು ಹೊರಟರೆ ಪ್ರಮುಖವಾಗಿ ಕಣ್ಣಿಗೆ ರಾಚುವುದು ಆಂಗ್ಲ ಭಾಷೆ ಉಳಿದಂತೆ ಬೇರೆ ಬೇರೆ ಭಾಷೆಗಳು ಕಾಣ ಸಿಗುತ್ತವೆ.
    ಭಾರತೀಯ ಭಾಷೆಗಳಾದ ಹಿಂದಿ, ಬೆಂಗಾಳಿ, ತಮಿಳು ಭಾಷೆಗಳಲ್ಲಿ ಹೆಚ್ಚು ಮಾಹಿತಿ ಇರುವುದನ್ನು ಕಾಣುತ್ತೇವೆ ಆದರೆ ಕನ್ನಡ ಭಾಷೆಯಲ್ಲಿ ಸಾಕಷ್ಟು ಮಾಹಿತಿ ಲಭ್ಯವಿಲ್ಲದಿರುವುದು. ಎಷ್ಟೂ ಕನ್ನಡಾಸಕ್ತರು ಪರಿತಪಿಸುವಂತಾಗಿದೆ. ಇವರಲ್ಲಿ ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ. ವಿಜ್ಞಾನ-ತಂತ್ರ ಜ್ಞಾನ, ಇತಿಹಾಸ, ಪಾಶ್ಚಿಮಾತ್ಯ ಸಾಹಿತ್ಯ ಸಂಸ್ಕøತಿ, ಗಣೀತ ಶಾಸ್ತ್ರ ಮೊದಲಾದ ವಿಷಯಗಳು ಸುಲಭವಾಗಿ ಕನ್ನಡದಲ್ಲಿ ಸಿಗುವಂತಿದ್ದರೆ ಎಷ್ಟೂ ಜನರಿಗೆ ಅವಶ್ಯಕವೆನಿಸುತ್ತಿತ್ತು.
  ಕನ್ನಡ ನಾಡು-ನುಡಿಯ ಬಗ್ಗೆ ಹೆಚ್ಚು ಮಾತನಾಡುವ ಕನ್ನಡ ಪರ ಸಂಘಟನೆಯಾಗಲಿ ಸಂಬಂಧಪಟ್ಟ ಇಲಾಖೆಯಾಗಲಿ ಇದರ ಗೊಡವೆಗೆ ಹೋದಂತೆ ಕಾಣುತ್ತಿಲ್ಲ. ಒಂದು ಭಾಷೆಯ ಪ್ರಗತಿಯಾಗುವುದು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ. ಕರ್ನಾಟಕದಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದಕ್ಕೆ ಇದು ಒಂದು ಕಾರಣ ವಾಗಿರಬೇಕಲ್ಲವೇ. ಇದರ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಿ ಆದಷ್ಟು ಬೇಗನೆ ಅಂತರ್ ಜಾಲದಲ್ಲಿ ಕನ್ನಡದ ಮುಖಾಂತರ ಮಾಹಿತಿ ಲಭ್ಯವಾದರೆ ಒಳಿತು.
   
    ಇದರ ಕೆಲಸ ಕೇವಲ ಸಂಘಟನೆ, ಸಂಸ್ಥೆ, ಇಲಾಖೆಗಳಲ್ಲದೆ ಸಾಮಾನ್ಯ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಮಗೆ ತಿಳಿದಿರುವ ಕನ್ನಡದ ಮಾಹಿತಿಯನ್ನು ಅಂತರ್ ಜಾಲದಲ್ಲಿ ಸೇರಿಸಿ ಕನ್ನಡವನ್ನು ಬೆಳೆಸಬೇಕಾಗಿದೆ. ಇತ್ತೀಚೆಗೆ ಕರ್ನಾಟಕದ ಗಡಿ ಪ್ರದೇಶದಲ್ಲಿ ಕನ್ನಡ ಕಲಿಯುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ಹೆಚ್ಚಾಗ ಬೇಕಾದರೆ ಮಾಹಿತಿಯ ಪ್ರಸಾರ ಅತ್ಯವಶ್ಯಕ.


                 ಮಂಜುನಾಥ ಹೆಚ್.ಆರ್.
email : manjunathahr1991@gmail.com


Sunday 27 March 2016

ಕೋಪಕ್ಕೊಂದು ಕಾರಣ


   “ನಿಮ್ಮ ಕೆಲಸ ಎಸ್ಟಿದೆ ಅಷ್ಟು ನೋಡಿಕೊಳ್ಳಿ, ನನ್ನ ವಿಷಯಕ್ಕೆ ತಲೆ ಹಾಕಬೇಡಿ. ನನಗೆ ಗೊತ್ತಿದೆ ನಾನು ಏನು ಮಾಡಬೇಕೆಂದು” ಹೇಳಿ ಕ್ಲಾಸಿನಿಂದ ಹೊರ ಬಂದು ಕ್ಯಾಂಟಿನಿನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದೆ ಒಬ್ಬನೆ.
    ಕಾರಣ ಇಷ್ಟೆ, ತೋಟದಲ್ಲಿ ಕೆಲಸ ಜಾಸ್ತಿ ಇದ್ದುದರಿಂದ ಕಾಲೇಜಿಗೆ ಒಂದೆರಡು ದಿನ ಹೋಗಲು ಸಾಧ್ಯವಾಗಿರಲಿಲ್ಲ. ಮರುದಿನ ಕ್ಲಾಸಿಗೆ ಹೋದೆ ನನ್ನ ಕರ್ಮಕ್ಕೆ ಮೊದಲ ಪೀರ್ಡ್ ಹೆಚ್.ಓ.ಡಿ ‘ಶಂಕರಪ್ಪ’ನವರದ್ದು. ಹೇಳಿ ಕೇಳಿ ಅವರು ತುಂಬಾ ಸ್ಟ್ರಿಟ್, ನಗ್ತ ನಗ್ತ ಚೆನ್ನಗಿಯೇ ಹುಗಿಯುತ್ತಾರೆ. ಎಲ್ಲರಿಗೂ ಆಗುವ ಮರ್ಯಾದೆ ನನಗೂ ಕೂಡ ಆಯ್ತು. ನನ್ನನ್ನು ನೋಡಿ ಇಡೀ ಕ್ಲಾಸ್ ತಲೆ ಬಗ್ಗಿಸಿಕೊಂಡು ನಗುತ್ತಿತ್ತು. ಅದನ್ನು ನೋಡಲಾಗದೆ ನೇರವಾಗಿ ಶಂಕರಪ್ಪ ಸರ್‍ನ ನೋಡುತ್ತಾ, ರೀ ಸ್ವಾಮಿ! ನೀವು ಕ್ಲಾಸಿಗೆ ಬಂದು ಪಾಠ ಮಾಡಿ ಹೋದ್ರೆ ಸಾಕು ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೊ ಅವಶ್ಯಕತೆ ಇಲ್ಲ ಎಂದು ಇನ್ನೊಂದೆರಡು ಸೇರಿಸಿ ರೇಗಿದೆ. 
      ಅವರಿಂದ ಬಂದ ಉತ್ತರ ಗೆಟ್ ಔಟ್ ಮೈ ಕ್ಲಾಸ್ ರೂಂ ಎಂಬುದಾಗಿತ್ತು. ಬಿಡ್ರಿ ಇಲ್ಲೆ ಏನು ಗೂಟ ಹೊಡಕೊಂಡು ಇರಲ್ಲ ಎಂದು ಹೇಳಿ ಆಚೆ ಬಂದಿದ್ದೆ. ಕ್ಯಾಂಟಿನ್ ಪರಿಸರದಲ್ಲಿ ಅಮ್ಮನ ನೆನಪಾಯಿತು ಅವರು ಹೇಲಿದ್ದು ಲೋ ಕಾಲೇಜಿನಲ್ಲಿ ಯಾರತ್ರನು ಜಗಳ ಆಡಬೇಡ, ನೀನ್ ಓದದಿದ್ದರು ಪರವಾಗಿಲ್ಲ ನಮಗೆ ಕೆಟ್ಟ ಹೆಸರು ಮಾತ್ರ ತರಬೇಡ, ವಿದ್ಯೆ ಕೊಟ್ಟ ಗುರುಗಳು ದೇವರಿಗೆ ಸಮಾನ ಅವರಿಗೆ ಗೌರವ ಕೊಡು ಎಂದು ಸಾರಿ ಸಾರಿ ಹೇಳಿದ್ದು ಕಿವಿಯಲ್ಲಿ ಹಾಗೆ ಬಂದು ಹೋಗಿತ್ತು. 
    ಒಲ್ಲದ ಮನಸ್ಸಿನಿಂದ ಕಾಫಿ ಕುಡಿದು ಮುಗಿಸಿ ಶಂಕರ್ ಸರ್ ಹತ್ರ ಸಾರಿ ಕೇಳಲು ಹೊರಟೆ ಕಣ್ಣು ಕೆಂಪಾಗಿತ್ತು, ಶರ್ಟ್ ಎರಡು ತೋಳುಗಳನ್ನು ಮಡಚುತ್ತಾ ಬಲವಾದ ಹೆಜ್ಜೆ ಇಡುತ್ತ ಬಿರು ನಡಿಗೆಯಲ್ಲಿ ಅವರ ಎದುರಿಗೆ ಹೋಗುತ್ತಿದ್ದೆ. ನನ್ನನ್ನು ಹೊಡೆಯಲಿಕ್ಕೆ ಬಂದವನಂತೆ ಅವರಿಗೆ ಅನ್ನಿಸಿರಬೇಕು. ನನ್ನ ಮುಖವನ್ನು ನೋಡದೆ ಮುಂದೆ ನಡೆದರು. ಮತ್ತೆ ನಾನೇ ಹಿಂದೆ ಹೋಗಿ ಎದುರು ನಿಂತು ಕೈ ಕಟ್ಟಿಕೊಂಡು ಸಾರಿ ಸರ್ ಎಂದೆ. 
    ಅವರಿಂದ ಯಾವುದೇ ಉತ್ತರ ಬರಲಿಲ್ಲ ಸಾರಿ ಸಾರ್ ತಪ್ಪಾಯ್ತು ಎಂದೆ. ಮುಖ ನೋಡಿ ನಗುತ್ತಾ ನನಗೆ ಗೊತ್ತು ಕಣೋ ನೀನು ಹೇಗೆ ಅಂತಾ ನೆನ್ನೆ ಮೊನ್ನೆ ನಿನ್ನನ್ನು ನೋಡುತ್ತಿಲ್ಲ. ನೀನಾದ್ರೆ ಕೋಪ ಎಷ್ಟು ಬೇಗ ಬರುತ್ತೇ ಅಷ್ಟು ಬೇಗ ಸರಿ ಹೊಗ್ತೀಯ. ಆದರೆ ನಿನ್ನ ಫ್ರೆಂಡ್ಸ್? ನಾನ್ ಕೇರ್ ಮಾಡದಿದ್ದರೆ ಹಾಳಾಗ್ತಾರೆ. ಅದಕ್ಕೆ ನಿನ್ನ ಆಚೆ ಕಳ್ಸಿದೆ ಬೇಜಾರು ಮಾಡ್ಕೊಬೇಡ ಎಂದು ಹೇಳಿ ನನ್ನನ್ನು ನಗಿಸುತ್ತಾ ಅವರು ನಗುತ್ತಾ ಮುಂದೆ ಹೋದರು.
ಅವರನ್ನು ನೋಡುತ್ತಾ ಒಳಗೊಳಗೆ ನಗುತ್ತಾ ಅದಕ್ಕೆ ಗುರುಗಳೇ ನಿಮ್ಮನ್ನು ಆಚಾರ್ಯ ದೇವೋಭವ ಎಂದು ಕರೆಯೋದು ಎಂದು ಕ್ಲಾಸಿನ ಕಡೆ ಹೊರಟೆ.
                                                                                                       
    ಮಂಜುನಾಥ ಹೆಚ್.ಆರ್.

email : manjunathahr1991@gmail.com

Saturday 26 March 2016

ಕಥೆ ಮುಗಿದ ಮೇಲೆ


        ಯಾರೇ ಆಗಲಿ ಲವ್ ಮಾಡಿ ಅದು ಬ್ರೇಕಪ್ ಆದಮೇಲೆ ನಮ್ಮ ಜೀವನ ಇಷ್ಟೇ, ನಾನಿನ್ನು ಬದುಕಲು ಯೋಗ್ಯ ಅಲ್ಲಾ ಸಾಯಬೇಕು ಎನ್ನುವ ನಿರ್ಧಾರ ಇಂದಿನ ದಿನದಲ್ಲಿ ಸಾಮಾನ್ಯ. ಅಂಥವರಿಗೊಂದು ಮಾತು.
ಸುಖಾ ಸುಮ್ಮನೆ ಯೋಚಿಸುವುದನ್ನು ಬಿಡಿ ಸದಾ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿ. ನೆನಪು ಮಾಡಿಕೊಳ್ಳುವುದಕ್ಕೂ ಬಿಜಿಯಾದಾಗ ಯಾರೊಬ್ಬರು ನೆನಪಿಗೆ ಬರುವುದಿಲ್ಲ.
ಆತ್ಮೀಯರೊಂದಿಗೆ ಹೆಚ್ಚು ಮಾತನಾಡಿ ಒಬ್ಬರೆ ಇರುವುದಕ್ಕಿಂತ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ಲೇಸು. ಕೆಲಸಕ್ಕೆ ಬಾರದ ಮಾತುಗಳು ನಿಮ್ಮ ಬದಲಾವಣೆಗೆ ಬರುತ್ತವೆ.
ಅಳು ಬಂದರೆ ನಿಮಗೆ ಸಾಕಾಗುವಷ್ಟು ಅತ್ತುಬಿಡಿ ಮುಂದೆ ಅಳಬೇಕೆಂದರು ಕಣ್ಣಿಂದ ಒಂದು ಹನಿಯು ಬರುವುದಿಲ್ಲ. ಅತ್ತಾಗ ಮನಸ್ಸು ಹಗುರಾಗುತ್ತದೆ. 
ನಿಮ್ಮ ಮೇಲೆ ನೀವು ಪ್ರೀತಿ ಅಭಿಮಾನ ಬೆಳೆಸಿಕೊಳ್ಳಿ, ಅದೊಂದು ವಿಚಾರದಲ್ಲಿ ಈಗೋ ಇದ್ದರೆ ನಿಮ್ಮಿಂದ ಬದಲಾವಣೆ ಸಾಧ್ಯ.
ಮುಂಜಾನೆ ಎದ್ದು ತಂಪಾದ ಗಾಳಿಯಲ್ಲಿ ವಾಕ್ ಮಾಡಿ. ಸಾಧ್ಯವಾದರೆ ನಿಮ್ಮ ಮನಸ್ಸಿಗೆ ಮುದ ನೀಡುವ ಜಾಗಗಳಿಗೆ ಸ್ನೇಹಿರ ಜೊತೆ ಟ್ರಿಪ್ ಹೋಗಿ ಜಾಗ ಬದಲಾದರೆ ಮನಸ್ಸು ಬದಲಾಗುತ್ತದೆ. 
ನೀವು ಪ್ರೀತಿಯಲ್ಲಿ ಸೋತಿದ್ದಿರಾ ಆದರೆ ಪ್ರೀತಿಲಿ ಅಲ್ಲಾ ನಿಮಗೆ ಅಂತಾ ಒಂದು ಜೀವಾ ಕಾಯ್ತಾ ಇರುತ್ತೆ. ನಿಮ್ಮನ್ನ ಬಿಟ್ಟು ಹೋದವರನ್ನು ನೆನೆಯುತಾ, ಅವರಿಗೆ ಮೋಸ ಮಾಡಬೇಡಿ ಯಾಕೆಂದರೆ ಅವರು ತಮ್ಮ ಪ್ರೀತಿಯನ್ನ ಕಳೆದುಕೊಂಡಿರಬಹುದಲ್ಲವೇ. ಪ್ರೀತಿಯಲ್ಲಿ ಬೀಳದವರು ಯಾರೊಬ್ಬರು ಇಲ್ಲಾ.


 ಮಂಜುನಾಥ ಹೆಚ್.ಆರ್
email : manjunathahr1991@gmail.com

Sunday 20 March 2016

ಮುಂಜಾವಿನ ಕನಸು ಕಾಣಲು ಬಲು ಸೊಗಸು

ಮುಂಜಾವಿನ ಕನಸು ಕಾಣಲು ಬಲು ಸೊಗಸು

    ಮನೆಯೆಲ್ಲಾ ಹೂವಿನ ಅಲಂಕಾರ, ಎಲ್ಲಿ ನೋಡಿದರೂ ಸಭ್ರಮ ಸಡಗರ, ಗಿಜುಗುಡುವ ಜನರು, ಮೂಹರ್ತಕ್ಕೆ ಟೈಂ ಆಗುತ್ತೆ ಹೆಣ್ಣನ್ನ ಬೇಗ ರೆಡಿ ಮಾಡಿ ಅನ್ನೂ ಪುರೋಹಿತರು. ಆಗತಾನೆ ಎದ್ದು ಕಣ್ಣು ಉಜ್ಜುತ್ತಾ ರೂಮಿನಿಂದ ಬಂದ ನನ್ನ ಕಣ್ಣಿಗೆ ಕಾಣಿಸಿದ್ದು ಇಷ್ಟು. ಎನ್ ನಡಿತಿದೆ ನಮ್ಮನೇಲಿ ಎಂದು ಅರ್ಥವಾಗದಿದ್ದರು. ಅರ್ಥ ಮಾಡಿಕೊಳ್ಳಲು ಸುತ್ತಲೂ ಕಣ್ಣಾಡಿಸಿದೆ ನನ್ನ ಮದುವೆ ಎಂಬುದಂತೂ ಖಚಿತವಾಯಿತು. ನನ್ನ ಆಪ್ತ ಮಿತ್ರರೇನಾದರೂ ಬಂದಿದ್ದಾರೆಯೇನೂ ಎಂದು ನೋಡಿದರೆ ನವೀನ್ ಮತ್ತು ಲಕ್ಷಿನಾರಾಯಣ್ ಮಾತ್ರ ಬಂದಿದ್ದಾರೆ. ಮಂಜು, ರವಿ ಇಬ್ಬರು ಬಂದಿರಲಿಲ್ಲ ನನಗಂತೂ ರೇಗಿ ಹೋಯಿತು. ಅಮ್ಮ ಹೆಣ್ಣಿನ ಅಮ್ಮನ ಹತ್ತಿರ ಮಾತನಾಡುತ್ತಿದ್ದರು ಹತ್ತಿರ ಕರೆದು ಏನಮ್ಮ ನೀನು ನನಗೆ ಗೊತ್ತಿಲ್ಲದಂತೆ ಮದುವೆ ಫಿಕ್ಸ್ ಮಾಡಿದ್ದೀಯ ನನ್ ಫ್ರಂಡ್ಸ್ ಯಾರು ಬಂದಿಲ್ಲ ಎಂದು ಕೂಗಾಡುತ್ತಲೆ ಮದುವೆ ಚಪ್ಪರಕ್ಕೆ ಕಟ್ಟಿದ್ದ ಕಂಬಕ್ಕೆ ಕೋಪದಿಂದ ಹೊಡೆದೆ, ಪಕ್ಕದಲ್ಲಿದ್ದ ಚಂಬು ಪಕ್ಕಕ್ಕೆ ಬಡಿದು ಅದರಲ್ಲಿದ್ದ ನೀರು ಚೆಲ್ಲಿ ಮುಖಕ್ಕೆ ಹೊಡೆಯಿತು ತಟ್ಟನೆ ಮೇಲೆದ್ದೆ ಕಣ್ಣು ಬಿಟ್ಟು ನೋಡಿದರೆ ಯಾವ ಮದುವೆಯು ಇಲ್ಲ ಸಂಭ್ರಮ ಮೊದಲೇ ಇಲ್ಲಾ.
      ಅಂದು ರಾತ್ರಿ ಅಮ್ಮ ಕಾಲು ನೋವು ನನಗೆ ಕೆಲಸ ಮಾಡೋಕೆ ಆಗಲ್ಲ ಬೇಗ ಮದುವೆ ಮಾಡ್ಕೋ ಎಂದು ರೇಗಿ ಹೇಳಿದರು. ನಾನು ಬೇರೆ ಯಾವುದೂ ಬೇಜಾರಿನಲ್ಲಿದ್ದೆ ನಿಧಾನವಾಗಿ ಹೇಳಿದೆ ಈಗಲೇ ಬೇಡ ಬೇಕಾದ್ರೆ ಮನೆಕೆಲಸಕ್ಕೆ ಆಳು ಗೊತ್ತು ಮಾಡು. ಇಲ್ಲ ಅಂದ್ರೆ ನಾನೇ ಬೇಕಾದ್ರೆ ನಿನಗೆ ಸಹಾಯ ಮಾಡ್ತಿನಿ ಎಂದು ಹೇಳಿದೆ. ಅದೆಗೇ ಆಗುತ್ತೆ ನಿನ್ ಮದುವೆ ಆಗಬೇಕು ಅಷ್ಟೆ ಎಂದು ಒತ್ತಡ ಮಾಡಿ ಕುಳಿತರು. ನನಗಂತೂ ಭಯಂಕರ ಕೋಪ ಬಂದು ಉಟ ಮಾಡೋ ತಟ್ಟೆ ತೆಗೆದು ಜೋರಾಗಿ ಎರಚಾಡಿ, ಕೂಗಾಡಿ ರಾದ್ದಾಂತ ನಡೆದು ಉಟವನ್ನು ಮಾಡದೇ ನನ್ನ ರೂಮಿನಲ್ಲಿ ಬಂದು ಮಲಗಿದೆ.
  ನನಗಂತೂ ಈಗಲೇ ಮದುವೆ ಆಗಿ ಏನ್ ಮಾಡಬೇಕಿದೆ, ನಾನು ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಅಂದುಕೊಂಡಿರೋನು ಇವರಾರು ನನ್ನ ಅರ್ಥನೇ ಮಾಡ್ಕೂತಿಲ್ಲವಲ್ಲ. ನನ್ನ ಕಾಲ ಮೇಲೆ ನಾನು ನಿತುಕೊಳ್ಳ ಬೇಕು. ನೂರು ಜನರಲ್ಲಿ ಒಬ್ಬನಲ್ಲ ನೂರು ಜನರಲ್ಲಿ ಮೊದಲನೆಯವನಾಗಿ ಬದುಕ ಬೇಕು ಎಂಬುದೇ ನನ್ನ ಆಸೆ. ಎಂದು ಯೋಚಿಸುತ್ತಿರುವಾಗಲೇ ಇಷ್ಟೆಲ್ಲ ನಡೆದು ಹೋಯಿತು. 
   

ಒಂದು ಕಡೆ ಖುಷಿ ನನ್ನ ಮದುವೆ ಸಂಭ್ರಮವನ್ನ ನೋಡಿದೆನಲ್ಲ ಎಂದು ಮತ್ತೊಂದು ಕಡೆ ಬೇಜಾರು ಆ ಮದುವೆ ಹೆಣ್ಣನ್ನ ನೋಡಲಿಲ್ಲವಲ್ಲ ಎಂದು ಇರಲಿ ಬಿಡು ಕನಸಿಗೆ ಬಂದವಳು ಕೈ ಹಿಡಿಯದೆ ಹೋಗ್ತಾಳ ಸಿಕ್ತಾಳೆ ಬಿಡು ಅಂತಾ ಹೇಳ್ತಿದೆ ನನ್ನ ಪುಟ್ಟ ಹೃದಯ.

ಮಂಜುನಾಥ ಹೆಚ್.ಆರ್.
mail : manjunathahr1991@gmail.com


Friday 18 March 2016

ಹಳೇ ಹುಲಿ ಲವ್ ಕಥೆ.......

70ರ ವ್ಯೆಥೆ 20ರ ಕಥೆ

   ಕಾಲದ ತಪ್ಪೋ ಅಥವಾ ಅದರ ಕೈ ಕೆಳಗೆ ಸಿಕ್ಕ ಎರಡು ಜೀವಗಳ ತಪ್ಪೋ ತಿಳಿಯದು. ಆಕಸ್ಮಿಕವಾಗಿ ಒಂದುಗೂಡಿ ಅನಿರೀಕ್ಷಿತವಾಗಿ ಬೇರೆಯಾಗಿ ಇಂದಿಗೂ ಜೊತೆಗೆ ಬಂದರೆ ಇರುವಷ್ಟು ದಿನವಾದರೂ ಅವಳ ಜೊತೆ ಕಳೆಯ ಬೇಕು ಎಂದು ಬಯಸುವ ಜೀವವೊಂದು ಅವಳನ್ನೆ ಹುಡುಕುತ್ತಿದೆ.
  ಫೆಬ್ರವರಿ 14 ರಂದು ಕಾಲೇಜಿಗೆ ಹೋಗದೆ ನಮ್ಮ ಹಳ್ಳಿಯಲ್ಲೇ ಸುರಸುಂದರಾಂಗಿ ಸಿಗಬಹುದೆಂದು ಅಲೆಯುತ್ತಿದ್ದೆ. ಅರಳೀಕಟ್ಟೆಯ ಮರವನ್ನು ಒರಗಿಕೊಂಡು ಹಿರಿ ತಲೆಯೊಂದು ಕುಳಿತ್ತಿತ್ತು. ಸಾಕಷ್ಟು ಪರಿಚಯವಿದ್ದುದ್ದರಿಂದ ಹತ್ತಿರ ಹೋಗಿ ಎನ್ ‘ಕೌಟು’ (ಮುದುಕ) ಹಿಂಗೇ ಕುತಿದಿಯ ಎಂದು ಚೇಡಿಸುವ ಧ್ವನಿಯಲ್ಲಿ ಹೇಳಿದೆ. ಅದಕ್ಕೆ ಬಂದ ಉತ್ತರ ಎನ್ ‘ಎಳೆ ನಿಂಬೆ ಕಾಯ್’ ಎಂದು ತಕ್ಷಣವೇ ಮುಖಕ್ಕೆ ಹೊಡೆದಂತೆ ಹೇಳಿದರು. ಹೋ...! ಇವರು ನಮಗಿಂತ ಸ್ಟ್ರಾಂಗ್ ಇದ್ದಾರೆ ಎಂದು ಮಾತು ಕಡಿಮೆ ಮಾಡಿದೆ.
   ನನ್ನ ಮುಖವನ್ನೊಮ್ಮೆ ನೋಡುತ್ತಿದ್ದರು ಏನ್ ಇವತ್ತು ನಿನ್ ಹಳೆ ಲವ್ವರ್ ನೆನಪಿಗೆ ಬದ್ಲ. ಕಣ್ಣು ಚಿಕ್ಕದಾಗಿ ಮಾಡಿ ಮತ್ತೆ ಮುಖವನ್ನು ನೋಡುತ್ತಾ ನಿನಗೇನು ಗೊತ್ತೊ ನನ್ನ ಪೀರುತಿ ಬಗ್ಗೆ. ಎಂಬ ಮಾತನ್ನು ಕೇಳಿ ನನಗೆ ಶಾಕ್ ಹೊಡೆದಾಗೆ ಆಯ್ತು. ಇದೇನಪ್ಪ ಹೀಗೆ ಹೇಳ್ತಿದರಲ್ಲ ಅವರಿಗೆ ಏನಿಲ್ಲವೆಂದರು 75 ರ ಗಡಿ ದಾಟಿತ್ತು ಆದ್ದರಿಂದ ಅನುಮಾನದಿಂದ ಕೇಳಿದೆ ತಾತ ನೀವು ಲವ್ ಮಾಡಿದ್ರ ? ಅದಕ್ಕೆ ಅವರು ಮಾಡಿದ್ರ ಅಲ್ಲ ಮಾಡ್ತಿದಿನಿ. 
   ಅಲ್ಲಿಂದ ಅವರ ಲವ್ ಸ್ಟೋರಿ ಸ್ಟ್ರಾಟ್ ಆಯ್ತು. ನನಗಾಗ 21 ಆಗ ಸಾಲೆ ಗೀಲೆ ಎಲ್ಲಾ ದೂರದ ಮಾತು ಮನೆಲಿ 75 ಕುರಿಗಳು ಇದ್ವು ಅವನ್ನ ಮೇಯಿಸೋಕೆ ಕಗ್ಗಲಿ ಹಳ್ಳದ ಕಡೆ ಹೋಗ್ತಿದ್ದೆ. ಅದೇ ಕಡೆಯಿಂದ ಸಾಲೆಗೆ ಹೋಗೊಕೆ ಪಟೇಲನ ಮಗಳು ನಾಗರತ್ನ ಬರ್ತಿದ್ಲು. ನಾಗರತ್ನ ಯಾರ್ ತಾತ ಅದೇ ಕಣೋ ಗುಡೇ ಮಾರನಹಳ್ಳಿ ಕೊಟ್ಟಿದರಲ್ಲ ಚಿಕ್ ಮಗಳು. ಅದೇ ಕೆಂಪಮ್ಮನ ಜಾತ್ರೆಗೆ ಬತ್ತರಲ್ಲಾ ಹೋ ಅವರ. ಹ ಅವಳೇ. ಅವರ ಬಗ್ಗೆ ಹೆಚ್ಚು ಕೇಳಲಿಲ್ಲ ಯಾಕೆಂದ್ರೆ ಅವರ ಮೊಮ್ಮಗಳು ಕೀರ್ತಿಗೆ ಲೈನ್ ಹೊಡಿತಿದ್ದೆ, ನಮ್ಮೂರಿನ ಜಾತ್ರೆಗೆ ಬಂದಾಗ. ಸರಿ ಮುಂದೆ ತಾತ ನಾವು ತುಂಬಾ ಬಡವರು ಒಂದ್ ಹೊತ್ತಿನ ಉಟಕ್ಕೂ ಕಷ್ಟ ಇತ್ತು. ಅವಳು ಸಾಲೆಗೆ ಹೋಗುವಾಗ ಅವಳ ಮನೆಯಿಂದ ರೊಟ್ಟಿ ತಂದು ಕೊಡ್ತಿದ್ಲು. ನಾನು ಅವಳಿಗೆ ಸೀಬೆ ಹಣ್ಣು, ನೇರಳೆ ಹಣ್ಣು, ಖಾರೆ ಹಣ್ಣು ಇನ್ನು ಎಲ್ಲಾ ಕೊಡ್ತಿದ್ದೆ.
    ಅವಳನ್ನ ನೋಡ್ದೆ ನನಗೆ ಇರೋಕೆ ಆಗ್ತಿರ್ಲಿಲ್ಲ ಒಂದೆರಡು ದಿನ ಶಾಲೆಗೆ ಬರ್ತಿಲಿಲ್ಲ ಅವರ ಮನೆ ಕಡೆ ಹೋಗಿ ನೋಡ್ದೆ ಆಚೆ ಗುಡಿಸಲು ಹಾಕಿ ಕೂರಿದ್ದರು. ಅದಾದ ಒಂದು ತಿಂಗಳಿಗೆ ಮತ್ತೆ ಬಂದಳು ನಾವಿಬ್ಬರು ಒಂದೆಡೆ ಕುಳಿತು ಇಬ್ಬರು ಮಾತನಾಡುತ್ತಿದ್ದವು. ಇದು ಅವರಪ್ಪನಿಗೆ ಗೊತ್ತಾಗಿ ಅವಳಿಗಂತು ಚೆನ್ನಾಗಿ ಹೊಡೆದರು. ನನಗಂತೂ ನಮ್ಮಪ್ಪ ಮೆಣಸಿನಕಾಯಿ ಹೊಗೆ ಹಾಕಿ ಎರಡು ದಿನ ಉಪವಾಸ ಇಟ್ಟರು ಅವಳನ್ನು ನೋಡುವ ಮಾತನಾಡುವ ತವಕ ನಿಲ್ಲಲಿಲ್ಲ. 
  ನಾನು ಹೋಗಿ ಮಾತನಾಡುವ ಮೊದಲೆ ಅವಳನ್ನ ಅವರ ಚಿಕ್ಕಮ್ಮನ ಮನೆಗೆ ಕಳಿಸಿದ್ದರು. ಅಲ್ಲಿಗೆ ಹೋಗುವುದರೊಳಗೆ ಅವಳಿಗೆ ಮುದುವೆ ನಿಶ್ಚಯ ಮಾಡಿ ಅವರಪ್ಪ ಅವಸರವರವಾಗಿ ಮದುವೆ ಮಾಡಿದ್ರು. ಆಮೇಲೆ ಎನಾಯ್ತು ತಾತ? ಅವಳು ಅಲ್ಲಿ ಚೆನ್ನಾಗಿಲ್ಲ ಅನ್ನೋದು ಗೊತ್ತಾಯ್ತು ಅವಳ ಗಂಡ ದಿನಾಲು ಜಗಳ ಮಾಡ್ತನಂತೆ ಹೊಡಿತಾನಂತೆ. ದಿನಾಲೂ ಅವಳನ್ನೆ ನೆನಪ್ ಮಾಡ್ಕೋತಿನಿ. ಇನ್ನು ಮರೆತಿಲ್ವ ? ಹೇಗೆ ಮರಿಲಿ ಅದು ಇಂದು ಹುಟ್ಟಿ ನಾಳೆ ಮರೆತೊಗೋ ಮೊಬೈಲ್ ಪ್ರೀತಿ ಅಲ್ಲಾ. ಹೋ ಬಿಡಿ ಯಾರು ಮಾಡ್ದಿದ್ ಏನು ಮಾಡಿಲ್ಲ. ಆಗ ಯಾರು ಮಾಡಿರ್ಲಿಲ್ಲ ಇವಗ ಮಾಡ್ದರೇ ಇಲ್ಲ. ಅಲ್ಲಿಂದ ಕಥೆ ಕೇಳಿ ಹೊರಡುವ ಹೊತ್ತಿಗೆ ನನ್ ಹುಡುಗಿ ನೆನಪಾಗಿದ್ಲು.


ಮಂಜುನಾಥ ಹೆಚ್.ಆರ್
Mail : manjunathahr1991@gmail.com
  

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ...........

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ.......

      ಆಗಿನ್ನು ಪ್ರಥಮ ವರ್ಷದ ಪದವಿಯನ್ನು ಮುಗಿಸಿ ಎರಡನೇ ವರ್ಷದ ಅವಧಿಗೆ ಕಾಲಿಟ್ಟಿದ್ದೆವು. ಇತಿಹಾಸ ಶಿಕ್ಷಕರಿಗೆ ಒಂದು ಕಾಯಿಲೆಯೋ ಅಥವಾ ಅಭ್ಯಾಸವೋ ಅದೊಂದು ದುರಭ್ಯಾಸವೋ ಎನೋ ಗೊತ್ತಿಲ್ಲ ಆದರೆ ಅವರು ಪಾಠ ಮಾಡಬೇಕಾದರೆ ಹುಡುಗರ ಕಡೆ ನೋಡದೆ ತಲೆಯನ್ನು ಮೇಲೆತ್ತಿ ಕ್ಲಾಸ್ ರೂಮಿನ ಟಾಪ್ ನೋಡುತ್ತಿದ್ದರು. ನಾವು ಪ್ರಥಮ ವರ್ಷ ಮುಗಿಸಿದಾಗ  ಇವರ ಬಗ್ಗೆ ಗೊತ್ತಿಲ್ಲದೆ ಇರುವುದರಿಂದ ನಾವು ಸುಮ್ಮೆ ಆಗಿದ್ದೆವು ಆಗ ತುಂಬಾ ಒಳ್ಳೆ ಹುಡುಗರು. 
    ನಾವು ಸುಮ್ಮನಿದ್ದರು ನಮ್ಮ ಅಣ್ಣ-ತಂಮ್ಮದಿರು ಸುಮ್ಮನೆ ಇರಬೇಕಲ್ಲ. ಒಂದು ದಿನ ನೋಡಿದರು ಎರಡನೆಯ ದಿನ ನೋಡಿದರು ಅವರು ಕತ್ತನ್ನು ಎಳಗೆ ಇಳಿಸಲೇ ಇಲ್ಲ ಮೂರನೆಯದಿನ ಕ್ಲಾಸ್ ರೂಮಿನ ಟಾಪ್ ಮೇಲೆ ಅಲ್ಲೇನು ಕೋತಿ ಕುಣಿಯತ್ತಿದೆಯ?, ಕಾಗೆ ಹಾರ್ತ ಇದೆಯಾ?, ಇನ್ನು ಮುಂತಾದ ಬರಹಗಳು ಅವರನ್ನು ಕುರಿತು ರಾರಾಜಿಸುತ್ತಿದ್ದವು. ಇದನ್ನು ನೋಡಿದ ಅವರು ಮತ್ತೆ ಮೇಲೆ ನೊಡಲಿಲ್ಲ ತಲೆ ಕೆಳಗೆ ಮಾಡುತ್ತಾ ಪಾಠ ಮಾಡಿ ಆಚೆ ನಡೆದರು.
      ನಮ್ಮ ಉದ್ದೇಶ ಯಾರನ್ನು ನೋಯಿಸುವುದಲ್ಲ. ತರಗತಿಗೆ ಬಂದವರೆ ಹರಟೆ ಹೊಡೆಯುತ್ತಾ, ಕೆಲಸಕ್ಕೆ ಬಾರದ ವಿಷಯಗಳನ್ನು ಮಾತನಾಡುತ್ತಾ 1 ಗಂಟೆ ಸಮಯವನ್ನು ಹಾಳು ಮಾಡುತ್ತಾರೆ. ಕಾಲೇಜಿಗೆ ಎಲ್ಲಾ ವಿದ್ಯಾರ್ಥಿಗಳು ಹರಟೆ ಹೊಡೆಯಲು ಟೈಂ ಪಾಸ್‍ಗೆಂದೆ ಬರುವುದಿಲ್ಲ ಜೀವನದಲ್ಲಿ ಎನನ್ನಾದರು ಸಾಧನೆ ಮಾದಬೇಕೆಂಬ ಕನಸನ್ನು ಸಹ ಇಟ್ಟುಕೊಂಡು ಬಂದಿರುತ್ತಾರೆ.
     ಈ ರೀತಿಯ ಬರಹಗಳನ್ನು ಬರೆಯಲು ಮೂಲ ಕಾರಣ ನಮ್ಮ ಕಾಲೇಜಿನಲ್ಲಿ ಹುಡುಗಿಯರು ಇಲ್ಲದೇ ಇದ್ದುದ್ದು. ಹೇಳಿಕೇಳಿ ನಮ್ಮದು ಬಾಯ್ಸ್ ಕಾಲೇಜು ಆಡಿದ್ದೇ ಆಟ ಉಡಿದ್ದೇ ಲೆಗ್ಗೆ ನಮ್ಮದು.
ಮಂಜುನಾಥ ಹೆಚ್.ಆರ್.
email : manjunathahr1991@gmail.com     
  

Tuesday 15 March 2016

ಒಂತರ ಹುಚ್ಚ್‍ಹುಡುಗ್ರು ಸಾರ್......


ಒಂತರ ಹುಚ್ಚ್‍ಹುಡುಗ್ರು ಸಾರ್

   ಆರಂಭದಿಂದ ಹೀಗಿರಲಿಲ್ಲ ಅದೇನೊ ಡಿಗ್ರಿ ಫೈನಲ್ ಇಯರ್ ಬಂದ ಮೇಲೆ ಒಂದು ತರ ಧಿಮಾಕು ಬಂದು ಬಿಟ್ಟಿತ್ತು. ಯಾರು ಹೇಳಿದ ಮಾತನ್ನು ಕೇಳುವ ಮನಸ್ಥಿತಿ ಇರಲಿಲ್ಲ. ಇಡೀ ಕಾಲೇಜೆ ನಮ್ಮ ಕೈ ಕೆಳಗೆ ಇರಬೇಕೆಂಬುದೇ ನಮ್ಮ ಕಟ್ಟ ಕಡೆಯ ಆಸೆಯಾಗಿತ್ತು. ಕಾಲೇಜಿಗೆ ತಡವಾಗಿ ಹೋಗುವುದು ನಮಗೇನು ಹೊಸದಾಗಿರಲಿಲ್ಲ ಅದೊಂದು ನಿತ್ಯದ ಪರಿಪಾಠಲಾಗಿತ್ತು.
    ಅಂದು ನಮ್ಮ ಕಾಲೇಜಿನ ಇತಿಹಾಸ ತಜ್ಞ, ಹಿಸ್ಟರಿ ಭೀಷ್ಮ, ಮಿಸ್ಟರಿ ಉಪನ್ಯಾಸಕರೊಬ್ಬರು ಕ್ಲಾಸ್ ತಗೊಂಡಿದ್ದರು. ನಾವು ಐದು ಜನ ಪಂಚ ಪಾಂಡವರು ಮಾಮೂಲಿಯಂತೆ ತಡವಾಗಿ ಅವರ ಕ್ಲಾಸಿಗೆ ಎಂಟ್ರಿ ಕೊಟ್ಟೆವು. ಅವರು ನಮ್ಮ ಮುಖವನ್ನೊಮ್ಮೆ ನೋಡುತ್ತಾ ಮರು ಮಾತನಾಡದೆ ಕಣ್ಸ್‍ಸನ್ನೆಯಲ್ಲೆ ಒಳಗೆ ಕರೆದರು.
       ನಾವೇ ರಿಸರ್ವವೇಷನ್ ಮಾಡಿದ ಸೀಟಿನಂತೆ ಕೊನೆಯ ಬೇಂಚ್ ಖಾಲಿ ಇತ್ತು. ಅಲ್ಲಿ ಯಾರು ಕುಳಿತುಕೊಳ್ಳುತ್ತಿರಲಿಲ್ಲ. ನಾವು ಪಾಠದ ಮಧ್ಯೆ ಹೋಗಿದ್ದರಿಂದ ತಲೆ ಬುಡ ಏನು ಅರ್ಥ ಆಗುತ್ತಿರಲಿಲ್ಲ. ಮುಂದೆ ಕುಳಿತವರು ಮಾತ್ರ ಬಿಟ್ಟ ಕಣ್ಣು ಬಿಟ್ಟಂತೆ ಆ ವ್ಯಕ್ತಿಯ ನೋಡುತ್ತಿದ್ದರು. 
ಅದೇನೊ ರಾಜಕೀಯ ಪಕ್ಷದ ಬಗ್ಗೆ ಮಾತನಾಡುತ್ತಿರುವಂತೆ ಅಲ್ಪ ಸುಳಿವು ಸಿಕ್ಕಿತು ನಮ್ಮ ಗೆಳೆಯ ದಿಢೀರನೆ ಎದ್ದು ಕೈ ಮೇಲೆ ಮಾಡಿ ಸಾರ್ ನನಗೊಂದು ಅನುಮಾನ? ತಲೆ ಮೇಲೆತ್ತಿ ಪಾಠ ಮಾಡುತ್ತಿದ್ದ ಅವರು ಇವನನೊಮ್ಮೆ ನೋಡಿ ಏರು ಧ್ವನಿಯಲ್ಲಿ ಏನು? ಎಂದು ಕೇಳಿದರು. ಎನ್.ಟಿ.ಆರ್ ಕಟ್ಟಿದ ಪಕ್ಷ ಯಾವುದು ಸಾರ್?, ಇವನ ಮುಖವನ್ನು ದುರುಗುಟ್ಟುಕೊಂಡು ನೋಡುತ್ತಾ ನೀನು ಕ್ಲಾಸಿಗೆ ಸರಿಯಾಗಿ ಬರೊದಿಲ್ಲ ಪ್ರಶ್ನೆ ಬೇರೆ ಕೇಳ್ತಿಯ ? ಸುಮ್ನೆ ಕುತ್ತುಕೊಳೊ ಎಂದು ಬೈದು ಮುಗಿಸುವ ಮುನ್ನವೇ ನಮ್ಮ ಹುಚ್ಚ್‍ಹುಡುಗ್ರು ಸಂಘದ ತರಲೆ ಮಂಜು ಎದ್ದು ಲೋ ಅವರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಎಲ್ಲಾ ಕೇಳ್ತಿಯಲ್ಲೊ ಸುಮ್ನೆ ಕುತ್ತುಕೊಳೊ. ಎಂದು ಹಾಸ್ಯ ಚಟಾಕಿ ಹಾರಿಸಿದನು. 
      ಅವನು ಹೇಳಿದ ಮಾತಿಗೆ ಇಡೀ ತರಗತಿ ನಗೆಗಡಲಲ್ಲಿ ಮುಳುಗಿತು. ನಮ್ಮ ಹಿಸ್ಟರಿ-ಮಿಸ್ಟರಿಗೆ ಅವಮಾನವಾಗಿ ನಮ್ಮನ್ನು ಬಿರು ನುಡಿಗಳಿಂದ ಬೈದು ಆಚೆ ಹೊರಟು ಹೋದರು. ನಮ್ಮ ಉದ್ದೇಶ ಅವರನ್ನು ಅವಮಾನಿಸುವುದಾಗಿರಲಿಲ್ಲ ಕ್ಲಾಸಿನಲ್ಲಿ ಪಾಠವನ್ನು ಮಾಡದೆ ಕೆಲಸಕ್ಕೆ ಬಾರದ ವಿಷಯವನ್ನು ಒದರುತ್ತಿದ್ದರು. ಪ್ರತಿದಿನ ಇದನ್ನು ನೋಡಿದ ವಿಧ್ಯಾರ್ಥಿಗಳು ಅವರ ಕ್ಲಾಸಿಗೆ ಬರುವುದನ್ನೇ ಬಿಟ್ಟಿದ್ದರು. ಇದನ್ನು ನೋಡಲಾಗದೆ ಅವರ ಸ್ವಾಭಿಮಾನವನ್ನು ಕೆಣಕ ಬೇಕಾಯಿತು.
ಮಂಜುನಾಥ ಹೆಚ್.ಆರ್.
   email : manjunathahr1991@gmail.com     

Thursday 10 March 2016

ಗೌರವ ಕಲಿಸಿದ ಕನ್ಯೆ


ಗೌರವ ಕಲಿಸಿದ ಕನ್ಯೆ

    ತುಂಬಾ ಒರಟು ಮೈಕಟ್ಟು, ಬಿರು ನಡೆ, ಕಟು ಮಾತು, ಮುಖ ನೋಡಲು ಹೆದರುವ ಹುಡುಗಿಯರು ಹೀಗಿರುವಾಗ ಹೆಣ್ಣಿನ ಬಗ್ಗೆ ಅಸಹನೆ, ಅಶಾಂತಿ. ಯಾರಾದರು ಮಾತನಾಡಲು ಹತ್ತಿರ ಬಂದರೆ ಹೆಣ್ಣು ಎಂಬ ಕಾರಣಕ್ಕೆ ಮುಖ ತಿರುಗಿಸಿಕೊಂಡು ಹೋಗುವ ಮನೋಭಾವ ನನ್ನದು. ನನಗೆ ಜನ್ಮ ನೀಡಿರುವವಳು ಒಬ್ಬಳು ಹೆಣ್ಣು, ನನ್ನ ಒಡ ಹುಟ್ಟಿದ ಅಕ್ಕ ಒಬ್ಬಳು ಹೆಣ್ಣು ಎಂಬುದನ್ನು ಮರೆತು ಹೆಣ್ಣಿನ ಬಗ್ಗೆ ಒಂದು ರೀತಿಯ ಅಪವಾದದ ಮನೋಭಾವವಿತ್ತು. 
   ಮನೆಗೆ ಹಿರಿಯ ಮಗ ನಾನೇ ಪ್ರತಿ ಕೆಲಸದಲ್ಲೂ ನಾನೇ ಇರಬೇಕು. ಎಲ್ಲಾ ಹೊರೆ ನನ್ನ ಮೇಲೆ. ಅವಳು ಹೆಣ್ಣು ಎಂಬ ಮಾತ್ರಕ್ಕೆ ಕೆಲವು ಕೆಲಸದಲ್ಲಿ ರಿಯಾಯ್ತಿ. ತಮ್ಮ ಚಿಕ್ಕವನು. ಇನ್ನೂ ಶಾಲೆಯ ವಿಷಯಕ್ಕೆ ಬಂದರೆ ಶಾಲೆಯಲ್ಲಿ ಸಿಗುವ ಎಲ್ಲಾ ಸವಲತ್ತು ಅವರಿಗೆ ನಾವು ಗಂಡು ಮಕ್ಕಳಾದ ಕಾರಣ ಅದರ ಭಾಗ್ಯ ನಮಗಿಲ್ಲ. ಶಿಕ್ಷಕರನ್ನ ಕೇಳಿದರೆ ಅವರ ಮೇಲೆ ಮೊದಲಿನಿಂದ ಶೋಷಣೆಯಾಗುತ್ತಿದೆ. ಅವರನ್ನ ಮೆಲೆತ್ತಲು ಸರ್ಕಾರ ಅವರಿಗೆ ಇಂತಹ ಸೌಲಭ್ಯವನ್ನ ನೀಡುತ್ತಿದೆ ಎನ್ನುತ್ತಾರೆ. ಅದರಲ್ಲಿ ನನ್ನ ನಂಬಿಕೆಯೇನು ಇರಲಿಲ್ಲ ಯಾಕೆಂದರೆ ಅವರೇ ಹೇಳಿದಂತೆ ವೇದಗಳ ಕಾಲದಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ಇತ್ತು. ಇದು ನನ್ನ ತಲೆಯಲ್ಲಿ ಆಳವಾಗಿ ಬೇರೂರಿದ್ದು. ಇದು ಸಾಲದೆಂಬಂತೆ ಉದ್ಯೂಗದಲ್ಲಿ ಅವರಿಗೆ ಮೀಸಲಾತಿ ಇದೆಲ್ಲ ಕೇಳಿ ಮನಸ್ಸಿಗೆ ನೋವಾಗಿದ್ದು ಉಂಟು.
    ಆಗ ಬಿ.ಎಡ್ ವಿದ್ಯಾರ್ಥಿ ಜೀವನದ ಆರಂಭದ ದಿನಗಳು ಆಕಸ್ಮಿಕವಾಗಿ ಒಂದು ಹುಡುಗಿ ತನ್ನ ಪರಿಚಯ ಮಾಡಿಕೊಂಡಳು. ನನಗೆ ಮುಖ ನೋಡಲು ಆಗದ ಸ್ಥಿತಿಯಲ್ಲಿ ದೂರದಿಂದಲೇ ಮಾತನಾಡಿಸಿ ಕಳಿಸಿದೆ. ಮತ್ತೆ ಮಾರನೇ ದಿನ ಹಾಯ್ ಮಂಜು ಟಿಫನ್ ಆಯ್ತ ಎಂಬ ಪ್ರಶ್ನೆಗೆ ಆಗಿಲ್ಲ ಅಂದ್ರೆ ಕೊಡಿಸ್ತಿರ ಎಂಬ ಕೋಪದ ನುಡಿ ಹೊರ ಬಂತ್ತು. ಬೇರೆ ಯಾರಾದರು ಆಗಿದ್ದಿದ್ದರೆ ಇವನ ಸಹವಾಸವೇ ಬೇಡವೆಂದು ದೂರ ಉಳಿಯುತ್ತಿದ್ದರು ಆದರೆ ಅವಳು ನನ್ನನ್ನು ಬದಲಾಯಿಸಲು ಪಣ ತೊಟ್ಟವಳಂತೆ ನಾನು ಏನೆ ಮಾತನಾಡಿದರು. ಹೇಗೆ ಮಾತನಾಡಿದರು ಅವಳು ಮಾತ್ರ ಕೋಪ ಮಾಡಿಕೊಳ್ಳದೆ. ನಗು ಮುಖದಿ ಮಾತನಾಡುತ್ತಿದ್ದಳು. ಅವಳು ಮಾತನಾಡುವಾಗ ನನ್ನ ದೃಷ್ಟಿ ಬೇರೆಡೆಗೆ ಇರುತ್ತಿತ್ತು. ರೀ ಆ ಕಡೆಯಲ್ಲ ನಾನಿರುವುದು ಇಲ್ಲಿ ನನ್ನ ಮುಖ ನೋಡಿಕೊಂಡು ಮಾತನಾಡಿ ಎಂದು ನಗು ಮುಖದಿ ನನ್ನ ಒಳ ಅಹಂಕಾರವನ್ನು ಕೆಣಕಿದಳು. 
   

ಅಂದಿನಿಂದ ನಾನ್ ಯಾರಿಗೂ ಹೆದರದವನಲ್ಲ ಅವಳ ಮುಖ ಅಷ್ಟೆ ತಾನೇ, ನೋಡಿಕೊಂಡು ಮಾತನಾಡಿದರೆ ಆಯ್ತು ಎಂದು ಅಂದಿನಿಂದ ಅವಳ ಮುಖವನ್ನು ನೋಡಿ ಮಾತನಾಡಲು ಆರಂಭಿಸಿದೆ. ನಿಧಾನವಾಗಿ ನನಗೆ ಗೊತ್ತಿಲ್ಲದೆ ನಾನು ಬದಲಾಗುತ್ತಾ ಹೋದೆ. ಆಗಲೇ ತಿಳಿದಿದ್ದು ಹೆಣ್ಣು ಎಂದರೆ ಸಹನೆ, ಹೆಣ್ಣು ಎಂದರೆ ತಾಳ್ಮೆ, ಹೆಣ್ಣು ಎಂದರೆ ಶಾಂತಿ, ಪ್ರೀತಿ ಎಂದು.

ಮಂಜುನಾಥ ಹೆಚ್.ಆರ್
email : manjunathahr1991@gmail.com

Wednesday 9 March 2016

ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

       ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

     ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಪ್ರಕಾರಗಳನ್ನ ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಕಾಣಬಹುದು. ಇದು ಕನ್ನಡ ಭಾಷೆ ನಡೆದು ಬಂದ ದಾರಿಯ ಬಗ್ಗೆ ತಿಳಿಸುತ್ತದೆ. ಅವುಗಳನ್ನ ನಾವುಗಳು ಇಂದಿಗೆ ಬಳಸುತ್ತಿದ್ದೇವೆಯೇ ಎಂಬುದು ನನ್ನ ಪ್ರಶ್ನೆ? ಕಾಲ ಬದಲಾದಂತೆ ಭಾಷೆಯು ಸಹ ತನ್ನಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಕನ್ನಡ ಆರಂಭದಲ್ಲಿ ಬಳಸುತ್ತಿದ್ದ ಎಷ್ಟೋ ಪದಗಳು ಇಂದು ಬಳಕೆಯಲ್ಲಿ ಇಲ್ಲ, ಉದಾಹರಣೆಗೆ “ ರೇಫ, ಶಕಟ ರೇಫ ” ಮೊದಲಾದವುಗಳನ್ನು ಕಾಣಬಹುದು.
    ಇಂದಿನ ಪೀಳಿಗೆಗೆ ಬಂದರೆ ಯುವ ಜನಾಂಗದ ಭಾಷೆಯ ಬಳಕೆ ಸರಿ ಇಲ್ಲ ಹಾದಿ ಬೀದಿಯಲ್ಲಿ ಒದರುವ ಪದಗಳು ಹಾಡುಗಳಾಗುತ್ತಿವೆ ಎಂಬ ವಾದ ಹಿರಿಯರದ್ದು. ಇದು ಯಾಕಾಗಬಾರದು. ಒಂದು ವರದಿಯ ಪ್ರಕಾರ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ 36 ಸ್ಥಾನದಲ್ಲಿದೆ ಅಂದರೆ ಇನ್ನು ಕೆಲವೇ ವರ್ಷಗಳಲ್ಲಿ ಇದು ಮರೆಯಾಗುತ್ತದೆ ಎಂದಾಯಿತು. ಇದನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಹಾಗೆಂದ ಮಾತ್ರಕ್ಕೆ ಕನ್ನಡ ಭಾಷೆಯ ಈ ರೀತಿಯ ಬಳಕೆಯಿಂದ ಉಳಿಯುತ್ತದೆ ಎಂಬುದಲ್ಲ ಕೊನೆಯ ಪಕ್ಷ ಈ ರೀತಿಯಂದಾದರು ಕನ್ನಡ ಉಳಿದೀತೆಂಬ ಆಶಾಭಾವನೆ.
    ಹಿರಿಯರು ಹೇಳುತ್ತಿರುವುದು ಸತ್ಯ ಸಂಗತಿ. ಅವರ ಹಿರಿಯರು ಹೇಳಿದ ಮಾತುಗಳನ್ನು ಅವರು ಅನುಸರಿಸಿದ್ದಾರೆಯೇ ? ಇಂದಿಗೂ ಎಲ್ಲಿ ಕೇಳಿದರೂ ಕನ್ನಡ ಉಳಿಸಿ ಎಂಬ ಕೂಗು ಕೇಳುತ್ತದೆಯೇ ವಿನಃ ಕನ್ನಡವನ್ನು ಬೆಳೆಸಿ ಎಂಬುದನ್ನು ನಾನಂತೂ ಕೇಳಿಲ್ಲ ಎರಡಕ್ಕೂ ವ್ಯತ್ಯಾಸವಿದೆ. ಭಾಷೆಯ ಬೆಳವಣಿಗೆಯಾದಂತೆ ಅದು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. 
      ಇನ್ನು ಅಲ್ಪಪ್ರಾಣ, ಮಹಾಪ್ರಾಣ ಗೊತ್ತಿಲ್ಲ ಅನ್ನೂ ವಾದ ಇದಕ್ಕೆ ಕಾರಣ ಯಾರೂ? ನಮ್ಮ ಶಿಕ್ಷಕರು ಅವರು ಮಾಡುವ ಸಣ್ಣ ತಪ್ಪುಗಳು ಇಂದು ಇಲ್ಲಿ ಮಾತನಾಡುತ್ತಿವೆ. ಜನ ಹೊಸದನ್ನು ಬಯಸುವ ಕಾಲವಿದು ಆದ್ದರಿಂದ ಭಾಷೆ ಬಳಕೆ ಹೇಗಿರಬೇಕು, ಬರವಣಿಗೆ ಹೇಗಿರಬೇಕು, ಪದ ಬಳಕೆ ಹೇಗಿರ ಬೇಕು ಎಂದು ಅವರೇ ನಿರ್ಧಾರ ಮಾಡುತ್ತಾರೆ. 
    ಕನ್ನಡ ಒಂದೇಯಲ್ಲ ಅನೇಕ ಭಾಷೆಗಳು ಇಂತಹುದೇ ಸಮಸ್ಯಯನ್ನ ಎದುರಿಸುತ್ತಿವೆ. ಇಂದಿನ ಯುವ ಜನತೆ ನಮಗೆ ಏನು ಬೇಕು ಅದನ್ನು ಇಟ್ಟುಕೊಳ್ಳುತ್ತಾರೆ ಬೇಡವಾದದನ್ನು ಬಿಟ್ಟು ಬಿಡುತ್ತಾರೆ. ಭಾಷೆಯ ವಿಚಾರದಲ್ಲೂ ಹಾಗೆಯೇ ತಮಗೆ ಬೇಕಾದ ರೀತಿಯಲ್ಲಿ ಭಾಷೆಯನ್ನ ಉಳಿಸಿಕೊಂಡು ಬೆಳೆಸಲು ಹೊರಟಿದ್ದಾರೆ ಇದು ತಪ್ಪಲ್ಲ ಯಾವುದೇ ಒಂದು ವೆವಸ್ಥೆಗೆ ಕಚ್ಚಿಕೊಳ್ಳುವ ಮನೋಗುಣ ಇವರದಲ್ಲ. ಭಾಷೆ ಹೇಗೆ ಬೆಳೆದರೇನು ಕನ್ನಡ, ಕನ್ನಡವಾಗಿದ್ದರೆ ಸಾಲದೇ.





               ಮಂಜುನಾಥ ಹೆಚ್. ಆರ್


Monday 7 March 2016

ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ?


ಮೊದಲ ನೋಟವೇ ಸಾಕಿತ್ತು.......! 
   ಮೋಡದ ನಡುವೆ ಮಳೆ ಹನಿಯೊಂದು ಇಣುಕಿ ಭೂಮಿಯನ್ನು ಸ್ಪರ್ಶಿಸುವಂತೆ ಜನ ತುಂಬಿದ್ದ ಬಸ್ಸಿನಲ್ಲಿ ಆಕೆಯ ಕೈ ಸೋಕಿದಾಗ ಮೈಯಲ್ಲೆನೋ ರೋಮಾಂಚನ, ಮನದಲ್ಲಿ ತಳಮಳ ಹೃದಯದ ಬಡಿತ ನನ್ನ ಮಾತು ಕೇಳದೇ ಜೋರಾಗಿ ಬಡಿಯಲಾರಂಭಿಸಿತು. ಜನರ ನೂಕು-ನುಗ್ಗಲಿನಿಂದ ಬಸ್ಸಿನ ಒಳಗೆ ಹೋದೆ ಆಕೆಯನ್ನು ಬಿಟ್ಟು. ಆ ಜನರ ಮಧ್ಯದಲ್ಲಿ ಅವಳ ಮುಖವನ್ನು ನೋಡಲು ಹರಸಾಹಸವನ್ನು ಪಟ್ಟು. ಅವಳ ಕೇಶದ ಮರೆಯಿಂದ ಸುಂದರ ನಗುಮೊಗವನ್ನು ಒಮ್ಮೆ ತೋರಿಸಿದಳು.
  ನನ್ನ ಹೃದಯದ ಸಂತೋಷಕ್ಕೆ ಪಾರವೇ ಇರಲಿಲ್ಲ, ನೋಡಿದಷ್ಟು ನೋಡಬೇಕೆನಿಸುತ್ತಿತ್ತು ಅವಳ ನಗುವನ್ನ. ನನ್ನ ಆನಂದವನ್ನು ಅದುಮಿಡಲಾಗದೆ ಆ ಕ್ಷಣವೇ ಗೆಳೆಯನಿಗೆ ಅವಳ ವರ್ಣನೆಯನ್ನು ಮೆಸೆಜ್ ಮೂಲಕ ಹರಿದುಬಿಟ್ಟೆ. ಅವನಿಂದ ಒಂದು ರೀಪ್ಲೇ ಬರದಿದ್ದರು ನನ್ನ ವರ್ಣನೆ ಸಾಗುತ್ತಿತ್ತು. ಅವಳು ನನ್ನೊಮ್ಮೆ ನೋಡಿದರೆ ಸಾಕು ನನ್ನ ಜೊತೆ ಮಾತನಾಡಿದ ಅನುಭವವಾಗುತ್ತಿತ್ತು. ನನ್ನ ನೋಡಿ ನಕ್ಕರೆ ಸಾಕು ನನ್ನ ಜೊತೆ ಏಳು ಹೆಜ್ಜೆ ಹಾಕಿದ ಹಾಗೆ, ಮುಂಗುರುಳನ್ನು ಪದೇ ಪದೇ ಕಿವಿಯ ಕಡೆ ಸಿಕ್ಕಿಸುವಾಗ ನನ್ನ ಮುಖದ ಸ್ಪರ್ಶವಾದಂತೆ, ಕಣ್ ರೆಪ್ಪೆಗಳು ನನ್ನನ್ನೆ ಆಕೆಯ ಬಳಿಗೆ ಕರೆದಂತೆ ಕುಡಿ ನೋಟವು ನನ್ನ ಹೃದಯವು ಅವಳ ಹೃದಯವನ್ನು ಸೇರಲು ಅನುಮತಿಯನ್ನು ನೀಡಿದಂತೆ ಬಾಸವಾಗುತ್ತಿತ್ತು. ಅವಳ ಮಾತಿಗೆ ಸಹಕರಿಸುವ ತುಟಿಯು…............. ! ಬೇಡ ಬಿಡಿ ?  ಒಟ್ಟಾರೆ ಚಿನ್ನದ ಗಣಿ, ಕಾವೇರಿ ನದಿ, ಆ ಚಂದಿರನನ್ನು ಇವಳಿಗೆ ಹೋಲಿಸಿದರೆ ಕಡಿಮೆಯೇ. 
   ನೋಡಿದ ಹುಡುಗಿಯ ಮಾತನಾಡಿಸಬೇಕೆಂದು ಆ ಜನರ ನೂಕುನುಗ್ಗಲಿನಿಂದ ಜಗಳವಾಡುತ್ತಾ ದಾರಿ ಬಿಡಿಸಿಕೊಂಡು ಅವಳು ಇರುವಲ್ಲಿಗೆ ಬರುವುದರೊಳಗೆ ಅವಳು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಳು. ಇರಲಿ ಇರಲಿ ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ಎಂದು ಅಂದಿನಿಂದ ಇಂದಿನವರೆಗೂ ಅವಳನ್ನ ಹುಡುಕುತ್ತಲೇ ಇದ್ದೇನೆ.  
ಮಂಜುನಾಥ ಹೆಚ್. ಆರ್

Saturday 5 March 2016

ಬಸ್ಸಿನಲ್ಲೊಂದು ವಿಶ್ವ ಮಾನವ ಗೀತೆ

ಮಾನವೀಯತೆ ನಮಗೂ ಇದೆ........? 

     ಇತರೆ ಪ್ರಾಣಿಗಳಿಗಿಂತ ಬುದ್ಧಿಜೀವಿ ಮಾನವನೆಂದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಆ ಬುದ್ಧಿ ಜೀವಿಗೆ ಯೋಚಿಸುವ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಪ್ರೀತಿ, ಪ್ರೇಮ, ವಾತ್ಸಲ್ಯ ಕರುಣೆ ಇವೆಲ್ಲವುದರ ಅರಿವಿದೆ. ಇದರ ಜೊತೆಗೆ ಅಸಹಾಯಕರನ್ನು ಕಂಡರೆ ಮರುಗುವ ಮತ್ತು ಅವರ ಮೇಲೆ ಪ್ರೀತಿಯನ್ನು ತೋರುವ ಔದಾರ್ಯವು ಸಹ ಇದೆ. ಇದು ಭಾರತೀಯರಿಗೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು ಆದರೆ ಇದು ವಾಸ್ತವವಾಗಿ ನಡೆಯುತ್ತದೆಯೋ ಅಥವಾ ಮೇಷ್ಟು ಪಾಠ ಮಾಡುವ ಪುಸ್ತಕದ ಬದನೆಕಾಯಿ ಅಷ್ಟೆಯೇ ಎಂದು ಕೊಂಡಿದ್ದೆ ಆದರೆ ನಿಜವಾಗಿಯೂ ನನ್ನ ಅನುಭವಕ್ಕೆ ಬರುತ್ತದೆ ಎಂದು ಭಾವಿಸಿರಲಿಲ್ಲ.
    ಅದೊಂದು ದಿನ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದೆ ಸಂಜೆಯಾದ್ದರಿಂದ ಮಾಮೂಲಿಯಾಗಿ ಜನ ಸಂದಣಿ ಇತ್ತು ಖಾಸಗಿ ಬಸ್ ತಡವಾಗಿ ತಲುಪಬಹುದೆಂದು ಸರ್ಕಾರಿ ಬಸ್ ಅವಲಂಬಿಸಿ ಹೊರಟೆ ಬಸ್ಸಿನಲ್ಲಿ ಸೀಟುಗಳೆಲ್ಲ ತುಂಬಿ ಕಂಡಕ್ಟರ್ ಸೀಟಿನ ಪಕ್ಕದಲ್ಲಿ ಖಾಲಿ ಇರುವುದನ್ನು ನೋಡಿ ಅಲ್ಲೆ ಕುಳಿತೆ. ಒಬ್ಬನೆ ಇದ್ದದ್ದರಿಂದ ವಾಡಿಕೆಯಂತೆ ಹಾಡನ್ನು ಕೇಳಲು ಕಿವಿಗೆ ಇಯರ್ ಫೋನ್ ಸಿಕ್ಕಸಿ ಮೆಲೋಡಿಯಸ್ ಸಾಂಗ್ ಕೇಳುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಯಾರೊ ಕಿಟಾರನೆ ಕಿರುಚಿದ ಹಾಗೆ ಕೇಳಿಸಿತು. ಕಿವಿಯಲ್ಲಿನ ಇಯರ್ ಫೋನ್ ತೆಗೆದು ಮುಂದೆ ನೋಡಿದರೆ ಒಂದು ಮಗು ಜೋರಾಗಿ ಅಳುತ್ತಿರುವುದು ಕೇಳಿಸಿತು. 
   ಸುಮಾರು 20 ಕಿ.ಮೀ ಬಸ್ಸು ಮುಂದೆ ನಡೆಯಿತು. ಮಗು ಒಂದೆ ಸಮನೆ ಅಳುತ್ತಿತ್ತು ನಾನು ಎನಾದರೂ ಸಹಾಯ ಮಾಡೋಣವೆಂದರೆ ಗಂಡು ಹುಡುಗ ಏನು ಮಾಡಲು ಸಾಧ್ಯ. ಪಕ್ಕದಲ್ಲೆ ಕುಳಿತಿದ್ದ ಸುಮಾರು 40 ವರ್ಷದ ಆಂಟಿ ಮಗುವನ್ನು ಎತ್ತಿ ಆಡಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರು ಆದರೆ ಮಗು ಅಳುವನ್ನು ನಿಲ್ಲಿಸಲಿಲ್ಲ. ನಂತರ ಅವರ ಮುಂದೆ ಕುಳಿತಿರುವ ಸುಮಾರು 60 ವರ್ಷ ವಯಸ್ಸಿನ ಯಜಮಾನರೊಬ್ಬರು ಮಗುವಿಗೆ ನಿದ್ರೆ ಇರಬೇಕು ನಿಧಾನವಾಗಿ ಮಲಗಿಸಿ ಎಂದು ಹೇಳಿದರು ಅದು ಪ್ರಯೋಜನಕ್ಕೆ ಬರಲಿಲ್ಲ. ನಂತರದ ಸರದಿ 75 ವಯಸ್ಸಿನ ಅಜ್ಜಿಯದು, ಮಗುವಿಗೆ ಹಸಿವಾಗಿರಬಹುದೆನೊ ಹಾಲು ಕುಡಿಸಮ್ಮ ಎಂದು ಮಗುವಿನ ತಾಯಿಗೆ ಹೇಳಿದರು. ದಂಪತಿಗಳಿಗೆ ಮದುವೆಯಾಗಿ ಹೆಚ್ಚೆನು ಆಗಿರಲಿಲ್ಲ 2 ವರ್ಷ ಆಗಿರಬಹುದು. ಅದು ಅಲ್ಲದೆ ಮೊದಲ ಪಾಪು, ಮಗುವನ್ನು ಹೇಗೆ ಜೋಪಾನ ಮಾಡಬೇಕು, ನೋಡಿಕೊಳ್ಳಬೇಕು ಅದೆಲ್ಲ ಇರಲಿ ಹೇಗೆ ಹಾಲು ಕುಡಿಸಬೇಕು ಎಂದು ತಿಳಿದಿಲ್ಲದಂತೆ ಕಾಣುತ್ತಿತ್ತು ಅದು ಅಲ್ಲದೆ ಬಸ್ಸಿನಲ್ಲಿ ಹೇಗೆ ಎಂಬುದು ಅವರ ಚಿಂತೆ ಸ್ವಲ್ಪ ಮುಜುಗರ ಪಟ್ಟುಕೊಳ್ಳುತ್ತಲೆ ಮಗುವನ್ನು ಸಮಾಧಾನ ಪಡಿಸುತ್ತಿದ್ದರು.
    ಇಡೀ ಬಸ್ಸಿನಲ್ಲಿ ಇರುವವರೆಲ್ಲ ಒಂದಿಷ್ಟು ಬೇಜಾರು ಪಟ್ಟುಕೊಳ್ಳದೆ ಮಗುವನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಅದು ಸಾಧ್ಯವಾಗಲಿಲ್ಲ ಮಧುಗಿರಿಯಿಂದ ಬೆಂಗಳೂರಿಗೆ ಬರುವವರೆಗೂ ಹೀಗೆ ಎಲ್ಲರು ಮಗುವನ್ನು ತಮಗೆ ಅನ್ನಿಸಿದ ರೀತಿಯಲ್ಲಿ ಸಮಾಧಾನ ಪಡಿಸಿದರು ಅದು ಪ್ರಯೋಜನವಾಗಲಿಲ್ಲ.
   ಕೊನೆಗೆ ಒಬ್ಬರು ಸೀಟಿನಿಂದ ಮೇಲೆದ್ದು ಮಗುವಿಗೆ ಏನೋ ಪ್ರಾಬ್ಲಮ್ ಆಗಿರಬೇಕು ನೆಲಮಂಗಲದಲ್ಲಿ ನನಗೆ ಗೊತ್ತಿರೂ ಒಬ್ಬರು ಡಾಕ್ಟರ್ ಇದರೆ ಅವರಿಗೆ ಫೋನ್ ಮಾಡಿ ಹೇಳ್ತಿನಿ ನೀವ್ ಅಲ್ಲಿಗೆ ಹೋಗಿ ಟ್ರೀಟ್‍ಮೆಂಟ್ ತಗೊಂಡು ಬೇರೆ ಬಸ್ಸಿಗೆ ಬನ್ನಿ ಎಂದರು. ಮತ್ತೋಬ್ಬರು ಮೇಲೆದ್ದು ಸಾರ್ ನಿಮಗೆ ದುಡ್ಡು ಏನಾದ್ರು ಬೇಕಾದ್ರೆ ಹೇಳಿ ನಮ್ಮಿಂದ ಎಷ್ಟು ಆಗುತ್ತೊ ಸಹಾಯ ಮಾಡ್ತಿವಿ. ಈ ಮಾತಿಗೆ ಬಸ್ಸಿನಲ್ಲಿ ಇದ್ದವರೆಲ್ಲ ಧ್ವನಿಗೂಡಿಸಿದರು. ಪ್ರಯಾಣಿಕರ ಒಪ್ಪಿಗೆ ಪಡೆದು ಬಸ್ಸನ್ನು ಆಸ್ಪತ್ರೆಯ ಹತ್ತಿರ ನಿಲ್ಲಿಸಿ ಅವರನ್ನು ಅಲ್ಲಿಯೇ ಬಿಟ್ಟು ಬಸ್ಸು ಬೆಂಗಳೂರಿಗೆ ನಡೆಯಿತು. 
    ನಿಜಕ್ಕೂ ಇಂಥ ಜನರು ಇದ್ದಾರ ನಮ್ಮ ನಡುವೆ ಎಂದು ಅಶ್ಚರ್ಯ ಪಟ್ಟೆ ಅಂದು ಎಂಥ ಮಾನವೀಯತೆ ನಮ್ಮ ಜನದ್ದು ಎಂದು ಖುಷಿ ಪಟ್ಟೆ. 
                                                    ಮಂಜುನಾಥ ಹೆಚ್.ಆರ್.
E-mail : manjunathahr1991@gmail.com

Thursday 3 March 2016

ಅದ್ದೂರಿ ಮದುವೆ ಏಕೆ .......... ?

ಅದ್ದೂರಿ ಮದುವೆಗೆ ಆರ್ಶಿವಾದವೇ ಶ್ರೀರಕ್ಷೆ ...........

Monday 29 February 2016

ಮದುವೆ ಎಂಬ ಮೂರಕ್ಷರ .......!

 ಕೆಲವರು ಹುಡುಗರಿಗೆ ಮದುವೆ ಅಂದ್ರೆ ಖುಷಿ ಈ ಬ್ರಹ್ಮಚರ್ಯ ಜೀವನಕ್ಕೆ ವಿದಾಯ ಹೇಳಿ ಧಾಂಪತ್ಯ ಜೀವನಕ್ಕೆ ಯಾವಾಗ ಕಾಲಿಡುತ್ತೇವೋ ಎಂದು ಅನ್ನಿಸಿಬಿಟ್ಟಿರುತ್ತದೆ. ಹೆಂಡತಿ ಮಕ್ಕಳು  ಆ ಸಂಸಾರದ ಸುಖವನ್ನು ಅನುಭವಿಸಲು ಹಾತೊರೆಯತ್ತಿರುತ್ತಾರೆ. ಮತ್ತೆ ಕೆಲವರು ಮದುವೆಗೂ ಮುನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಿಕೊಂಡು ನಂತರ ಮದುವೆ ಮಾಡಿಕೊಳ್ಳೋಣವೆಂದುಕೊಂಡಿರುತ್ತಾರೆ. ಹೀಗೆ ಒಬ್ಬೂಬ್ಬರದು ಒಂದೂಂದು ರೀತಿಯ ಕನಸುಗಳಿರುತ್ತವೆ ಮದುವೆಯ ಬಗ್ಗೆ ಭಯ ಇರುವುದಿಲ ಆದರೆ ಕೆಲವರಿಗೆ ಮದುವೆ ಎಂದರೆ ಭಯ ಶುರುವಾಗುತ್ತೆ.
       ಶ್ರೀನಿವಾಸನನ್ನು ನೋಡಿ ದೇವರಾಜ ಬಿದ್ದು ಬಿದ್ದು ನಗುತ್ತಿದ್ದನು ಯಾಕೆಂದು ಅರ್ಥವಾಗದ ನಮಗೆ ಅವನ ನಗು ನೋಡಿ ತಡೆಯಲಾಗದೆ ನಾವು ನಗುತ್ತಿದ್ದವು ಶ್ರೀನಿವಾಸ  ಯಾಕ್ರೊ ಹೀಗೆ ನಗ್ತಿದಿರಾ,? ಅದೇನು ಹೇಳ್ರೋ ನಾನು ನಗ್ತಿನಿ ಎಂದು ಹೇಳಿದ. ದೇವರಾಜ ಮಾತು ಆರಂಭಿಸಿ ಏನಪ್ಪ ನಿನಗೆ ಧೈರ್ಯ ಜಾಸ್ತಿನ, ತಾಳಿ ಕಟ್ಟಬೇಕಾದ್ರೆ ನಿನ್ನ ಕೈ ನಡುಗೊದಿಲ್ಲವ, ನಿನ್ನ ಮದುವೆ ದಿನ ತಾಳಿ ಕಟ್ಟಬೇಕಾದ್ರೆ ನಡುಗಿಸುತ್ತಿದ್ದುದು ನಮ್ಮ ಕೈ ಎಂದು ಗೇಲಿ ಮಾಡಿ ನಗು ಜೋರು ಮಾಡಿದನು. ಶ್ರೀನಿವಾಸ ಮದುವೆಗೆ ಮುನ್ನ ಅನೇಕ ಮದುವೆಗಳಲ್ಲಿ ವರ ವಧುವಿಗೆ ತಾಳಿಯನ್ನು ಕಟ್ಟ ಬೇಕಾದರೆ ವರನ ಕೈ ನಡುಗುವುದು ಸಹಜ ಆದರೆ ಒಣ ಪ್ರತಿಷ್ಟೆಗೆ ಶ್ರೀನಿವಾಸ ಇದನ್ನು ಹೇಳೀದ್ದ ಕೊನೆಗೆ ಎಲ್ಲರ ಅಪಹಾಸ್ಯಕ್ಕೆ ಒಳಗಾಗಿ ಅರೆಕ್ಷಣ ಮಂಕಾಗಿದ್ದನು.
ಇದು ಶ್ರೀನಿವಾಸನದು ಇನ್ನು ಲಕ್ಷಿ ನಾರಾಯಣನನ್ನು ನೆನಸಿಕೊಂಡರೆ ಸಾಕು ಮಧ್ಯ ರಾತ್ರಿ ಕನಸಿನಲ್ಲೂ ನಗು ಬಾರದೆ ಇರಲಾರದು. 
     ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ ಆತನಿಗೆ ಮೊದಲು ಒಂದು ಮದುವೆ ಮಾಡಬೇಕು ಇವನ ಇಬ್ಬರು ತಮ್ಮಂದಿರು ಇನ್ನೆರಡು ವರ್ಷದಲ್ಲಿ ಮದುವೆಗೆ ಬಂದುಬಿಡುತ್ತಾರೆ. ಎಂದು ಮನೆಯಲ್ಲಿ ಮದುವೆಯ ವಿಚಾರದ ಪ್ರಸ್ತಾಪ ಮಾಡಿದರು ಇದಾದ ಒಂದು ದಿನದಲ್ಲಿ ಪಾಪ ಲಕ್ಷಿ ನಾರಾಯಣ ಚಳಿ ಜ್ವರ ಬಂದು ಹಾಸಿಗೆ ಹಿಡಿದನು. ಇದುವರೆಗೂ ಮನೆಯವರಿಗೂ ಗೊತ್ತಿಲ್ಲ ಇತನಿಗೆ ಯಾಕೆ ಚಳಿ ಜ್ವರ ಬಂದಿದ್ದು ಅಂತ. ಇದನ್ನು ಕೇಳಿ ನಾವೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರೆ ನಮ್ಮ ಕಷ್ಟ ನಮಗೆ ನಿಮಗೇನು ನಗು ಬರುತ್ತೆ ಬಿಡ್ರೊ ಲೋ ಎಂದು ಬೇಜಾರಿನಿಂದ ನುಡಿದನು.
    ನಮ್ಮ ಪುಟ್ಟ ರಾಜುವಿನದು ಮತ್ತೊಂದು ತೆರನಾದುದು ಮನೆಗೆ ಹಿರಿಯನಾದ್ದರಿಂದ ಮನೆಯಲ್ಲಿ ಮದುವೆ ಶುಭ ಕಾರ್ಯ ನಡೆದು ಸುಮಾರು ವರ್ಷಗಳು ಕಳೆದಿದ್ದವು. ಸಹಜವಾಗಿ  ನನ್ನ ಮದುವೆಯೇ ಎಂದು ನಂಬು ಸ್ಥಿತಿಯಲ್ಲಿರಲಿಲ್ಲ ಮನೆಯಲ್ಲಿ ಸಹಜವಾಗಿ ಹಿರಿಯರು ಹೆಣ್ಣು ನೋಡಲು ಆರಂಬಿಸಿದರು ಈತ ಮನೆ ಬಿಟ್ಟು ತೋಟ ಸೇರಿದ. ಯಾಕೋ ಮನೆ ಬಿಟ್ಟು ತೋಟ ಸೇರಿದಿಯ ಎಂದು ಕೇಳಿದರೆ ಮದುವೆ ಎಂದ ಹೌದು ಕಣೊ ನಿನಗೆ ಮದುವೆ ಮಾಡ್ತಿರೋದು ಅದಕ್ಕೆ ನಾನು ಮನೆ ಬಿಟ್ಟು ತೋಟದ ಮನೆಯಲ್ಲಿ ಇದ್ದಿನಿ ಎಂದ ಅಲ್ಲ ಕಣೊ ಮದುವೆ ಅಂದ್ರೆ ಎಲ್ಲರೂ ಖುಷಿ ಪಡ್ತಾರೆ, ನೀನ್ ನೊಡಿದ್ರೆ ಭಯ ಆಗುತ್ತೆ ಅಂತ ಹೇಳ್ತಿದಿಯಲ್ಲ ಮರಾಯ ಎಂದು ಅವನನ್ನು ಮನೆಗೆ ಕರೆ ತಂದಿದಾಯ್ತು.
   ರೇಣುಕಯ್ಯ ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿ ಮದುವೆ ನಡೆದ ಒಂದು ದಿನದಲ್ಲಿ ನಮ್ಮ ಬಳಿ ಬಂದು ಕಣ್ಣೀರಾಕಿದ್ದು ಉಂಟು. ಅದು ಸಂತೋಷಕ್ಕೊ ಅಥವಾ ದುಃಖಕ್ಕೊ ತಿಳಿಯದು ಆದರೆ ಈ ಬ್ಯಾಚುಲರ್ ಲೈಫ್ ಮತ್ತೆ ಬಾರದು ಅದು ಬರಿ ನೆನಪು ಮಾತ್ರ. 
ಮಂಜುನಾಥ ಹೆಚ್.ಆರ್.

E – mail : manjunathahr1991@gmail.com



ಗೆಳೆಯನ ಫಸ್ಟ್ ಲವ್ ಲೆಟರ್.........!
  
  ಮಳೆಗಾಲದಲ್ಲಿ ಮಳೆ ಬೀಳುವ ರೀತಿ ಟಿನೇಜ್‍ನಲ್ಲಿ ಮೋಹನ್‍ಗೆ ಲವ್ ಆಗಿತ್ತು. ಮಾನವ ಅನ್ನೊ ಪ್ರಾಣಿಗೆ ಲವ್ ಆದ್ರೆ ಏನೇನ್ ಆಗುತ್ತೋ ಆ ಎಲ್ಲ ಲಕ್ಷಣಗಳು ಅವನಲ್ಲಿ ಎದ್ದು ಕಾಣುತ್ತಿದ್ದವು. ಅದು ಅವನ ಅತ್ತೆ ಮಗಳು ಜ್ಯೋತಿಯ ಮೇಲೆ. ಅವಳಿಗೆ ತನ್ನ ಪ್ರೀತಿಯನ್ನ ಹೃದಯಕ್ಕೆ ತಟ್ಟುವಂತೆ ಹೇಗೆ ಹೇಳಬೇಕು ಎಂದು ಗೊತ್ತಾಗದೆ ತುಂಬ ತಲೆ ಕೆಡಿಸಿಕೊಂಡು ಮಟ ಮಟ ಮಧ್ಯಾಹ್ನದಲ್ಲಿ ನಕ್ಷತ್ರ ಎಣಿಸೊ ಕೆಲಸ ಮಾಡುತ್ತಿದ್ದ. ಆಗಲೊ ಈಗಲೊ ಮರಿಹಾಕುವ ಬೆಕ್ಕಿನ ಹಾಗೆ ಇತ್ತು ಅವನ ಪರಿಸ್ಥಿತಿ.
   ಅವನ ಪಾಡನ್ನು ನೋಡಿಯು ನೊಡಲಾಗದೆ ಇರಲು ನಾವೇನು ಅವನ ಸಂಬಂಧಿಗಳಾಗಿರಲಿಲ್ಲ ಅದೇನೋ ಚಡ್ಡಿ ದೋಸ್ತಿ ಅಂತರಲ್ಲ ಹಾಗೇನು ಇರಲಿಲ್ಲ ಚಿಕ್ಕ ವಯಸ್ಸಿನಲ್ಲಿ ಚಡ್ಡಿ ಎಲ್ಲಿಗೆ ಹಾಕೊಬೇಕು ಎಂದು ಗೊತ್ತಾಗದೆ ತಲೆ ಮೇಲೆ ಹಾಕಿಕೊಂಡು ಓಡಾಡುತ್ತಿದ್ದ ದೋಸ್ತಿಗಳು. ಎಲ್ಲ ಫ್ರೆಂಡ್ಸ್ ತಮ್ಮ ತಮ್ಮ ಕಷ್ಟ-ಸುಖಗಳನ್ನ ತಮ್ಮ ತಮ್ಮ ಫ್ರೆಂಡ್ಸ್ ಹತ್ರ ಹೇಳಿಕೊಳ್ಳುವ ಹಾಗೆ ಅವನು ತನ್ನ ಪ್ರೇಮ ಕಥೆಯನ್ನು ನಮ್ಮ ಬಳಿ ಬಿಚ್ಚಿಟ್ಟನು.
ನಿಧಾನವಾಗಿ ಮಹೇಶ್, ಮನು ಯೋಚನೆ ಮಾಡುತ್ತ ಇದಕ್ಕೆ ಒಂದು ಉಪಾಯ ಮಾಡಲೇ ಬೇಕು ಅಂತ ಒಂದು ದಿನ ರಾತ್ರಿ ಮಹೇಶನ ತೋಟದ ಮನೆಯಲ್ಲಿ ಗುಂಡಿನ ಪಾರ್ಟಿ ಇಟ್ಟರು. ಅವರಿಗೆ ಕುಡಿಯುವುದಕ್ಕೆ ಅಂತ ನಾಲ್ಕು ಬಿಯರ್ ಮತ್ತು ಅದರ ಜೊತೆಗೆ ಸ್ನ್ಯಾಕ್ಸ್ ತಂದಿದ್ದನು ಮೋಹನ. ಇದು ಸಾಲದು ಅಂತ ಮೂರು ಜನಕ್ಕೂ ಬಿರಿಯಾನಿ ಕಟ್ಟಿಸಿಕೊಂಡು ಬಂದಿದ್ದನು. ಅದೇ ಫಸ್ಟ್ ಟೈಮ್ ಎಲ್ಲರು  ಹಾಟ್ ಡ್ರಿಂಕ್ಸ್ ಕುಡಿಯುತ್ತಿರುವುದು. ಯಾರೋ ಹೇಳೀದ್ದರಂತೆ ಎಣ್ಣೆ ಹೊಡೆದರೆ ಒಳ್ಳೆ ಒಳ್ಳೆ ಐಡಿಯಾ ಬರುತ್ತವೆ ಅಂತ ಅದನ್ನ ನೆನಪು ಮಾಡಿಕೊಂಡು ಮಹೇಶ ಮೋಹನನಿಗೆ ಈ ಡಬ್ಬ ಐಡಿಯಾ ಕೊಟ್ಟಿದ್ದ ಪಾಪ ಮೂಕ ಪ್ರಾಣಿ ಮುಂದೆ ಬಂದರೆ ಹಾಯುವುದಿಲ್ಲ ಹಿಂದೆ ಬಂದರೆ ಒದೆಯುವುದಿಲ್ಲ ಅಂತ ಸ್ಥಿತಿ ಮೋಹನನದಾಗಿತ್ತು ಮೂಗನ ಕೂಗಿಗೆ ಮೋಡ ಕರಗಿ ಮಳೆ ಹನಿ ಬಂದರು ಬರಬಹುದೆಂದು ನಂಬಿದ್ದ.
   ಅಂದು ಒಂಬತ್ತು ಗಂಟೆಗೆ ಸರಿಯಾಗಿ ಊರು ಖಾಲಿ ಮಾಡಿ ಮಹೇಶನ ತೋಟದ ಮನೆಯನ್ನು ಸೇರಿದರು. ಅಮವಾಸ್ಯೆಯ ಕತ್ತಲಲ್ಲಿ ಹುಣ್ಣಿಮೆಯ ಬೆಳಕನ್ನು ಕಾಣುವ ಆಸೆ ಮೋಹನನದಾಗಿತ್ತು. ತೋಟದ ಮನೆಯ ಬಾಗಿಲನ್ನು ತೆರೆದು ಒಳಗೆ ಮೂರು ಜನರು ಕುಳಿತುಕೊಂಡರು. ಮೋಹನ ಲೋ ನೀವು ಹೇಳಿದ ಹಾಗೆ ಮಾಡಿದಿನಿ ಲವ್ ಲೆಟರ್ ಬರೆಯೋಕೆ ಐಡಿಯಾ ಕೊಡ್ರೊ, ಇವನ ಮಾತು ಮುಗಿಯುವುದರಲ್ಲಿ ಮನು ನಾವಿನ್ನು ಎಣ್ಣೆನೇ ಹೊಡೆದಿಲ್ಲ ಮೊದಲು ಕುಡಿಯೋಣ ಆಮೇಲೆ ಐಡಿಯಾ ಕೊಡ್ತಿವಿ ಸ್ವಲ್ಪ ಸಮಾದಾನ ಮಾಡ್ಕೊಳೊ.
    ಒಂಬತ್ತು ತಿಂಗಳು ಕಾಯ್ದವನಿಗೆ ಇನ್ನ ಒಂದು ದಿನ ಕಾಯೋಕೆ ಆಗಲ್ವ ಎಂದು ಮನಸ್ಸಿನಲ್ಲಿ ಗೊಣಗುತ್ತ ಲೋಟದೊಳಗೆ ಬಿಯರ್ ಸುರಿದನು ಮೋಹನ. ಮನು ಮೊದಲು  ಸ್ನ್ಯಾಕ್ಸ್ ತಿನ್ನಬೇಕಾ, ಬಿಯರ್ ಕುಡಿಬೇಕಾ ಇದಕ್ಕೆ ಮಹೇಶ ಲೋ ಮನು ನಾನೇನ್ ನಿನ್ನ ಕಣ್ಣಿಗೆ ದೊಡ್ಡ ಕುಡುಕನ ಹಾಗೆ ಕಾಣಿಸ್ತಿದಿದಿನ?, ನನಗೇನೊ ಹಾಗೆ ಕಾಣೀಸ್ತಿದಿಯ ಎಂದನು ಮನು, ಲೋ ಮಾತು ಸಾಕು ಬೇಗ ಕುಡಿದು ನನಗೊಂದು ಒಳ್ಳೆ ಐಡಿಯಾ ಕೊಡ್ರೊ. ಆಯ್ತು ಆಯ್ತು ಕೊಡ್ತಿವಿ, ನೀನು ಹೀಗೆ ಟಾರ್ಚರ್ ಕೊಡ್ತಿದ್ರೆ ನಾವ್ ಹೊರಟೊಗ್ತಿವಿ ಅಷ್ಟೆ. ಒಳ್ಳೆ ಫ್ರೆಂಡ್ಸ್ ಸಹವಾಸ ಆಯ್ತಲ್ಲ, ಆಯ್ತು ಬಿಡ್ರೊ ಮಾತಾಡಲ್ಲ ನಿಮಗೆ ಯಾವಾಗ ಹೇಳಬೇಕು ಅನ್ನಿಸುತ್ತದೆಯೊ ಆಗಲೇ ಹೇಳಿ ಎಂದು ಒಲ್ಲದ ಮನಸ್ಸಿನಿಂದ ಹೇಳಿದ.
    ಮಹೇಶ್, ಮನು ಕುಡಿಯಲು ಆರಂಭಿಸಿದರು ಮೋಹನ್ ನೀನು ಕುಡಿಯೋ ಬೇಡ ಕಣೋ ನೀವು ಕುಡಿಯಿರಿ, ಹೋ ನಿಮ್ಮ ಹುಡುಗಿ ಬೇಜಾರ್ ಮಾಡಿಕೊಳ್ಳುತ್ತಾರೆ ಅಂತನಾ ನಾವ್ಯಾರು ಹೇಳಲ್ಲಪ್ಪ ಕುಡಿಯೋ, ಮೋಹನನ ಮುಖ ಕೆಂಪಾಗಿದ್ದನ್ನು ಕಂಡು ಮನು ಆಯ್ತು ಬಿಡಪ್ಪ ಅದಕ್ಕೆ ಯಾಕೆ ಮುಖ ಊದಿಸ್ಕೊಳ್ತಿಯ. ಚೆನ್ನಾಗಿ ಕುಡಿದು ಮೋಹನ್ ನಾವೀಗ ಎಲ್ಲಿದಿವಿ ಎಂದನು ಮಹೇಶ, ಹಾ! ಎಂದು ರಾಗ ಎಳೆದ ಮೋಹನ್ ಹರಿಶ್ಚಂದ್ರ ಘಾಟಲ್ಲಿ, ಮಗನೇ ಈಗ ನನಗೆ ಲೆಟರ್ ಬರೆಯೋಕೆ ಐಡಿಯಾ ಕೊಡದೆ ಇದ್ರೆ ನಾವು ಎಲ್ಲಿದಿವಿ ಅಂತ ಹೇಳಲ,,,, ಕಳೀಸ್ತಿನಿ?
     ಮಹೇಶ ಇವನ ಕಾಟ ತಡೆಯೋಕೆ ಆಗ್ತಿಲ್ಲ ಇವನಿಗೆ ನೀನೆ ಒಂದು ಐಡಿಯಾ ಕೊಡೊ ಎಂದನು ಮನು. ಲೋ ಮನು ನಾನು ಯಾವ ಎಕ್ಸ್ಸ್‍ಪೀರಿಯನ್ಸ್ ಹ್ಯಾಂಡೊ, ಲವ್ ಬಗ್ಗೆ ನನಗೇನೊ ಗೊತ್ತು ? ನೀನೆ ಹೇಳೊ ಮನು, ನಾನೇನು ನಾಲ್ಕೈದು ಹುಡುಗಿಯರನ್ನ ಲವ್ ಮಾಡಿದಿನಾ? ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ ನೀನೆ ಹೇಳೋ ಎಂದು ಒಬ್ಬರನೊಬ್ಬರು ವಾದ ಮಾಡುತ್ತಿದ್ದರು. ನಿಲ್ಲಿಸ್ರೋ ನಿಮ್ಮ ಗಲಾಟೆನ ನಾನೇನೊ ನೀವುಗಳು ದೊಡ್ಡ ಮೇಧಾವಿಗಳು ಅಂತ ಕರ್ಕೋಂಡು ಬಂದೆನಲ್ಲ ನನ್ನ ಸವೆದು ಹೋದ ಪಾದರಕ್ಷೆಯನ್ನ ತೆಗೆದುಕೊಂಡು ಮುಟ್ಟಿ ನೋಡ್ಕೊಳೊ ಹಾಗೆ ಹೊಡ್ಕೊಬೇಕು.
     ಹಾಗಲ್ಲ ಮೋಹನ, ಸರಿ ನೀನು ಬರೆಯೋಕೆ ಸ್ಟಾರ್ಟ್ ಮಾಡು ಎಂಬ ಮಹೇಶನ ಮಾತಿಗೆ ಸಮಾಧಾನವಾಗಿ ಮೋಹನ ಪೆನ್ನು ಹಿಡಿದು ಮಹೇಶನ ಮಾತಿಗಾಗಿ ಕಾಯುತ್ತ ಕುಳಿತ. ನನ್ನ ಪ್ರೀತಿ ಜ್ಯೋತಿ, ಲೋ ನಾವೇನ್ ಲವ್ ಲೆಟರ್ ಬರಿತಿದಿವ ಇಲ್ಲ ಲೀವ್ ಲೆಟರ್ ಬರಿತಿದಿವ ಇಲ್ಲ ಅಪ್ಪ, ಅಮ್ಮನಿಗೆ ಪತ್ರ ಬರಿತಿದಿವ ನನ್ನ ಪ್ರೀತಿಯ ಜ್ಯೋತಿ ಅಂತೆ ಎಂದು ಮಹೇಶನ ಮೇಲೆ ಮನು ರೇಗಿದನು. ಮೈ ಡಿಯರ್ ಸ್ವಿಟ್ ಗರ್ಲ್, ಹೋ ಇವನು ಹೇಳ್ದ ನೋಡಪ್ಪ ಯಾಕೆ ಹಾಟ್ ಗರ್ಲ ಅಲ್ವ, ಇವನೇನು ದೊಡ್ಡ ಮೇಧಾವಿತರ ಎಲ್ಲ ಗೊತ್ತು ಅನ್ನೊ ಹಾಗೆ ಮಾತಾಡ್ತಾನೆ ಸಾಕು ಮಾಡಪ್ಪ ನಿನ್ನ ಸ್ವಿಟ್, ಹಾಟ್ ಎಂದು ಮಹೇಶ ಮನುವಿನ ಬಾಯಿ ಮುಚ್ಚಿಸಿದ. ಹಾಗೇ ನಿಧಾನವಾಗಿ ಅವರಿಬ್ಬರು ನಿದ್ರೆಗೆ ಜಾರಿದರು.
      ಇವರಿಬ್ಬರನ್ನು  ನೆಚ್ಚಿಕೊಂಡರೆ ನನ್ನ ಪ್ರೀತಿಗೆ ಎಳ್ಳು ನೀರೆ ಎಂದು ತಾನೇ ತನಗೆ ತೋಚಿದ ಹಾಗೇ ಬರೆಯಲು ಆರಂಭಿಸಿದ ಎಂಟು ಹಾಳೆಗಳು ಹರಿದು ಒಂಬತ್ತನೆ ಪತ್ರ ಬರೆಯುವುದರೊಳಗೆ ನಿದ್ರೆಗೆ ಜಾರಿದ್ದ. ಮುಂಜಾನೆ ಯಾರೊ ಎಚ್ಚರಿಸಿದಂತಾಗಿ ಎದ್ದು ಕುಳಿತು ತನ್ನ ಪ್ರೀತಿ ತುಂಬಿದ ಭಾವನೆಗಳನ್ನ ಬಿಳಿ ಹಾಳೆಯ ಮೇಲೆ ಕಪ್ಪು ಅಕ್ಷರಗಳನ್ನ ಮೂಡಿಸಲು ಪ್ರಾರಂಭಿಸಿದ್ದ. ಜ್ಯೋತಿಯನ್ನ ಚಿಕ್ಕವಯಸ್ಸಿನಲ್ಲಿ ಕಂಡದ್ದು, ಕೇಳಿದ್ದು, ಅವಳ ಜೊತೆ ಕಳೆದ ಒಂದೊಂದು ಕ್ಷಣದ ಅನುಭವ ಎಲ್ಲವನ್ನು ಸೇರಿಸಿ ಒಂದು ಪ್ರೇಮ ಪತ್ರವನ್ನು ಬರೆದನು. ಅದು ಎಂತ ಹುಡುಗಿಯಾದರು ಅದನ್ನೊಮ್ಮೆ ಒದಿದರೆ ಸಾಕು ನನಗೆ ಇಂತಹ ಲವ್ವರ್ ಇದ್ದಿದ್ದರೆ ಎಂದು ಒಂದರೆಕ್ಷಣ ಅನ್ನಿಸಿಬಿಡಬೇಕು ಹಾಗಿತ್ತು.
  ಯಾರೋ ಹೇಳಿದ ಮಾತುಗಳು ಮತ್ಯಾರೋ ಬರೆದುಕೊಟ್ಟ ಲೆಟರ್ ನಿಂದ ತಮ್ಮ ಪ್ರೀತಿಯನ್ನ ಗೆಲ್ಲಲು ಸಾಧ್ಯಾವಾಗುವುದು ಕೆಲವು ಸಲ ಮಾತ್ರ ಆದರೆ ಅವನ/ಅವಳ ಮೇಲೆ ನಿಜವಾದ ಪ್ರೀತಿ ಎಂಬುದಿದ್ದರೆ ಅದೇ ಅವನ/ಅವಳ ಕುರಿತು ಪ್ರೇಮ ಪತ್ರವನ್ನು ಬರೆಯಲು ಪ್ರೇರೇಪಿಸುತ್ತದೆ, ಪ್ರೀತಿಯನ್ನು ಪಡೆಯುವ ದಾರಿಯನ್ನು ತೋರಿಸುತ್ತದೆ. 
ಮಂಜುನಾಥ ಹೆಚ್.ಆರ್.
ಮೊ : 8747001391
e-mail : manjunathahr1991@gmail.com