Thursday 31 March 2016

ಎಕ್ಸ್‍ಪೀರಿಯನ್ಸ್ ಲವ್ ಸ್ಟೋರಿ


    ಅಂದು ರಮೇಶ್ ಸರ್ ಸತ್ಯನನ್ನು ಕರೆದು, ಸತ್ಯ ಶಾರ್ಟ್ ಮೂವಿ ಮಾಡ್ಬೇಕು ಒಂದು ಲವ್ ಸಬ್ಜಕ್ಟ್ ತಗೊಂಡು ಒನ್‍ಲೈನ್ ಸ್ಟೋರಿ ಮಾಡ್ಕೊಂಡ್ ಬನ್ನಿ ಜಸ್ಟ್ ಒನ್ ಮಂತ್ ಇದೆ ಅಷ್ಟೆ ಬೇಗ ರೆಡಿ ಮಾಡ್ಬೇಕು, ಮಾಡ್ತಿರಾ ತಾನೆ? ಸತ್ಯ ತಲೆ ಕೆರೆದುಕೊಂಡು ಆಯ್ತು ಸಾರ್ ಮಾಡ್ಕೊಂಡು ಬರ್ತಿನಿ ಎಂದು ಕಾಲೇಜಿನಿಂದ ಹೊರ ಬಂದು ಎದುರಿಗಿದ್ದ ಅರಳಿ ಮರವನ್ನು ನೋಡುತ್ತಿದ್ದ. ಹಿಂದಿನಿಂದ ಬಂದ ಹರ್ಷ ಏನೋ ಸತ್ಯ ರಮೇಶ್ ಸರ್ ಏನೋ ಗುಟ್ಟಾಗಿ ಹೇಳ್ದಾಗಿತ್ತು. 
   ಎಂತದು ಇಲ್ಲಾ ಮರಾಯ ಶಾರ್ಟ್ ಮೂವಿ ಮಾಡೋಕೆ ಒಂದು ಲವ್ ಸಬ್ಜಕ್ಟ್ ತಗೊಂಡು ಒನ್ ಲೈನ್ ಸ್ಟೋರಿ ಮಾಡ್ಬೇಕಂತೆ. ಎಂತ ಚಾನ್ಸೋ ಒಳ್ಳೆ ಸ್ಟೋರಿ ಮಾಡೋ ಪಕ್ಕ ಕ್ಲಿಕ್ ಆಗ್ತಿಯಾ. ಸುಮ್ನೆ ಇರೊ, ಯಾಕೋ? ತಲೆಗೆ ಒಂದ್ ಲವ್ ಸ್ಟೋರಿನೂ ಹೊಳಿತಿಲ್ಲ. ಲೋ ನಿಂದೆ ಒಂದ್ ಸ್ಟೋರಿ ಮಾಡೋ. ಸತ್ಯ ಹರ್ಷನ ಮುಖವನ್ನೊಮ್ಮೆ ಕೋಪದಿಂದ ನೋಡಿ, ನೀನು ನನ್ನ ಹೈಸ್ಕೂಲ್‍ಮೆಟ್, ಆಗಿನಿಂದ ನೋಡ್ತಿದಿಯ ನಾನು ಯಾರನ್ನಾದ್ರು ಲವ್ ಮಾಡಿದ್ನ? ಆಗ ಇರ್ಲಿಲ್ಲ ಈಗ ಇರ್ಬೋದಲ್ಲ ಎಂದು ಅವನಿಗೆ ಕೇಳಿಸದ ಹಾಗೆ ಹೇಳಿದನು. ಅದಕ್ಕೆ ಸತ್ಯ ಏನಂದೆ? ಎನಿಲ್ಲ ನಮ್ಗೆ ಗೊತ್ತಿಲ್ಲದಂಗೆ ಮಾಡ್ರಿಬೋದಲ್ವ. ಲೋ ಹಾಗೇನು ಇಲ್ವೋ.
     ಹಾಗಾದ್ರೆ ಅದುಕ್ಕೋಸ್ಕರನಾದ್ರು ಲವ್ ಮಾಡು, ಏನು? ಹೇಗೂ ನೀನು ಲವ್ ಮಾಡಿಲ್ಲ ಎಕ್ಸಪಿರಿಯನ್ಸ್‍ಗೋಸ್ಕರನಾದ್ರು ಲವ್ ಮಾಡು. ಹೋಗೊ ಲೋ ಎನ್  ಮಾತು ಅಂತ ಹೇಳ್ತಿದಿಯಾ. ಬೇಡ ಅಂದ್ರೆ ಬಿಡಪ್ಪ ನೀನ್ಗೆ ಎಕ್ಸ್‍ಪೀಯನ್ಸ್ ಹಾಗೋವರೆಗೂ ನೀನ್ ಒಂದ್ ಲವ್ ಸ್ಟೋರಿನೂ ಮಾಡಲ್ಲ ಬೇಕಾದ್ರೆ ಖಾಲಿ ಪೇಪರ್ ಮೇಲೆ ಬರ್ದ್ ಕೊಡ್ತಿನಿ. ಹಾಗಾದ್ರೆ ಲವ್ ಮಾಡು ಅಂತಿಯಾ, ವಿಧಿನೇ ಇಲ್ಲಾಪ್ಪ. ಹೇಗೋ ಲವ್ ಮಾಡೋದು? ಅದನ್ನೂ ನಾನೇ ಹೇಳ್ಕೋಡ್ಬೇಕ? ಫ್ಲೀಸ್ ಹೇಳೊ. ಮೊದಲು ಒಂದು ಹುಡುಗಿ ಹುಡುಕು, ಆಮೇಲೆ? ಅವಳತ್ರ ಚನ್ನಾಗಿ ಮಾತಾಡು, ಒಂದೆರಡು ದಿನ ಕಳೆದ ಮೇಲೆ ಅವಳ ಫೋನ್ ನಂಬರ್ ಕೇಳು, ಅವಳಿಗೆ ಏನಿಷ್ಟ ಅಂತ ತಿಳ್ಕೋ ಅದನ್ನ ಕೊಡ್ಸು, ಹೊರಗಡೆ ಸುತ್ತಾಡ್ಸು, ಪ್ರಪೋಸ್ ಮಾಡು, ಅವಳು ಒಪ್ಪಿಕೊಳ್ಳದಿದ್ರೆ? ಅದು ಈಗ ಬೇಕ? ಮುಂದೆ, ಒಪ್ಪ್ಕೋಂಡ್ ಮೇಲೆ, ಅಮೇಲೆ, ಅಮೇಲೆ ನಿನಗಿಷ್ಟ ಬಂದಂಗೆ ಮಾಡು.
   ಸಾಕು ಬಿಡಪ್ಪ ಇಷ್ಟೆ, ಮುಂದೇ ಇನ್ನೇನು ಬೇಡ. ಇದನ್ನ ಸರಿಯಾಗಿ ನೋಟ್ ಮಾಡ್ಕೊಂಡು ಸ್ಕ್ರಿಪ್ಟ್ ಮಾಡು, ಇದೆಲ್ಲಾ ಒಂದ್ ಮಂತ್‍ನಲ್ಲಿ ಆಗುತ್ತ? ಲೋ ನಿನಿನ್ನು ಏಲ್ಲಿದ್ದಿಯಾ ಹುಡುಗೀರು ತುಂಬಾ ಫಾಸ್ಟು ಹೋಗು ಹೋಗು ಎಲ್ಲಾ ಅವರೆ ಕಲಿಸ್ತಾರೆ. ಹಾಗಂತಿಯಾ ಸರಿ ಈಗಲೇ ಒಂದ್ ಹುಡುಗಿ ಹುಡುಕ್ತಿನಿ, ಸರಿ ಬರ್ಲ. ಎಂದು ಸತ್ಯ ಅರಳಿ ಕಟ್ಟೆಯನ್ನು ಬಿಟ್ಟು ಮುಂದೆ ನಡೆದನು. ಅಲ್ಲೆ ಕುಳಿತಿದ್ದ ಹರ್ಷ ಏನಾದ್ರು ಎಡವಟ್ಟಾದ್ರೆ ನಾನ್ ಜವಾಬ್ದಾರನಲ್ಲಪ್ಪ ಎಂದು ಮೆಲು ಧ್ವನಿಯಲ್ಲಿ ಗುನುಗಿದನು. ಏನಾದ್ರು ಕರೆದಾ ಎಂದು ಸತ್ಯ ಹಿಂದಿರುಗಿ ನೋಡಿದ ಅದಕ್ಕೆ ಹರ್ಷ ಎರಡು ಕೈಯನ್ನು ಮೇಲೆತ್ತಿ ನನ್ನ ಆರ್ಶಿವಾದ ನಿನ್ನ ಮೇಲಿದೆ ಹೋಗಿ ಬಾ ಮಗನೆ ಎಂದು ಹಾಸ್ಯವಾಗಿ ನುಡಿದನು. ಎನಾದ್ರು ಎಡವಟ್ಟಾದ್ರೆ ಮಗನೆ ಸಾಬ್ರಾಣಿ ದೂಪನೇ ನಿನಗೆ ಎಂದು ಸತ್ಯ ಹೊರಟು ಹೋದನು. ಯಪ್ಪಾ ಇನ್ನೂ ಒಂದು ತಿಂಗಳು ಇವನ ಕಣ್ಣಿಗೆ ಬಿಳ್ದೇ ಇರೋದೆ ಒಳ್ಳೆದು ಎಂದು ಜಾಗ ಖಾಲಿ ಮಾಡಿದನು ಹರ್ಷ.
ಮಂಜುನಾಥ ಹೆಚ್.ಆರ್.
email : manjunathahr1991@gmail.com

Wednesday 30 March 2016

ಸ್ನೇಹಾ ಅಂದ್ರೆ ಇದೇನಾ..........?

  ಸ್ನೇಹ ಅಂದ್ರೆ ಇದೇ ಅಲ್ವ


 ನನ್ನ ಹತ್ರ ಯಾವುದು ದುಡ್ಡಿಲ್ಲ, ಮಗೂನ ಸ್ಕೂಲಿಗೆ ಸೇರ್ಸಿಬೇಕು ಅರ್ಥಮಾಡ್ಕೋ ನಿನೇನು ಚಿಕ್ಕವನಲ್ಲ ನನ್ನ ಸಂಸಾರದ ಬಗ್ಗೆ ನಾನೂ ಯೋಚ್ನೆ ಮಾಡ್ಬೇಕು ಸರೀನಾ. ಎಂದು ರವೀಶ್ ಫೋನ್ ಕಟ್ ಮಾಡಿದನು.
   ಲಕ್ಷ್ಮಿ ನಾರಾಯಣನ ಅಣ್ಣ ರವೀಶ್ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿರೋದು, ಸಂಬಳ? ಎಷ್ಟೆಂದು ಕೇಳಬೇಡಿ, ಅದು ಬಹುಶಹ ರವೀಶ್‍ಗೂ ಗೊತ್ತಿರಲಿಕ್ಕಿಲ್ಲ ಏಕೆಂದರೆ ಬರುವ ಪೂರ್ತಿ ಸಂಬಳ ಅವನ ಹೆಂಡತಿಯ ಕೈ ಸೇರುತ್ತಿತ್ತು. ಮೊದಲು ಹಿಗಿರಲಿಲ್ಲ ಮದುವೆ ಆದ ಮೇಲೆ ಹಿಗಾಗುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ.
   ಫೋನ್ ಹಿಡಿದು ತಲೆ ತಗ್ಗಿಸಿ ಕುಳಿತಿದ್ದ ಲಕ್ಷ್ಮಿಯ ಮುಂದೆ ವರುಣ್ ಜೋರಾಗಿ ಬೈಕ್‍ನಲ್ಲಿ ಬಂದವನೆ ಧೂಳೆಬ್ಬಿಸಿ ಅವನೆದುರು ಬೈಕ್‍ಗೆ ಬ್ರೇಕ್ ಹೊಡೆದು ನಿಲ್ಲಿಸಿ ಬೈಕ್‍ನಿಂದಿಳಿದು ಲಕ್ಷ್ಮಿಯನ್ನು ಕಿಚಾಯಿಸಿದನು ಲಕ್ಷ್ಮಿ ಏನನ್ನು ಮಾತನಾಡಲಿಲ್ಲ ವರುಣ್ ಲಕ್ಷ್ಮಿಯ ತಲೆಯನ್ನು ಹಿಡಿದು ಮೇಲೆತ್ತಿದನು ಕಣ್ಣಿನಲ್ಲಿ ನೀರು ತುಂಬಿದ್ದನ್ನು ನೋಡಿ. ಯಾಕೋ ಏನಾಯ್ತೊ ಎಂದು ಕೇಳುವ ಬದಲು ಅಣ್ಣನಿಗೆ ಫೋನ್ ಮಾಡಿದ್ದ ಎಂದನು. ಇವನಿಗೆ ವಿದಿ ಇಲ್ಲದೆ ನಿಜ ಹೇಳಬೇಕಾಯಿತು. ನಾನು ಎಷ್ಟು ಸಲ ಹೇಳಿದ್ದಿನಿ ಅವನಿಗೆ ಫೋನ್ ಮಾಡ್ಬೇಡ ಅಂತ ನನ್ನ ಮಾತೇ ಕೇಳಲ್ಲ ಈಗ ಸಮಾಧಾನ ಆಯ್ತ ಎಂದು ಏರು ಧ್ವನಿಯಲ್ಲಿ ಕೂಗಿದನು.
  ಅದು ಹಾಗಲ್ಲ ಕಣೊ ವರುಣ್ ಮತ್ತೇಗೋ ಅವನೊಬ್ಬ ಅಣ್ಣ, ಯಾವಾಗಲೂ ಹೆಂಡತಿ ಸೆರಗು ಹಿಡುಕೊಂಡು ಒಡಾತ್ತಿರೊ ಸಂಗ ಅವನು. ವರುಣ್ ಪ್ಲೀಸ್ ಹಾಗೆಲ್ಲ ಮಾತಾಡ್ಬೇಡ. ಸರಿ ಬಿಡು ಏನ್ ನಿನ್ನ ಸಮಸ್ಯೆ ಯಾಕೆ ಅವನಿಗೆ ಫೋನ್ ಮಾಡಿದ್ದೆ? ಏನಿಲ್ಲ ಬಿಡೋ, ಪರವಗಿಲ್ಲ ಹೇಳಮ್ಮ? ಪರವಗಿಲ್ಲ ಅಂತ ಹೇಳಿನಲ್ಲ ಬಿಡೋ. ನನಗೆ ಕೋಪ ಬರಿಸ್ಬೇಡ ಸುಮ್ನೆ ಹೇಳು? ಫೀಸ್ ಕಟ್ಬೇಕು ನಾಳೆ ಲಾಸ್ಟ್ ಡೇಟ್ ಎಂದು ಮೆಲು ಧ್ವನಿಯಲ್ಲಿ ಹೇಳಿದನು. ವರುಣ್ ಕ್ಷಣ ಕಾಲ ಯೋಚನೆ ಮಾಡಿ ಎಷ್ಟು ಎಂದನು? 30 ಸಾವಿರ, ಹೌದ? ಸರಿ ನಾಳೆ ಮಧ್ಯಾಹ್ನದ ಒಳಗೆ ಅರೇಂಜ್ ಮಾಡ್ತಿನಿ ಬಿಡು.
   ಬೇಡ ಕಣೊ, ಯಾಕೆ? ಲೋ ಹೇಗೋ ತಗೊಳ್ಳಿ ನಿನ್ನತ್ರ ಫಸ್ಟ್ ಇಯರ್ ಎಂಎಸ್ಸಿ ಫೀಸ್ ಎಲ್ಲಾ ನೀನೆ ಕಟ್ಟಿದಿಯಾ ಇವಗ ನೋಡಿದ್ರೆ ಇದಕ್ಕೂ ನೀನೆ ಕೊಡ್ತಿನಿ ಅಂತಿದಿಯ ಬೇಡ ಕಣೋ. ಫ್ರಂಡ್ಸ್ ಅಂದ್ರೆ ಅಷ್ಟೇಯೇನೋ ಕುಡಿಯೋದು, ತನ್ನೋದು, ಟ್ರಿಪ್ ಮಾಡೋದು, ಪಾರ್ಟಿ ಮಾಡೋದು ಅಷ್ಟೇ ಅಲ್ಲ ಕಷ್ಟದಲ್ಲಿ ಹೆಗಲಿಗೆ ಹೆಗಲಾಗಿ ಇರ್ಬೇಕು. ನೋವಲ್ಲಿ ಕಣ್ಣೀರ್ ಒರೆಸೊ ಮೊದಲ ಕೈ ಅದು ಇದೆಲ್ಲ ನಿನಗೆ ಅರ್ಥ ಆಗಲ್ಲ ಬಿಡು ಎಂದು ಬೈಕ್ ಹತ್ತಿ ನಾಳೆ ದುಡ್ಡಿನ ಜೊತೆ ಬರ್ತಿನಿ ಅಂತಹೇಳಿ ಹೊರಟು ಹೋದನು.
    ಮರುದಿನ ಲಕ್ಷ್ಮಿ ನಾರಾಯಣ ಬ್ಯಾಂಕ್ ಹತ್ತಿರ ಅವನಿಗಾಗಿ ಕಾಯುತ್ತಿದ್ದ. ವರುಣ್ ಜೋರಾಗಿ ಓಡಿ ಬಂದು ಲಕ್ಷ್ಮಿಗೆ 30 ಸಾವಿರ ನೀಡಿ ಬೇಗ ಹೋಗಿ ಕಟ್ಟು ಬ್ಯಾಂಕ್ ಕ್ಲೋಸ್ ಆಗುತ್ತೆ ಎಂದನು. ನಿನ್ನ ಬೈಕ್ ಎಲ್ಲಿ ಮಗಾ? ಈಗ ಅದೆಲ್ಲಾ ಬೇಕಾ? ಹೇಳೂ ಏನ್ ಮಾಡ್ದೆ ಅದು ಅದು ಎಂದು ರಾಗ ಎಳೆದು ಎಲ್ಲೂ ದುಡ್ಡು ಅಡ್ಜೆಸ್ಟ್ ಆಗ್ಲಿಲ್ಲ ಆದಕ್ಕೆ ಅದನ್ನ ಮಾರ್ಬಿಟ್ಟೆ. ಲೋ ಅದು ನೀನು ಇಷ್ಟ ಪಟ್ಟು ತಗೊಂಡಿದಲ್ವ ಬೇರೆ ತಗೊಂಡ್ರೆ ಆಯ್ತು ಬಿಡೋ ಫ್ರಂಡ್ಸ್‍ಗಿಂತ ಬೈಕ್ ಹೆಚ್ಚಲ್ಲ. ನೀನು ಕೆಲಸಕ್ಕೆ ಸೆರ್ದಿಮೇಲೆ ಹೊಸ ಬೈಕ್ ತೆಕ್ಕೊಡಿವಂತೆ ಬಿಡು. ಎಂದು ಲಕ್ಷ್ಮಿ ನಾರಾಯಣನನ್ನು ಮುಂದೆ ಮಾತನಾಡಲು ಬಿಡದೆ ಬ್ಯಾಂಕ್ ಒಳಗೆ ಎಳೆದುಕೊಂಡು ಹೋದನು. ಸ್ನೇಹ ಅಂದ್ರೆ ಇದೇ ಅಲ್ವ.
ಮಂಜುನಾಥ ಹೆಚ್.ಆರ್.
email : manjunathahr1991@gmail.com

Monday 28 March 2016

ದತ್ತಾಂಶ ಸಂಗ್ರಹಣೆ ಕನ್ನಡದಲ್ಲಿ ಆಗಲಿ


     ಇದು ತಂತ್ರ ಜ್ಣಾನ ಜಗತ್ತು ಯಾವುದೇ ಮಾಹಿತಿ, ವಿಚಾರವನ್ನು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ಇದು ದೊರೆಯುವುದಂತೂ ಖಚಿತ ಇದರಿಂದಾಗಿಯೇ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮವಾಗಿದೆ.
     ಒಂದು ದುರಾದೃಷ್ಟಕರ ಸಂಗತಿಯೆಂದರೆ ಎಲ್ಲಾ ಮಾಹಿತಿಗಳು ಪ್ರಾದೇಶಿಕ ಭಾಷೆಗಳಲ್ಲಿ ದೊರೆಯದೆ ಇರುವಂತಹದು. ಇದರಲ್ಲಿ ಕನ್ನಡವೇನು ಹೊರತಾಗಿಲ್ಲ ಇಂಟರ್‍ನೆಟ್ ಸೌಲಭ್ಯದಿಂದ ಮಾಹಿತಿಯನ್ನು ಹುಡುಕಲು ಹೊರಟರೆ ಪ್ರಮುಖವಾಗಿ ಕಣ್ಣಿಗೆ ರಾಚುವುದು ಆಂಗ್ಲ ಭಾಷೆ ಉಳಿದಂತೆ ಬೇರೆ ಬೇರೆ ಭಾಷೆಗಳು ಕಾಣ ಸಿಗುತ್ತವೆ.
    ಭಾರತೀಯ ಭಾಷೆಗಳಾದ ಹಿಂದಿ, ಬೆಂಗಾಳಿ, ತಮಿಳು ಭಾಷೆಗಳಲ್ಲಿ ಹೆಚ್ಚು ಮಾಹಿತಿ ಇರುವುದನ್ನು ಕಾಣುತ್ತೇವೆ ಆದರೆ ಕನ್ನಡ ಭಾಷೆಯಲ್ಲಿ ಸಾಕಷ್ಟು ಮಾಹಿತಿ ಲಭ್ಯವಿಲ್ಲದಿರುವುದು. ಎಷ್ಟೂ ಕನ್ನಡಾಸಕ್ತರು ಪರಿತಪಿಸುವಂತಾಗಿದೆ. ಇವರಲ್ಲಿ ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ. ವಿಜ್ಞಾನ-ತಂತ್ರ ಜ್ಞಾನ, ಇತಿಹಾಸ, ಪಾಶ್ಚಿಮಾತ್ಯ ಸಾಹಿತ್ಯ ಸಂಸ್ಕøತಿ, ಗಣೀತ ಶಾಸ್ತ್ರ ಮೊದಲಾದ ವಿಷಯಗಳು ಸುಲಭವಾಗಿ ಕನ್ನಡದಲ್ಲಿ ಸಿಗುವಂತಿದ್ದರೆ ಎಷ್ಟೂ ಜನರಿಗೆ ಅವಶ್ಯಕವೆನಿಸುತ್ತಿತ್ತು.
  ಕನ್ನಡ ನಾಡು-ನುಡಿಯ ಬಗ್ಗೆ ಹೆಚ್ಚು ಮಾತನಾಡುವ ಕನ್ನಡ ಪರ ಸಂಘಟನೆಯಾಗಲಿ ಸಂಬಂಧಪಟ್ಟ ಇಲಾಖೆಯಾಗಲಿ ಇದರ ಗೊಡವೆಗೆ ಹೋದಂತೆ ಕಾಣುತ್ತಿಲ್ಲ. ಒಂದು ಭಾಷೆಯ ಪ್ರಗತಿಯಾಗುವುದು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ. ಕರ್ನಾಟಕದಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದಕ್ಕೆ ಇದು ಒಂದು ಕಾರಣ ವಾಗಿರಬೇಕಲ್ಲವೇ. ಇದರ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಿ ಆದಷ್ಟು ಬೇಗನೆ ಅಂತರ್ ಜಾಲದಲ್ಲಿ ಕನ್ನಡದ ಮುಖಾಂತರ ಮಾಹಿತಿ ಲಭ್ಯವಾದರೆ ಒಳಿತು.
   
    ಇದರ ಕೆಲಸ ಕೇವಲ ಸಂಘಟನೆ, ಸಂಸ್ಥೆ, ಇಲಾಖೆಗಳಲ್ಲದೆ ಸಾಮಾನ್ಯ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಮಗೆ ತಿಳಿದಿರುವ ಕನ್ನಡದ ಮಾಹಿತಿಯನ್ನು ಅಂತರ್ ಜಾಲದಲ್ಲಿ ಸೇರಿಸಿ ಕನ್ನಡವನ್ನು ಬೆಳೆಸಬೇಕಾಗಿದೆ. ಇತ್ತೀಚೆಗೆ ಕರ್ನಾಟಕದ ಗಡಿ ಪ್ರದೇಶದಲ್ಲಿ ಕನ್ನಡ ಕಲಿಯುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ಹೆಚ್ಚಾಗ ಬೇಕಾದರೆ ಮಾಹಿತಿಯ ಪ್ರಸಾರ ಅತ್ಯವಶ್ಯಕ.


                 ಮಂಜುನಾಥ ಹೆಚ್.ಆರ್.
email : manjunathahr1991@gmail.com


Sunday 27 March 2016

ಕೋಪಕ್ಕೊಂದು ಕಾರಣ


   “ನಿಮ್ಮ ಕೆಲಸ ಎಸ್ಟಿದೆ ಅಷ್ಟು ನೋಡಿಕೊಳ್ಳಿ, ನನ್ನ ವಿಷಯಕ್ಕೆ ತಲೆ ಹಾಕಬೇಡಿ. ನನಗೆ ಗೊತ್ತಿದೆ ನಾನು ಏನು ಮಾಡಬೇಕೆಂದು” ಹೇಳಿ ಕ್ಲಾಸಿನಿಂದ ಹೊರ ಬಂದು ಕ್ಯಾಂಟಿನಿನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದೆ ಒಬ್ಬನೆ.
    ಕಾರಣ ಇಷ್ಟೆ, ತೋಟದಲ್ಲಿ ಕೆಲಸ ಜಾಸ್ತಿ ಇದ್ದುದರಿಂದ ಕಾಲೇಜಿಗೆ ಒಂದೆರಡು ದಿನ ಹೋಗಲು ಸಾಧ್ಯವಾಗಿರಲಿಲ್ಲ. ಮರುದಿನ ಕ್ಲಾಸಿಗೆ ಹೋದೆ ನನ್ನ ಕರ್ಮಕ್ಕೆ ಮೊದಲ ಪೀರ್ಡ್ ಹೆಚ್.ಓ.ಡಿ ‘ಶಂಕರಪ್ಪ’ನವರದ್ದು. ಹೇಳಿ ಕೇಳಿ ಅವರು ತುಂಬಾ ಸ್ಟ್ರಿಟ್, ನಗ್ತ ನಗ್ತ ಚೆನ್ನಗಿಯೇ ಹುಗಿಯುತ್ತಾರೆ. ಎಲ್ಲರಿಗೂ ಆಗುವ ಮರ್ಯಾದೆ ನನಗೂ ಕೂಡ ಆಯ್ತು. ನನ್ನನ್ನು ನೋಡಿ ಇಡೀ ಕ್ಲಾಸ್ ತಲೆ ಬಗ್ಗಿಸಿಕೊಂಡು ನಗುತ್ತಿತ್ತು. ಅದನ್ನು ನೋಡಲಾಗದೆ ನೇರವಾಗಿ ಶಂಕರಪ್ಪ ಸರ್‍ನ ನೋಡುತ್ತಾ, ರೀ ಸ್ವಾಮಿ! ನೀವು ಕ್ಲಾಸಿಗೆ ಬಂದು ಪಾಠ ಮಾಡಿ ಹೋದ್ರೆ ಸಾಕು ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೊ ಅವಶ್ಯಕತೆ ಇಲ್ಲ ಎಂದು ಇನ್ನೊಂದೆರಡು ಸೇರಿಸಿ ರೇಗಿದೆ. 
      ಅವರಿಂದ ಬಂದ ಉತ್ತರ ಗೆಟ್ ಔಟ್ ಮೈ ಕ್ಲಾಸ್ ರೂಂ ಎಂಬುದಾಗಿತ್ತು. ಬಿಡ್ರಿ ಇಲ್ಲೆ ಏನು ಗೂಟ ಹೊಡಕೊಂಡು ಇರಲ್ಲ ಎಂದು ಹೇಳಿ ಆಚೆ ಬಂದಿದ್ದೆ. ಕ್ಯಾಂಟಿನ್ ಪರಿಸರದಲ್ಲಿ ಅಮ್ಮನ ನೆನಪಾಯಿತು ಅವರು ಹೇಲಿದ್ದು ಲೋ ಕಾಲೇಜಿನಲ್ಲಿ ಯಾರತ್ರನು ಜಗಳ ಆಡಬೇಡ, ನೀನ್ ಓದದಿದ್ದರು ಪರವಾಗಿಲ್ಲ ನಮಗೆ ಕೆಟ್ಟ ಹೆಸರು ಮಾತ್ರ ತರಬೇಡ, ವಿದ್ಯೆ ಕೊಟ್ಟ ಗುರುಗಳು ದೇವರಿಗೆ ಸಮಾನ ಅವರಿಗೆ ಗೌರವ ಕೊಡು ಎಂದು ಸಾರಿ ಸಾರಿ ಹೇಳಿದ್ದು ಕಿವಿಯಲ್ಲಿ ಹಾಗೆ ಬಂದು ಹೋಗಿತ್ತು. 
    ಒಲ್ಲದ ಮನಸ್ಸಿನಿಂದ ಕಾಫಿ ಕುಡಿದು ಮುಗಿಸಿ ಶಂಕರ್ ಸರ್ ಹತ್ರ ಸಾರಿ ಕೇಳಲು ಹೊರಟೆ ಕಣ್ಣು ಕೆಂಪಾಗಿತ್ತು, ಶರ್ಟ್ ಎರಡು ತೋಳುಗಳನ್ನು ಮಡಚುತ್ತಾ ಬಲವಾದ ಹೆಜ್ಜೆ ಇಡುತ್ತ ಬಿರು ನಡಿಗೆಯಲ್ಲಿ ಅವರ ಎದುರಿಗೆ ಹೋಗುತ್ತಿದ್ದೆ. ನನ್ನನ್ನು ಹೊಡೆಯಲಿಕ್ಕೆ ಬಂದವನಂತೆ ಅವರಿಗೆ ಅನ್ನಿಸಿರಬೇಕು. ನನ್ನ ಮುಖವನ್ನು ನೋಡದೆ ಮುಂದೆ ನಡೆದರು. ಮತ್ತೆ ನಾನೇ ಹಿಂದೆ ಹೋಗಿ ಎದುರು ನಿಂತು ಕೈ ಕಟ್ಟಿಕೊಂಡು ಸಾರಿ ಸರ್ ಎಂದೆ. 
    ಅವರಿಂದ ಯಾವುದೇ ಉತ್ತರ ಬರಲಿಲ್ಲ ಸಾರಿ ಸಾರ್ ತಪ್ಪಾಯ್ತು ಎಂದೆ. ಮುಖ ನೋಡಿ ನಗುತ್ತಾ ನನಗೆ ಗೊತ್ತು ಕಣೋ ನೀನು ಹೇಗೆ ಅಂತಾ ನೆನ್ನೆ ಮೊನ್ನೆ ನಿನ್ನನ್ನು ನೋಡುತ್ತಿಲ್ಲ. ನೀನಾದ್ರೆ ಕೋಪ ಎಷ್ಟು ಬೇಗ ಬರುತ್ತೇ ಅಷ್ಟು ಬೇಗ ಸರಿ ಹೊಗ್ತೀಯ. ಆದರೆ ನಿನ್ನ ಫ್ರೆಂಡ್ಸ್? ನಾನ್ ಕೇರ್ ಮಾಡದಿದ್ದರೆ ಹಾಳಾಗ್ತಾರೆ. ಅದಕ್ಕೆ ನಿನ್ನ ಆಚೆ ಕಳ್ಸಿದೆ ಬೇಜಾರು ಮಾಡ್ಕೊಬೇಡ ಎಂದು ಹೇಳಿ ನನ್ನನ್ನು ನಗಿಸುತ್ತಾ ಅವರು ನಗುತ್ತಾ ಮುಂದೆ ಹೋದರು.
ಅವರನ್ನು ನೋಡುತ್ತಾ ಒಳಗೊಳಗೆ ನಗುತ್ತಾ ಅದಕ್ಕೆ ಗುರುಗಳೇ ನಿಮ್ಮನ್ನು ಆಚಾರ್ಯ ದೇವೋಭವ ಎಂದು ಕರೆಯೋದು ಎಂದು ಕ್ಲಾಸಿನ ಕಡೆ ಹೊರಟೆ.
                                                                                                       
    ಮಂಜುನಾಥ ಹೆಚ್.ಆರ್.

email : manjunathahr1991@gmail.com

Saturday 26 March 2016

ಕಥೆ ಮುಗಿದ ಮೇಲೆ


        ಯಾರೇ ಆಗಲಿ ಲವ್ ಮಾಡಿ ಅದು ಬ್ರೇಕಪ್ ಆದಮೇಲೆ ನಮ್ಮ ಜೀವನ ಇಷ್ಟೇ, ನಾನಿನ್ನು ಬದುಕಲು ಯೋಗ್ಯ ಅಲ್ಲಾ ಸಾಯಬೇಕು ಎನ್ನುವ ನಿರ್ಧಾರ ಇಂದಿನ ದಿನದಲ್ಲಿ ಸಾಮಾನ್ಯ. ಅಂಥವರಿಗೊಂದು ಮಾತು.
ಸುಖಾ ಸುಮ್ಮನೆ ಯೋಚಿಸುವುದನ್ನು ಬಿಡಿ ಸದಾ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿ. ನೆನಪು ಮಾಡಿಕೊಳ್ಳುವುದಕ್ಕೂ ಬಿಜಿಯಾದಾಗ ಯಾರೊಬ್ಬರು ನೆನಪಿಗೆ ಬರುವುದಿಲ್ಲ.
ಆತ್ಮೀಯರೊಂದಿಗೆ ಹೆಚ್ಚು ಮಾತನಾಡಿ ಒಬ್ಬರೆ ಇರುವುದಕ್ಕಿಂತ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ಲೇಸು. ಕೆಲಸಕ್ಕೆ ಬಾರದ ಮಾತುಗಳು ನಿಮ್ಮ ಬದಲಾವಣೆಗೆ ಬರುತ್ತವೆ.
ಅಳು ಬಂದರೆ ನಿಮಗೆ ಸಾಕಾಗುವಷ್ಟು ಅತ್ತುಬಿಡಿ ಮುಂದೆ ಅಳಬೇಕೆಂದರು ಕಣ್ಣಿಂದ ಒಂದು ಹನಿಯು ಬರುವುದಿಲ್ಲ. ಅತ್ತಾಗ ಮನಸ್ಸು ಹಗುರಾಗುತ್ತದೆ. 
ನಿಮ್ಮ ಮೇಲೆ ನೀವು ಪ್ರೀತಿ ಅಭಿಮಾನ ಬೆಳೆಸಿಕೊಳ್ಳಿ, ಅದೊಂದು ವಿಚಾರದಲ್ಲಿ ಈಗೋ ಇದ್ದರೆ ನಿಮ್ಮಿಂದ ಬದಲಾವಣೆ ಸಾಧ್ಯ.
ಮುಂಜಾನೆ ಎದ್ದು ತಂಪಾದ ಗಾಳಿಯಲ್ಲಿ ವಾಕ್ ಮಾಡಿ. ಸಾಧ್ಯವಾದರೆ ನಿಮ್ಮ ಮನಸ್ಸಿಗೆ ಮುದ ನೀಡುವ ಜಾಗಗಳಿಗೆ ಸ್ನೇಹಿರ ಜೊತೆ ಟ್ರಿಪ್ ಹೋಗಿ ಜಾಗ ಬದಲಾದರೆ ಮನಸ್ಸು ಬದಲಾಗುತ್ತದೆ. 
ನೀವು ಪ್ರೀತಿಯಲ್ಲಿ ಸೋತಿದ್ದಿರಾ ಆದರೆ ಪ್ರೀತಿಲಿ ಅಲ್ಲಾ ನಿಮಗೆ ಅಂತಾ ಒಂದು ಜೀವಾ ಕಾಯ್ತಾ ಇರುತ್ತೆ. ನಿಮ್ಮನ್ನ ಬಿಟ್ಟು ಹೋದವರನ್ನು ನೆನೆಯುತಾ, ಅವರಿಗೆ ಮೋಸ ಮಾಡಬೇಡಿ ಯಾಕೆಂದರೆ ಅವರು ತಮ್ಮ ಪ್ರೀತಿಯನ್ನ ಕಳೆದುಕೊಂಡಿರಬಹುದಲ್ಲವೇ. ಪ್ರೀತಿಯಲ್ಲಿ ಬೀಳದವರು ಯಾರೊಬ್ಬರು ಇಲ್ಲಾ.


 ಮಂಜುನಾಥ ಹೆಚ್.ಆರ್
email : manjunathahr1991@gmail.com

Sunday 20 March 2016

ಮುಂಜಾವಿನ ಕನಸು ಕಾಣಲು ಬಲು ಸೊಗಸು

ಮುಂಜಾವಿನ ಕನಸು ಕಾಣಲು ಬಲು ಸೊಗಸು

    ಮನೆಯೆಲ್ಲಾ ಹೂವಿನ ಅಲಂಕಾರ, ಎಲ್ಲಿ ನೋಡಿದರೂ ಸಭ್ರಮ ಸಡಗರ, ಗಿಜುಗುಡುವ ಜನರು, ಮೂಹರ್ತಕ್ಕೆ ಟೈಂ ಆಗುತ್ತೆ ಹೆಣ್ಣನ್ನ ಬೇಗ ರೆಡಿ ಮಾಡಿ ಅನ್ನೂ ಪುರೋಹಿತರು. ಆಗತಾನೆ ಎದ್ದು ಕಣ್ಣು ಉಜ್ಜುತ್ತಾ ರೂಮಿನಿಂದ ಬಂದ ನನ್ನ ಕಣ್ಣಿಗೆ ಕಾಣಿಸಿದ್ದು ಇಷ್ಟು. ಎನ್ ನಡಿತಿದೆ ನಮ್ಮನೇಲಿ ಎಂದು ಅರ್ಥವಾಗದಿದ್ದರು. ಅರ್ಥ ಮಾಡಿಕೊಳ್ಳಲು ಸುತ್ತಲೂ ಕಣ್ಣಾಡಿಸಿದೆ ನನ್ನ ಮದುವೆ ಎಂಬುದಂತೂ ಖಚಿತವಾಯಿತು. ನನ್ನ ಆಪ್ತ ಮಿತ್ರರೇನಾದರೂ ಬಂದಿದ್ದಾರೆಯೇನೂ ಎಂದು ನೋಡಿದರೆ ನವೀನ್ ಮತ್ತು ಲಕ್ಷಿನಾರಾಯಣ್ ಮಾತ್ರ ಬಂದಿದ್ದಾರೆ. ಮಂಜು, ರವಿ ಇಬ್ಬರು ಬಂದಿರಲಿಲ್ಲ ನನಗಂತೂ ರೇಗಿ ಹೋಯಿತು. ಅಮ್ಮ ಹೆಣ್ಣಿನ ಅಮ್ಮನ ಹತ್ತಿರ ಮಾತನಾಡುತ್ತಿದ್ದರು ಹತ್ತಿರ ಕರೆದು ಏನಮ್ಮ ನೀನು ನನಗೆ ಗೊತ್ತಿಲ್ಲದಂತೆ ಮದುವೆ ಫಿಕ್ಸ್ ಮಾಡಿದ್ದೀಯ ನನ್ ಫ್ರಂಡ್ಸ್ ಯಾರು ಬಂದಿಲ್ಲ ಎಂದು ಕೂಗಾಡುತ್ತಲೆ ಮದುವೆ ಚಪ್ಪರಕ್ಕೆ ಕಟ್ಟಿದ್ದ ಕಂಬಕ್ಕೆ ಕೋಪದಿಂದ ಹೊಡೆದೆ, ಪಕ್ಕದಲ್ಲಿದ್ದ ಚಂಬು ಪಕ್ಕಕ್ಕೆ ಬಡಿದು ಅದರಲ್ಲಿದ್ದ ನೀರು ಚೆಲ್ಲಿ ಮುಖಕ್ಕೆ ಹೊಡೆಯಿತು ತಟ್ಟನೆ ಮೇಲೆದ್ದೆ ಕಣ್ಣು ಬಿಟ್ಟು ನೋಡಿದರೆ ಯಾವ ಮದುವೆಯು ಇಲ್ಲ ಸಂಭ್ರಮ ಮೊದಲೇ ಇಲ್ಲಾ.
      ಅಂದು ರಾತ್ರಿ ಅಮ್ಮ ಕಾಲು ನೋವು ನನಗೆ ಕೆಲಸ ಮಾಡೋಕೆ ಆಗಲ್ಲ ಬೇಗ ಮದುವೆ ಮಾಡ್ಕೋ ಎಂದು ರೇಗಿ ಹೇಳಿದರು. ನಾನು ಬೇರೆ ಯಾವುದೂ ಬೇಜಾರಿನಲ್ಲಿದ್ದೆ ನಿಧಾನವಾಗಿ ಹೇಳಿದೆ ಈಗಲೇ ಬೇಡ ಬೇಕಾದ್ರೆ ಮನೆಕೆಲಸಕ್ಕೆ ಆಳು ಗೊತ್ತು ಮಾಡು. ಇಲ್ಲ ಅಂದ್ರೆ ನಾನೇ ಬೇಕಾದ್ರೆ ನಿನಗೆ ಸಹಾಯ ಮಾಡ್ತಿನಿ ಎಂದು ಹೇಳಿದೆ. ಅದೆಗೇ ಆಗುತ್ತೆ ನಿನ್ ಮದುವೆ ಆಗಬೇಕು ಅಷ್ಟೆ ಎಂದು ಒತ್ತಡ ಮಾಡಿ ಕುಳಿತರು. ನನಗಂತೂ ಭಯಂಕರ ಕೋಪ ಬಂದು ಉಟ ಮಾಡೋ ತಟ್ಟೆ ತೆಗೆದು ಜೋರಾಗಿ ಎರಚಾಡಿ, ಕೂಗಾಡಿ ರಾದ್ದಾಂತ ನಡೆದು ಉಟವನ್ನು ಮಾಡದೇ ನನ್ನ ರೂಮಿನಲ್ಲಿ ಬಂದು ಮಲಗಿದೆ.
  ನನಗಂತೂ ಈಗಲೇ ಮದುವೆ ಆಗಿ ಏನ್ ಮಾಡಬೇಕಿದೆ, ನಾನು ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಅಂದುಕೊಂಡಿರೋನು ಇವರಾರು ನನ್ನ ಅರ್ಥನೇ ಮಾಡ್ಕೂತಿಲ್ಲವಲ್ಲ. ನನ್ನ ಕಾಲ ಮೇಲೆ ನಾನು ನಿತುಕೊಳ್ಳ ಬೇಕು. ನೂರು ಜನರಲ್ಲಿ ಒಬ್ಬನಲ್ಲ ನೂರು ಜನರಲ್ಲಿ ಮೊದಲನೆಯವನಾಗಿ ಬದುಕ ಬೇಕು ಎಂಬುದೇ ನನ್ನ ಆಸೆ. ಎಂದು ಯೋಚಿಸುತ್ತಿರುವಾಗಲೇ ಇಷ್ಟೆಲ್ಲ ನಡೆದು ಹೋಯಿತು. 
   

ಒಂದು ಕಡೆ ಖುಷಿ ನನ್ನ ಮದುವೆ ಸಂಭ್ರಮವನ್ನ ನೋಡಿದೆನಲ್ಲ ಎಂದು ಮತ್ತೊಂದು ಕಡೆ ಬೇಜಾರು ಆ ಮದುವೆ ಹೆಣ್ಣನ್ನ ನೋಡಲಿಲ್ಲವಲ್ಲ ಎಂದು ಇರಲಿ ಬಿಡು ಕನಸಿಗೆ ಬಂದವಳು ಕೈ ಹಿಡಿಯದೆ ಹೋಗ್ತಾಳ ಸಿಕ್ತಾಳೆ ಬಿಡು ಅಂತಾ ಹೇಳ್ತಿದೆ ನನ್ನ ಪುಟ್ಟ ಹೃದಯ.

ಮಂಜುನಾಥ ಹೆಚ್.ಆರ್.
mail : manjunathahr1991@gmail.com


Friday 18 March 2016

ಹಳೇ ಹುಲಿ ಲವ್ ಕಥೆ.......

70ರ ವ್ಯೆಥೆ 20ರ ಕಥೆ

   ಕಾಲದ ತಪ್ಪೋ ಅಥವಾ ಅದರ ಕೈ ಕೆಳಗೆ ಸಿಕ್ಕ ಎರಡು ಜೀವಗಳ ತಪ್ಪೋ ತಿಳಿಯದು. ಆಕಸ್ಮಿಕವಾಗಿ ಒಂದುಗೂಡಿ ಅನಿರೀಕ್ಷಿತವಾಗಿ ಬೇರೆಯಾಗಿ ಇಂದಿಗೂ ಜೊತೆಗೆ ಬಂದರೆ ಇರುವಷ್ಟು ದಿನವಾದರೂ ಅವಳ ಜೊತೆ ಕಳೆಯ ಬೇಕು ಎಂದು ಬಯಸುವ ಜೀವವೊಂದು ಅವಳನ್ನೆ ಹುಡುಕುತ್ತಿದೆ.
  ಫೆಬ್ರವರಿ 14 ರಂದು ಕಾಲೇಜಿಗೆ ಹೋಗದೆ ನಮ್ಮ ಹಳ್ಳಿಯಲ್ಲೇ ಸುರಸುಂದರಾಂಗಿ ಸಿಗಬಹುದೆಂದು ಅಲೆಯುತ್ತಿದ್ದೆ. ಅರಳೀಕಟ್ಟೆಯ ಮರವನ್ನು ಒರಗಿಕೊಂಡು ಹಿರಿ ತಲೆಯೊಂದು ಕುಳಿತ್ತಿತ್ತು. ಸಾಕಷ್ಟು ಪರಿಚಯವಿದ್ದುದ್ದರಿಂದ ಹತ್ತಿರ ಹೋಗಿ ಎನ್ ‘ಕೌಟು’ (ಮುದುಕ) ಹಿಂಗೇ ಕುತಿದಿಯ ಎಂದು ಚೇಡಿಸುವ ಧ್ವನಿಯಲ್ಲಿ ಹೇಳಿದೆ. ಅದಕ್ಕೆ ಬಂದ ಉತ್ತರ ಎನ್ ‘ಎಳೆ ನಿಂಬೆ ಕಾಯ್’ ಎಂದು ತಕ್ಷಣವೇ ಮುಖಕ್ಕೆ ಹೊಡೆದಂತೆ ಹೇಳಿದರು. ಹೋ...! ಇವರು ನಮಗಿಂತ ಸ್ಟ್ರಾಂಗ್ ಇದ್ದಾರೆ ಎಂದು ಮಾತು ಕಡಿಮೆ ಮಾಡಿದೆ.
   ನನ್ನ ಮುಖವನ್ನೊಮ್ಮೆ ನೋಡುತ್ತಿದ್ದರು ಏನ್ ಇವತ್ತು ನಿನ್ ಹಳೆ ಲವ್ವರ್ ನೆನಪಿಗೆ ಬದ್ಲ. ಕಣ್ಣು ಚಿಕ್ಕದಾಗಿ ಮಾಡಿ ಮತ್ತೆ ಮುಖವನ್ನು ನೋಡುತ್ತಾ ನಿನಗೇನು ಗೊತ್ತೊ ನನ್ನ ಪೀರುತಿ ಬಗ್ಗೆ. ಎಂಬ ಮಾತನ್ನು ಕೇಳಿ ನನಗೆ ಶಾಕ್ ಹೊಡೆದಾಗೆ ಆಯ್ತು. ಇದೇನಪ್ಪ ಹೀಗೆ ಹೇಳ್ತಿದರಲ್ಲ ಅವರಿಗೆ ಏನಿಲ್ಲವೆಂದರು 75 ರ ಗಡಿ ದಾಟಿತ್ತು ಆದ್ದರಿಂದ ಅನುಮಾನದಿಂದ ಕೇಳಿದೆ ತಾತ ನೀವು ಲವ್ ಮಾಡಿದ್ರ ? ಅದಕ್ಕೆ ಅವರು ಮಾಡಿದ್ರ ಅಲ್ಲ ಮಾಡ್ತಿದಿನಿ. 
   ಅಲ್ಲಿಂದ ಅವರ ಲವ್ ಸ್ಟೋರಿ ಸ್ಟ್ರಾಟ್ ಆಯ್ತು. ನನಗಾಗ 21 ಆಗ ಸಾಲೆ ಗೀಲೆ ಎಲ್ಲಾ ದೂರದ ಮಾತು ಮನೆಲಿ 75 ಕುರಿಗಳು ಇದ್ವು ಅವನ್ನ ಮೇಯಿಸೋಕೆ ಕಗ್ಗಲಿ ಹಳ್ಳದ ಕಡೆ ಹೋಗ್ತಿದ್ದೆ. ಅದೇ ಕಡೆಯಿಂದ ಸಾಲೆಗೆ ಹೋಗೊಕೆ ಪಟೇಲನ ಮಗಳು ನಾಗರತ್ನ ಬರ್ತಿದ್ಲು. ನಾಗರತ್ನ ಯಾರ್ ತಾತ ಅದೇ ಕಣೋ ಗುಡೇ ಮಾರನಹಳ್ಳಿ ಕೊಟ್ಟಿದರಲ್ಲ ಚಿಕ್ ಮಗಳು. ಅದೇ ಕೆಂಪಮ್ಮನ ಜಾತ್ರೆಗೆ ಬತ್ತರಲ್ಲಾ ಹೋ ಅವರ. ಹ ಅವಳೇ. ಅವರ ಬಗ್ಗೆ ಹೆಚ್ಚು ಕೇಳಲಿಲ್ಲ ಯಾಕೆಂದ್ರೆ ಅವರ ಮೊಮ್ಮಗಳು ಕೀರ್ತಿಗೆ ಲೈನ್ ಹೊಡಿತಿದ್ದೆ, ನಮ್ಮೂರಿನ ಜಾತ್ರೆಗೆ ಬಂದಾಗ. ಸರಿ ಮುಂದೆ ತಾತ ನಾವು ತುಂಬಾ ಬಡವರು ಒಂದ್ ಹೊತ್ತಿನ ಉಟಕ್ಕೂ ಕಷ್ಟ ಇತ್ತು. ಅವಳು ಸಾಲೆಗೆ ಹೋಗುವಾಗ ಅವಳ ಮನೆಯಿಂದ ರೊಟ್ಟಿ ತಂದು ಕೊಡ್ತಿದ್ಲು. ನಾನು ಅವಳಿಗೆ ಸೀಬೆ ಹಣ್ಣು, ನೇರಳೆ ಹಣ್ಣು, ಖಾರೆ ಹಣ್ಣು ಇನ್ನು ಎಲ್ಲಾ ಕೊಡ್ತಿದ್ದೆ.
    ಅವಳನ್ನ ನೋಡ್ದೆ ನನಗೆ ಇರೋಕೆ ಆಗ್ತಿರ್ಲಿಲ್ಲ ಒಂದೆರಡು ದಿನ ಶಾಲೆಗೆ ಬರ್ತಿಲಿಲ್ಲ ಅವರ ಮನೆ ಕಡೆ ಹೋಗಿ ನೋಡ್ದೆ ಆಚೆ ಗುಡಿಸಲು ಹಾಕಿ ಕೂರಿದ್ದರು. ಅದಾದ ಒಂದು ತಿಂಗಳಿಗೆ ಮತ್ತೆ ಬಂದಳು ನಾವಿಬ್ಬರು ಒಂದೆಡೆ ಕುಳಿತು ಇಬ್ಬರು ಮಾತನಾಡುತ್ತಿದ್ದವು. ಇದು ಅವರಪ್ಪನಿಗೆ ಗೊತ್ತಾಗಿ ಅವಳಿಗಂತು ಚೆನ್ನಾಗಿ ಹೊಡೆದರು. ನನಗಂತೂ ನಮ್ಮಪ್ಪ ಮೆಣಸಿನಕಾಯಿ ಹೊಗೆ ಹಾಕಿ ಎರಡು ದಿನ ಉಪವಾಸ ಇಟ್ಟರು ಅವಳನ್ನು ನೋಡುವ ಮಾತನಾಡುವ ತವಕ ನಿಲ್ಲಲಿಲ್ಲ. 
  ನಾನು ಹೋಗಿ ಮಾತನಾಡುವ ಮೊದಲೆ ಅವಳನ್ನ ಅವರ ಚಿಕ್ಕಮ್ಮನ ಮನೆಗೆ ಕಳಿಸಿದ್ದರು. ಅಲ್ಲಿಗೆ ಹೋಗುವುದರೊಳಗೆ ಅವಳಿಗೆ ಮುದುವೆ ನಿಶ್ಚಯ ಮಾಡಿ ಅವರಪ್ಪ ಅವಸರವರವಾಗಿ ಮದುವೆ ಮಾಡಿದ್ರು. ಆಮೇಲೆ ಎನಾಯ್ತು ತಾತ? ಅವಳು ಅಲ್ಲಿ ಚೆನ್ನಾಗಿಲ್ಲ ಅನ್ನೋದು ಗೊತ್ತಾಯ್ತು ಅವಳ ಗಂಡ ದಿನಾಲು ಜಗಳ ಮಾಡ್ತನಂತೆ ಹೊಡಿತಾನಂತೆ. ದಿನಾಲೂ ಅವಳನ್ನೆ ನೆನಪ್ ಮಾಡ್ಕೋತಿನಿ. ಇನ್ನು ಮರೆತಿಲ್ವ ? ಹೇಗೆ ಮರಿಲಿ ಅದು ಇಂದು ಹುಟ್ಟಿ ನಾಳೆ ಮರೆತೊಗೋ ಮೊಬೈಲ್ ಪ್ರೀತಿ ಅಲ್ಲಾ. ಹೋ ಬಿಡಿ ಯಾರು ಮಾಡ್ದಿದ್ ಏನು ಮಾಡಿಲ್ಲ. ಆಗ ಯಾರು ಮಾಡಿರ್ಲಿಲ್ಲ ಇವಗ ಮಾಡ್ದರೇ ಇಲ್ಲ. ಅಲ್ಲಿಂದ ಕಥೆ ಕೇಳಿ ಹೊರಡುವ ಹೊತ್ತಿಗೆ ನನ್ ಹುಡುಗಿ ನೆನಪಾಗಿದ್ಲು.


ಮಂಜುನಾಥ ಹೆಚ್.ಆರ್
Mail : manjunathahr1991@gmail.com
  

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ...........

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ.......

      ಆಗಿನ್ನು ಪ್ರಥಮ ವರ್ಷದ ಪದವಿಯನ್ನು ಮುಗಿಸಿ ಎರಡನೇ ವರ್ಷದ ಅವಧಿಗೆ ಕಾಲಿಟ್ಟಿದ್ದೆವು. ಇತಿಹಾಸ ಶಿಕ್ಷಕರಿಗೆ ಒಂದು ಕಾಯಿಲೆಯೋ ಅಥವಾ ಅಭ್ಯಾಸವೋ ಅದೊಂದು ದುರಭ್ಯಾಸವೋ ಎನೋ ಗೊತ್ತಿಲ್ಲ ಆದರೆ ಅವರು ಪಾಠ ಮಾಡಬೇಕಾದರೆ ಹುಡುಗರ ಕಡೆ ನೋಡದೆ ತಲೆಯನ್ನು ಮೇಲೆತ್ತಿ ಕ್ಲಾಸ್ ರೂಮಿನ ಟಾಪ್ ನೋಡುತ್ತಿದ್ದರು. ನಾವು ಪ್ರಥಮ ವರ್ಷ ಮುಗಿಸಿದಾಗ  ಇವರ ಬಗ್ಗೆ ಗೊತ್ತಿಲ್ಲದೆ ಇರುವುದರಿಂದ ನಾವು ಸುಮ್ಮೆ ಆಗಿದ್ದೆವು ಆಗ ತುಂಬಾ ಒಳ್ಳೆ ಹುಡುಗರು. 
    ನಾವು ಸುಮ್ಮನಿದ್ದರು ನಮ್ಮ ಅಣ್ಣ-ತಂಮ್ಮದಿರು ಸುಮ್ಮನೆ ಇರಬೇಕಲ್ಲ. ಒಂದು ದಿನ ನೋಡಿದರು ಎರಡನೆಯ ದಿನ ನೋಡಿದರು ಅವರು ಕತ್ತನ್ನು ಎಳಗೆ ಇಳಿಸಲೇ ಇಲ್ಲ ಮೂರನೆಯದಿನ ಕ್ಲಾಸ್ ರೂಮಿನ ಟಾಪ್ ಮೇಲೆ ಅಲ್ಲೇನು ಕೋತಿ ಕುಣಿಯತ್ತಿದೆಯ?, ಕಾಗೆ ಹಾರ್ತ ಇದೆಯಾ?, ಇನ್ನು ಮುಂತಾದ ಬರಹಗಳು ಅವರನ್ನು ಕುರಿತು ರಾರಾಜಿಸುತ್ತಿದ್ದವು. ಇದನ್ನು ನೋಡಿದ ಅವರು ಮತ್ತೆ ಮೇಲೆ ನೊಡಲಿಲ್ಲ ತಲೆ ಕೆಳಗೆ ಮಾಡುತ್ತಾ ಪಾಠ ಮಾಡಿ ಆಚೆ ನಡೆದರು.
      ನಮ್ಮ ಉದ್ದೇಶ ಯಾರನ್ನು ನೋಯಿಸುವುದಲ್ಲ. ತರಗತಿಗೆ ಬಂದವರೆ ಹರಟೆ ಹೊಡೆಯುತ್ತಾ, ಕೆಲಸಕ್ಕೆ ಬಾರದ ವಿಷಯಗಳನ್ನು ಮಾತನಾಡುತ್ತಾ 1 ಗಂಟೆ ಸಮಯವನ್ನು ಹಾಳು ಮಾಡುತ್ತಾರೆ. ಕಾಲೇಜಿಗೆ ಎಲ್ಲಾ ವಿದ್ಯಾರ್ಥಿಗಳು ಹರಟೆ ಹೊಡೆಯಲು ಟೈಂ ಪಾಸ್‍ಗೆಂದೆ ಬರುವುದಿಲ್ಲ ಜೀವನದಲ್ಲಿ ಎನನ್ನಾದರು ಸಾಧನೆ ಮಾದಬೇಕೆಂಬ ಕನಸನ್ನು ಸಹ ಇಟ್ಟುಕೊಂಡು ಬಂದಿರುತ್ತಾರೆ.
     ಈ ರೀತಿಯ ಬರಹಗಳನ್ನು ಬರೆಯಲು ಮೂಲ ಕಾರಣ ನಮ್ಮ ಕಾಲೇಜಿನಲ್ಲಿ ಹುಡುಗಿಯರು ಇಲ್ಲದೇ ಇದ್ದುದ್ದು. ಹೇಳಿಕೇಳಿ ನಮ್ಮದು ಬಾಯ್ಸ್ ಕಾಲೇಜು ಆಡಿದ್ದೇ ಆಟ ಉಡಿದ್ದೇ ಲೆಗ್ಗೆ ನಮ್ಮದು.
ಮಂಜುನಾಥ ಹೆಚ್.ಆರ್.
email : manjunathahr1991@gmail.com     
  

Tuesday 15 March 2016

ಒಂತರ ಹುಚ್ಚ್‍ಹುಡುಗ್ರು ಸಾರ್......


ಒಂತರ ಹುಚ್ಚ್‍ಹುಡುಗ್ರು ಸಾರ್

   ಆರಂಭದಿಂದ ಹೀಗಿರಲಿಲ್ಲ ಅದೇನೊ ಡಿಗ್ರಿ ಫೈನಲ್ ಇಯರ್ ಬಂದ ಮೇಲೆ ಒಂದು ತರ ಧಿಮಾಕು ಬಂದು ಬಿಟ್ಟಿತ್ತು. ಯಾರು ಹೇಳಿದ ಮಾತನ್ನು ಕೇಳುವ ಮನಸ್ಥಿತಿ ಇರಲಿಲ್ಲ. ಇಡೀ ಕಾಲೇಜೆ ನಮ್ಮ ಕೈ ಕೆಳಗೆ ಇರಬೇಕೆಂಬುದೇ ನಮ್ಮ ಕಟ್ಟ ಕಡೆಯ ಆಸೆಯಾಗಿತ್ತು. ಕಾಲೇಜಿಗೆ ತಡವಾಗಿ ಹೋಗುವುದು ನಮಗೇನು ಹೊಸದಾಗಿರಲಿಲ್ಲ ಅದೊಂದು ನಿತ್ಯದ ಪರಿಪಾಠಲಾಗಿತ್ತು.
    ಅಂದು ನಮ್ಮ ಕಾಲೇಜಿನ ಇತಿಹಾಸ ತಜ್ಞ, ಹಿಸ್ಟರಿ ಭೀಷ್ಮ, ಮಿಸ್ಟರಿ ಉಪನ್ಯಾಸಕರೊಬ್ಬರು ಕ್ಲಾಸ್ ತಗೊಂಡಿದ್ದರು. ನಾವು ಐದು ಜನ ಪಂಚ ಪಾಂಡವರು ಮಾಮೂಲಿಯಂತೆ ತಡವಾಗಿ ಅವರ ಕ್ಲಾಸಿಗೆ ಎಂಟ್ರಿ ಕೊಟ್ಟೆವು. ಅವರು ನಮ್ಮ ಮುಖವನ್ನೊಮ್ಮೆ ನೋಡುತ್ತಾ ಮರು ಮಾತನಾಡದೆ ಕಣ್ಸ್‍ಸನ್ನೆಯಲ್ಲೆ ಒಳಗೆ ಕರೆದರು.
       ನಾವೇ ರಿಸರ್ವವೇಷನ್ ಮಾಡಿದ ಸೀಟಿನಂತೆ ಕೊನೆಯ ಬೇಂಚ್ ಖಾಲಿ ಇತ್ತು. ಅಲ್ಲಿ ಯಾರು ಕುಳಿತುಕೊಳ್ಳುತ್ತಿರಲಿಲ್ಲ. ನಾವು ಪಾಠದ ಮಧ್ಯೆ ಹೋಗಿದ್ದರಿಂದ ತಲೆ ಬುಡ ಏನು ಅರ್ಥ ಆಗುತ್ತಿರಲಿಲ್ಲ. ಮುಂದೆ ಕುಳಿತವರು ಮಾತ್ರ ಬಿಟ್ಟ ಕಣ್ಣು ಬಿಟ್ಟಂತೆ ಆ ವ್ಯಕ್ತಿಯ ನೋಡುತ್ತಿದ್ದರು. 
ಅದೇನೊ ರಾಜಕೀಯ ಪಕ್ಷದ ಬಗ್ಗೆ ಮಾತನಾಡುತ್ತಿರುವಂತೆ ಅಲ್ಪ ಸುಳಿವು ಸಿಕ್ಕಿತು ನಮ್ಮ ಗೆಳೆಯ ದಿಢೀರನೆ ಎದ್ದು ಕೈ ಮೇಲೆ ಮಾಡಿ ಸಾರ್ ನನಗೊಂದು ಅನುಮಾನ? ತಲೆ ಮೇಲೆತ್ತಿ ಪಾಠ ಮಾಡುತ್ತಿದ್ದ ಅವರು ಇವನನೊಮ್ಮೆ ನೋಡಿ ಏರು ಧ್ವನಿಯಲ್ಲಿ ಏನು? ಎಂದು ಕೇಳಿದರು. ಎನ್.ಟಿ.ಆರ್ ಕಟ್ಟಿದ ಪಕ್ಷ ಯಾವುದು ಸಾರ್?, ಇವನ ಮುಖವನ್ನು ದುರುಗುಟ್ಟುಕೊಂಡು ನೋಡುತ್ತಾ ನೀನು ಕ್ಲಾಸಿಗೆ ಸರಿಯಾಗಿ ಬರೊದಿಲ್ಲ ಪ್ರಶ್ನೆ ಬೇರೆ ಕೇಳ್ತಿಯ ? ಸುಮ್ನೆ ಕುತ್ತುಕೊಳೊ ಎಂದು ಬೈದು ಮುಗಿಸುವ ಮುನ್ನವೇ ನಮ್ಮ ಹುಚ್ಚ್‍ಹುಡುಗ್ರು ಸಂಘದ ತರಲೆ ಮಂಜು ಎದ್ದು ಲೋ ಅವರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಎಲ್ಲಾ ಕೇಳ್ತಿಯಲ್ಲೊ ಸುಮ್ನೆ ಕುತ್ತುಕೊಳೊ. ಎಂದು ಹಾಸ್ಯ ಚಟಾಕಿ ಹಾರಿಸಿದನು. 
      ಅವನು ಹೇಳಿದ ಮಾತಿಗೆ ಇಡೀ ತರಗತಿ ನಗೆಗಡಲಲ್ಲಿ ಮುಳುಗಿತು. ನಮ್ಮ ಹಿಸ್ಟರಿ-ಮಿಸ್ಟರಿಗೆ ಅವಮಾನವಾಗಿ ನಮ್ಮನ್ನು ಬಿರು ನುಡಿಗಳಿಂದ ಬೈದು ಆಚೆ ಹೊರಟು ಹೋದರು. ನಮ್ಮ ಉದ್ದೇಶ ಅವರನ್ನು ಅವಮಾನಿಸುವುದಾಗಿರಲಿಲ್ಲ ಕ್ಲಾಸಿನಲ್ಲಿ ಪಾಠವನ್ನು ಮಾಡದೆ ಕೆಲಸಕ್ಕೆ ಬಾರದ ವಿಷಯವನ್ನು ಒದರುತ್ತಿದ್ದರು. ಪ್ರತಿದಿನ ಇದನ್ನು ನೋಡಿದ ವಿಧ್ಯಾರ್ಥಿಗಳು ಅವರ ಕ್ಲಾಸಿಗೆ ಬರುವುದನ್ನೇ ಬಿಟ್ಟಿದ್ದರು. ಇದನ್ನು ನೋಡಲಾಗದೆ ಅವರ ಸ್ವಾಭಿಮಾನವನ್ನು ಕೆಣಕ ಬೇಕಾಯಿತು.
ಮಂಜುನಾಥ ಹೆಚ್.ಆರ್.
   email : manjunathahr1991@gmail.com     

Thursday 10 March 2016

ಗೌರವ ಕಲಿಸಿದ ಕನ್ಯೆ


ಗೌರವ ಕಲಿಸಿದ ಕನ್ಯೆ

    ತುಂಬಾ ಒರಟು ಮೈಕಟ್ಟು, ಬಿರು ನಡೆ, ಕಟು ಮಾತು, ಮುಖ ನೋಡಲು ಹೆದರುವ ಹುಡುಗಿಯರು ಹೀಗಿರುವಾಗ ಹೆಣ್ಣಿನ ಬಗ್ಗೆ ಅಸಹನೆ, ಅಶಾಂತಿ. ಯಾರಾದರು ಮಾತನಾಡಲು ಹತ್ತಿರ ಬಂದರೆ ಹೆಣ್ಣು ಎಂಬ ಕಾರಣಕ್ಕೆ ಮುಖ ತಿರುಗಿಸಿಕೊಂಡು ಹೋಗುವ ಮನೋಭಾವ ನನ್ನದು. ನನಗೆ ಜನ್ಮ ನೀಡಿರುವವಳು ಒಬ್ಬಳು ಹೆಣ್ಣು, ನನ್ನ ಒಡ ಹುಟ್ಟಿದ ಅಕ್ಕ ಒಬ್ಬಳು ಹೆಣ್ಣು ಎಂಬುದನ್ನು ಮರೆತು ಹೆಣ್ಣಿನ ಬಗ್ಗೆ ಒಂದು ರೀತಿಯ ಅಪವಾದದ ಮನೋಭಾವವಿತ್ತು. 
   ಮನೆಗೆ ಹಿರಿಯ ಮಗ ನಾನೇ ಪ್ರತಿ ಕೆಲಸದಲ್ಲೂ ನಾನೇ ಇರಬೇಕು. ಎಲ್ಲಾ ಹೊರೆ ನನ್ನ ಮೇಲೆ. ಅವಳು ಹೆಣ್ಣು ಎಂಬ ಮಾತ್ರಕ್ಕೆ ಕೆಲವು ಕೆಲಸದಲ್ಲಿ ರಿಯಾಯ್ತಿ. ತಮ್ಮ ಚಿಕ್ಕವನು. ಇನ್ನೂ ಶಾಲೆಯ ವಿಷಯಕ್ಕೆ ಬಂದರೆ ಶಾಲೆಯಲ್ಲಿ ಸಿಗುವ ಎಲ್ಲಾ ಸವಲತ್ತು ಅವರಿಗೆ ನಾವು ಗಂಡು ಮಕ್ಕಳಾದ ಕಾರಣ ಅದರ ಭಾಗ್ಯ ನಮಗಿಲ್ಲ. ಶಿಕ್ಷಕರನ್ನ ಕೇಳಿದರೆ ಅವರ ಮೇಲೆ ಮೊದಲಿನಿಂದ ಶೋಷಣೆಯಾಗುತ್ತಿದೆ. ಅವರನ್ನ ಮೆಲೆತ್ತಲು ಸರ್ಕಾರ ಅವರಿಗೆ ಇಂತಹ ಸೌಲಭ್ಯವನ್ನ ನೀಡುತ್ತಿದೆ ಎನ್ನುತ್ತಾರೆ. ಅದರಲ್ಲಿ ನನ್ನ ನಂಬಿಕೆಯೇನು ಇರಲಿಲ್ಲ ಯಾಕೆಂದರೆ ಅವರೇ ಹೇಳಿದಂತೆ ವೇದಗಳ ಕಾಲದಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ಇತ್ತು. ಇದು ನನ್ನ ತಲೆಯಲ್ಲಿ ಆಳವಾಗಿ ಬೇರೂರಿದ್ದು. ಇದು ಸಾಲದೆಂಬಂತೆ ಉದ್ಯೂಗದಲ್ಲಿ ಅವರಿಗೆ ಮೀಸಲಾತಿ ಇದೆಲ್ಲ ಕೇಳಿ ಮನಸ್ಸಿಗೆ ನೋವಾಗಿದ್ದು ಉಂಟು.
    ಆಗ ಬಿ.ಎಡ್ ವಿದ್ಯಾರ್ಥಿ ಜೀವನದ ಆರಂಭದ ದಿನಗಳು ಆಕಸ್ಮಿಕವಾಗಿ ಒಂದು ಹುಡುಗಿ ತನ್ನ ಪರಿಚಯ ಮಾಡಿಕೊಂಡಳು. ನನಗೆ ಮುಖ ನೋಡಲು ಆಗದ ಸ್ಥಿತಿಯಲ್ಲಿ ದೂರದಿಂದಲೇ ಮಾತನಾಡಿಸಿ ಕಳಿಸಿದೆ. ಮತ್ತೆ ಮಾರನೇ ದಿನ ಹಾಯ್ ಮಂಜು ಟಿಫನ್ ಆಯ್ತ ಎಂಬ ಪ್ರಶ್ನೆಗೆ ಆಗಿಲ್ಲ ಅಂದ್ರೆ ಕೊಡಿಸ್ತಿರ ಎಂಬ ಕೋಪದ ನುಡಿ ಹೊರ ಬಂತ್ತು. ಬೇರೆ ಯಾರಾದರು ಆಗಿದ್ದಿದ್ದರೆ ಇವನ ಸಹವಾಸವೇ ಬೇಡವೆಂದು ದೂರ ಉಳಿಯುತ್ತಿದ್ದರು ಆದರೆ ಅವಳು ನನ್ನನ್ನು ಬದಲಾಯಿಸಲು ಪಣ ತೊಟ್ಟವಳಂತೆ ನಾನು ಏನೆ ಮಾತನಾಡಿದರು. ಹೇಗೆ ಮಾತನಾಡಿದರು ಅವಳು ಮಾತ್ರ ಕೋಪ ಮಾಡಿಕೊಳ್ಳದೆ. ನಗು ಮುಖದಿ ಮಾತನಾಡುತ್ತಿದ್ದಳು. ಅವಳು ಮಾತನಾಡುವಾಗ ನನ್ನ ದೃಷ್ಟಿ ಬೇರೆಡೆಗೆ ಇರುತ್ತಿತ್ತು. ರೀ ಆ ಕಡೆಯಲ್ಲ ನಾನಿರುವುದು ಇಲ್ಲಿ ನನ್ನ ಮುಖ ನೋಡಿಕೊಂಡು ಮಾತನಾಡಿ ಎಂದು ನಗು ಮುಖದಿ ನನ್ನ ಒಳ ಅಹಂಕಾರವನ್ನು ಕೆಣಕಿದಳು. 
   

ಅಂದಿನಿಂದ ನಾನ್ ಯಾರಿಗೂ ಹೆದರದವನಲ್ಲ ಅವಳ ಮುಖ ಅಷ್ಟೆ ತಾನೇ, ನೋಡಿಕೊಂಡು ಮಾತನಾಡಿದರೆ ಆಯ್ತು ಎಂದು ಅಂದಿನಿಂದ ಅವಳ ಮುಖವನ್ನು ನೋಡಿ ಮಾತನಾಡಲು ಆರಂಭಿಸಿದೆ. ನಿಧಾನವಾಗಿ ನನಗೆ ಗೊತ್ತಿಲ್ಲದೆ ನಾನು ಬದಲಾಗುತ್ತಾ ಹೋದೆ. ಆಗಲೇ ತಿಳಿದಿದ್ದು ಹೆಣ್ಣು ಎಂದರೆ ಸಹನೆ, ಹೆಣ್ಣು ಎಂದರೆ ತಾಳ್ಮೆ, ಹೆಣ್ಣು ಎಂದರೆ ಶಾಂತಿ, ಪ್ರೀತಿ ಎಂದು.

ಮಂಜುನಾಥ ಹೆಚ್.ಆರ್
email : manjunathahr1991@gmail.com

Wednesday 9 March 2016

ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

       ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

     ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಪ್ರಕಾರಗಳನ್ನ ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಕಾಣಬಹುದು. ಇದು ಕನ್ನಡ ಭಾಷೆ ನಡೆದು ಬಂದ ದಾರಿಯ ಬಗ್ಗೆ ತಿಳಿಸುತ್ತದೆ. ಅವುಗಳನ್ನ ನಾವುಗಳು ಇಂದಿಗೆ ಬಳಸುತ್ತಿದ್ದೇವೆಯೇ ಎಂಬುದು ನನ್ನ ಪ್ರಶ್ನೆ? ಕಾಲ ಬದಲಾದಂತೆ ಭಾಷೆಯು ಸಹ ತನ್ನಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಕನ್ನಡ ಆರಂಭದಲ್ಲಿ ಬಳಸುತ್ತಿದ್ದ ಎಷ್ಟೋ ಪದಗಳು ಇಂದು ಬಳಕೆಯಲ್ಲಿ ಇಲ್ಲ, ಉದಾಹರಣೆಗೆ “ ರೇಫ, ಶಕಟ ರೇಫ ” ಮೊದಲಾದವುಗಳನ್ನು ಕಾಣಬಹುದು.
    ಇಂದಿನ ಪೀಳಿಗೆಗೆ ಬಂದರೆ ಯುವ ಜನಾಂಗದ ಭಾಷೆಯ ಬಳಕೆ ಸರಿ ಇಲ್ಲ ಹಾದಿ ಬೀದಿಯಲ್ಲಿ ಒದರುವ ಪದಗಳು ಹಾಡುಗಳಾಗುತ್ತಿವೆ ಎಂಬ ವಾದ ಹಿರಿಯರದ್ದು. ಇದು ಯಾಕಾಗಬಾರದು. ಒಂದು ವರದಿಯ ಪ್ರಕಾರ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ 36 ಸ್ಥಾನದಲ್ಲಿದೆ ಅಂದರೆ ಇನ್ನು ಕೆಲವೇ ವರ್ಷಗಳಲ್ಲಿ ಇದು ಮರೆಯಾಗುತ್ತದೆ ಎಂದಾಯಿತು. ಇದನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಹಾಗೆಂದ ಮಾತ್ರಕ್ಕೆ ಕನ್ನಡ ಭಾಷೆಯ ಈ ರೀತಿಯ ಬಳಕೆಯಿಂದ ಉಳಿಯುತ್ತದೆ ಎಂಬುದಲ್ಲ ಕೊನೆಯ ಪಕ್ಷ ಈ ರೀತಿಯಂದಾದರು ಕನ್ನಡ ಉಳಿದೀತೆಂಬ ಆಶಾಭಾವನೆ.
    ಹಿರಿಯರು ಹೇಳುತ್ತಿರುವುದು ಸತ್ಯ ಸಂಗತಿ. ಅವರ ಹಿರಿಯರು ಹೇಳಿದ ಮಾತುಗಳನ್ನು ಅವರು ಅನುಸರಿಸಿದ್ದಾರೆಯೇ ? ಇಂದಿಗೂ ಎಲ್ಲಿ ಕೇಳಿದರೂ ಕನ್ನಡ ಉಳಿಸಿ ಎಂಬ ಕೂಗು ಕೇಳುತ್ತದೆಯೇ ವಿನಃ ಕನ್ನಡವನ್ನು ಬೆಳೆಸಿ ಎಂಬುದನ್ನು ನಾನಂತೂ ಕೇಳಿಲ್ಲ ಎರಡಕ್ಕೂ ವ್ಯತ್ಯಾಸವಿದೆ. ಭಾಷೆಯ ಬೆಳವಣಿಗೆಯಾದಂತೆ ಅದು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. 
      ಇನ್ನು ಅಲ್ಪಪ್ರಾಣ, ಮಹಾಪ್ರಾಣ ಗೊತ್ತಿಲ್ಲ ಅನ್ನೂ ವಾದ ಇದಕ್ಕೆ ಕಾರಣ ಯಾರೂ? ನಮ್ಮ ಶಿಕ್ಷಕರು ಅವರು ಮಾಡುವ ಸಣ್ಣ ತಪ್ಪುಗಳು ಇಂದು ಇಲ್ಲಿ ಮಾತನಾಡುತ್ತಿವೆ. ಜನ ಹೊಸದನ್ನು ಬಯಸುವ ಕಾಲವಿದು ಆದ್ದರಿಂದ ಭಾಷೆ ಬಳಕೆ ಹೇಗಿರಬೇಕು, ಬರವಣಿಗೆ ಹೇಗಿರಬೇಕು, ಪದ ಬಳಕೆ ಹೇಗಿರ ಬೇಕು ಎಂದು ಅವರೇ ನಿರ್ಧಾರ ಮಾಡುತ್ತಾರೆ. 
    ಕನ್ನಡ ಒಂದೇಯಲ್ಲ ಅನೇಕ ಭಾಷೆಗಳು ಇಂತಹುದೇ ಸಮಸ್ಯಯನ್ನ ಎದುರಿಸುತ್ತಿವೆ. ಇಂದಿನ ಯುವ ಜನತೆ ನಮಗೆ ಏನು ಬೇಕು ಅದನ್ನು ಇಟ್ಟುಕೊಳ್ಳುತ್ತಾರೆ ಬೇಡವಾದದನ್ನು ಬಿಟ್ಟು ಬಿಡುತ್ತಾರೆ. ಭಾಷೆಯ ವಿಚಾರದಲ್ಲೂ ಹಾಗೆಯೇ ತಮಗೆ ಬೇಕಾದ ರೀತಿಯಲ್ಲಿ ಭಾಷೆಯನ್ನ ಉಳಿಸಿಕೊಂಡು ಬೆಳೆಸಲು ಹೊರಟಿದ್ದಾರೆ ಇದು ತಪ್ಪಲ್ಲ ಯಾವುದೇ ಒಂದು ವೆವಸ್ಥೆಗೆ ಕಚ್ಚಿಕೊಳ್ಳುವ ಮನೋಗುಣ ಇವರದಲ್ಲ. ಭಾಷೆ ಹೇಗೆ ಬೆಳೆದರೇನು ಕನ್ನಡ, ಕನ್ನಡವಾಗಿದ್ದರೆ ಸಾಲದೇ.





               ಮಂಜುನಾಥ ಹೆಚ್. ಆರ್


Monday 7 March 2016

ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ?


ಮೊದಲ ನೋಟವೇ ಸಾಕಿತ್ತು.......! 
   ಮೋಡದ ನಡುವೆ ಮಳೆ ಹನಿಯೊಂದು ಇಣುಕಿ ಭೂಮಿಯನ್ನು ಸ್ಪರ್ಶಿಸುವಂತೆ ಜನ ತುಂಬಿದ್ದ ಬಸ್ಸಿನಲ್ಲಿ ಆಕೆಯ ಕೈ ಸೋಕಿದಾಗ ಮೈಯಲ್ಲೆನೋ ರೋಮಾಂಚನ, ಮನದಲ್ಲಿ ತಳಮಳ ಹೃದಯದ ಬಡಿತ ನನ್ನ ಮಾತು ಕೇಳದೇ ಜೋರಾಗಿ ಬಡಿಯಲಾರಂಭಿಸಿತು. ಜನರ ನೂಕು-ನುಗ್ಗಲಿನಿಂದ ಬಸ್ಸಿನ ಒಳಗೆ ಹೋದೆ ಆಕೆಯನ್ನು ಬಿಟ್ಟು. ಆ ಜನರ ಮಧ್ಯದಲ್ಲಿ ಅವಳ ಮುಖವನ್ನು ನೋಡಲು ಹರಸಾಹಸವನ್ನು ಪಟ್ಟು. ಅವಳ ಕೇಶದ ಮರೆಯಿಂದ ಸುಂದರ ನಗುಮೊಗವನ್ನು ಒಮ್ಮೆ ತೋರಿಸಿದಳು.
  ನನ್ನ ಹೃದಯದ ಸಂತೋಷಕ್ಕೆ ಪಾರವೇ ಇರಲಿಲ್ಲ, ನೋಡಿದಷ್ಟು ನೋಡಬೇಕೆನಿಸುತ್ತಿತ್ತು ಅವಳ ನಗುವನ್ನ. ನನ್ನ ಆನಂದವನ್ನು ಅದುಮಿಡಲಾಗದೆ ಆ ಕ್ಷಣವೇ ಗೆಳೆಯನಿಗೆ ಅವಳ ವರ್ಣನೆಯನ್ನು ಮೆಸೆಜ್ ಮೂಲಕ ಹರಿದುಬಿಟ್ಟೆ. ಅವನಿಂದ ಒಂದು ರೀಪ್ಲೇ ಬರದಿದ್ದರು ನನ್ನ ವರ್ಣನೆ ಸಾಗುತ್ತಿತ್ತು. ಅವಳು ನನ್ನೊಮ್ಮೆ ನೋಡಿದರೆ ಸಾಕು ನನ್ನ ಜೊತೆ ಮಾತನಾಡಿದ ಅನುಭವವಾಗುತ್ತಿತ್ತು. ನನ್ನ ನೋಡಿ ನಕ್ಕರೆ ಸಾಕು ನನ್ನ ಜೊತೆ ಏಳು ಹೆಜ್ಜೆ ಹಾಕಿದ ಹಾಗೆ, ಮುಂಗುರುಳನ್ನು ಪದೇ ಪದೇ ಕಿವಿಯ ಕಡೆ ಸಿಕ್ಕಿಸುವಾಗ ನನ್ನ ಮುಖದ ಸ್ಪರ್ಶವಾದಂತೆ, ಕಣ್ ರೆಪ್ಪೆಗಳು ನನ್ನನ್ನೆ ಆಕೆಯ ಬಳಿಗೆ ಕರೆದಂತೆ ಕುಡಿ ನೋಟವು ನನ್ನ ಹೃದಯವು ಅವಳ ಹೃದಯವನ್ನು ಸೇರಲು ಅನುಮತಿಯನ್ನು ನೀಡಿದಂತೆ ಬಾಸವಾಗುತ್ತಿತ್ತು. ಅವಳ ಮಾತಿಗೆ ಸಹಕರಿಸುವ ತುಟಿಯು…............. ! ಬೇಡ ಬಿಡಿ ?  ಒಟ್ಟಾರೆ ಚಿನ್ನದ ಗಣಿ, ಕಾವೇರಿ ನದಿ, ಆ ಚಂದಿರನನ್ನು ಇವಳಿಗೆ ಹೋಲಿಸಿದರೆ ಕಡಿಮೆಯೇ. 
   ನೋಡಿದ ಹುಡುಗಿಯ ಮಾತನಾಡಿಸಬೇಕೆಂದು ಆ ಜನರ ನೂಕುನುಗ್ಗಲಿನಿಂದ ಜಗಳವಾಡುತ್ತಾ ದಾರಿ ಬಿಡಿಸಿಕೊಂಡು ಅವಳು ಇರುವಲ್ಲಿಗೆ ಬರುವುದರೊಳಗೆ ಅವಳು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಳು. ಇರಲಿ ಇರಲಿ ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ಎಂದು ಅಂದಿನಿಂದ ಇಂದಿನವರೆಗೂ ಅವಳನ್ನ ಹುಡುಕುತ್ತಲೇ ಇದ್ದೇನೆ.  
ಮಂಜುನಾಥ ಹೆಚ್. ಆರ್

Saturday 5 March 2016

ಬಸ್ಸಿನಲ್ಲೊಂದು ವಿಶ್ವ ಮಾನವ ಗೀತೆ

ಮಾನವೀಯತೆ ನಮಗೂ ಇದೆ........? 

     ಇತರೆ ಪ್ರಾಣಿಗಳಿಗಿಂತ ಬುದ್ಧಿಜೀವಿ ಮಾನವನೆಂದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಆ ಬುದ್ಧಿ ಜೀವಿಗೆ ಯೋಚಿಸುವ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಪ್ರೀತಿ, ಪ್ರೇಮ, ವಾತ್ಸಲ್ಯ ಕರುಣೆ ಇವೆಲ್ಲವುದರ ಅರಿವಿದೆ. ಇದರ ಜೊತೆಗೆ ಅಸಹಾಯಕರನ್ನು ಕಂಡರೆ ಮರುಗುವ ಮತ್ತು ಅವರ ಮೇಲೆ ಪ್ರೀತಿಯನ್ನು ತೋರುವ ಔದಾರ್ಯವು ಸಹ ಇದೆ. ಇದು ಭಾರತೀಯರಿಗೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು ಆದರೆ ಇದು ವಾಸ್ತವವಾಗಿ ನಡೆಯುತ್ತದೆಯೋ ಅಥವಾ ಮೇಷ್ಟು ಪಾಠ ಮಾಡುವ ಪುಸ್ತಕದ ಬದನೆಕಾಯಿ ಅಷ್ಟೆಯೇ ಎಂದು ಕೊಂಡಿದ್ದೆ ಆದರೆ ನಿಜವಾಗಿಯೂ ನನ್ನ ಅನುಭವಕ್ಕೆ ಬರುತ್ತದೆ ಎಂದು ಭಾವಿಸಿರಲಿಲ್ಲ.
    ಅದೊಂದು ದಿನ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದೆ ಸಂಜೆಯಾದ್ದರಿಂದ ಮಾಮೂಲಿಯಾಗಿ ಜನ ಸಂದಣಿ ಇತ್ತು ಖಾಸಗಿ ಬಸ್ ತಡವಾಗಿ ತಲುಪಬಹುದೆಂದು ಸರ್ಕಾರಿ ಬಸ್ ಅವಲಂಬಿಸಿ ಹೊರಟೆ ಬಸ್ಸಿನಲ್ಲಿ ಸೀಟುಗಳೆಲ್ಲ ತುಂಬಿ ಕಂಡಕ್ಟರ್ ಸೀಟಿನ ಪಕ್ಕದಲ್ಲಿ ಖಾಲಿ ಇರುವುದನ್ನು ನೋಡಿ ಅಲ್ಲೆ ಕುಳಿತೆ. ಒಬ್ಬನೆ ಇದ್ದದ್ದರಿಂದ ವಾಡಿಕೆಯಂತೆ ಹಾಡನ್ನು ಕೇಳಲು ಕಿವಿಗೆ ಇಯರ್ ಫೋನ್ ಸಿಕ್ಕಸಿ ಮೆಲೋಡಿಯಸ್ ಸಾಂಗ್ ಕೇಳುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಯಾರೊ ಕಿಟಾರನೆ ಕಿರುಚಿದ ಹಾಗೆ ಕೇಳಿಸಿತು. ಕಿವಿಯಲ್ಲಿನ ಇಯರ್ ಫೋನ್ ತೆಗೆದು ಮುಂದೆ ನೋಡಿದರೆ ಒಂದು ಮಗು ಜೋರಾಗಿ ಅಳುತ್ತಿರುವುದು ಕೇಳಿಸಿತು. 
   ಸುಮಾರು 20 ಕಿ.ಮೀ ಬಸ್ಸು ಮುಂದೆ ನಡೆಯಿತು. ಮಗು ಒಂದೆ ಸಮನೆ ಅಳುತ್ತಿತ್ತು ನಾನು ಎನಾದರೂ ಸಹಾಯ ಮಾಡೋಣವೆಂದರೆ ಗಂಡು ಹುಡುಗ ಏನು ಮಾಡಲು ಸಾಧ್ಯ. ಪಕ್ಕದಲ್ಲೆ ಕುಳಿತಿದ್ದ ಸುಮಾರು 40 ವರ್ಷದ ಆಂಟಿ ಮಗುವನ್ನು ಎತ್ತಿ ಆಡಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರು ಆದರೆ ಮಗು ಅಳುವನ್ನು ನಿಲ್ಲಿಸಲಿಲ್ಲ. ನಂತರ ಅವರ ಮುಂದೆ ಕುಳಿತಿರುವ ಸುಮಾರು 60 ವರ್ಷ ವಯಸ್ಸಿನ ಯಜಮಾನರೊಬ್ಬರು ಮಗುವಿಗೆ ನಿದ್ರೆ ಇರಬೇಕು ನಿಧಾನವಾಗಿ ಮಲಗಿಸಿ ಎಂದು ಹೇಳಿದರು ಅದು ಪ್ರಯೋಜನಕ್ಕೆ ಬರಲಿಲ್ಲ. ನಂತರದ ಸರದಿ 75 ವಯಸ್ಸಿನ ಅಜ್ಜಿಯದು, ಮಗುವಿಗೆ ಹಸಿವಾಗಿರಬಹುದೆನೊ ಹಾಲು ಕುಡಿಸಮ್ಮ ಎಂದು ಮಗುವಿನ ತಾಯಿಗೆ ಹೇಳಿದರು. ದಂಪತಿಗಳಿಗೆ ಮದುವೆಯಾಗಿ ಹೆಚ್ಚೆನು ಆಗಿರಲಿಲ್ಲ 2 ವರ್ಷ ಆಗಿರಬಹುದು. ಅದು ಅಲ್ಲದೆ ಮೊದಲ ಪಾಪು, ಮಗುವನ್ನು ಹೇಗೆ ಜೋಪಾನ ಮಾಡಬೇಕು, ನೋಡಿಕೊಳ್ಳಬೇಕು ಅದೆಲ್ಲ ಇರಲಿ ಹೇಗೆ ಹಾಲು ಕುಡಿಸಬೇಕು ಎಂದು ತಿಳಿದಿಲ್ಲದಂತೆ ಕಾಣುತ್ತಿತ್ತು ಅದು ಅಲ್ಲದೆ ಬಸ್ಸಿನಲ್ಲಿ ಹೇಗೆ ಎಂಬುದು ಅವರ ಚಿಂತೆ ಸ್ವಲ್ಪ ಮುಜುಗರ ಪಟ್ಟುಕೊಳ್ಳುತ್ತಲೆ ಮಗುವನ್ನು ಸಮಾಧಾನ ಪಡಿಸುತ್ತಿದ್ದರು.
    ಇಡೀ ಬಸ್ಸಿನಲ್ಲಿ ಇರುವವರೆಲ್ಲ ಒಂದಿಷ್ಟು ಬೇಜಾರು ಪಟ್ಟುಕೊಳ್ಳದೆ ಮಗುವನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಅದು ಸಾಧ್ಯವಾಗಲಿಲ್ಲ ಮಧುಗಿರಿಯಿಂದ ಬೆಂಗಳೂರಿಗೆ ಬರುವವರೆಗೂ ಹೀಗೆ ಎಲ್ಲರು ಮಗುವನ್ನು ತಮಗೆ ಅನ್ನಿಸಿದ ರೀತಿಯಲ್ಲಿ ಸಮಾಧಾನ ಪಡಿಸಿದರು ಅದು ಪ್ರಯೋಜನವಾಗಲಿಲ್ಲ.
   ಕೊನೆಗೆ ಒಬ್ಬರು ಸೀಟಿನಿಂದ ಮೇಲೆದ್ದು ಮಗುವಿಗೆ ಏನೋ ಪ್ರಾಬ್ಲಮ್ ಆಗಿರಬೇಕು ನೆಲಮಂಗಲದಲ್ಲಿ ನನಗೆ ಗೊತ್ತಿರೂ ಒಬ್ಬರು ಡಾಕ್ಟರ್ ಇದರೆ ಅವರಿಗೆ ಫೋನ್ ಮಾಡಿ ಹೇಳ್ತಿನಿ ನೀವ್ ಅಲ್ಲಿಗೆ ಹೋಗಿ ಟ್ರೀಟ್‍ಮೆಂಟ್ ತಗೊಂಡು ಬೇರೆ ಬಸ್ಸಿಗೆ ಬನ್ನಿ ಎಂದರು. ಮತ್ತೋಬ್ಬರು ಮೇಲೆದ್ದು ಸಾರ್ ನಿಮಗೆ ದುಡ್ಡು ಏನಾದ್ರು ಬೇಕಾದ್ರೆ ಹೇಳಿ ನಮ್ಮಿಂದ ಎಷ್ಟು ಆಗುತ್ತೊ ಸಹಾಯ ಮಾಡ್ತಿವಿ. ಈ ಮಾತಿಗೆ ಬಸ್ಸಿನಲ್ಲಿ ಇದ್ದವರೆಲ್ಲ ಧ್ವನಿಗೂಡಿಸಿದರು. ಪ್ರಯಾಣಿಕರ ಒಪ್ಪಿಗೆ ಪಡೆದು ಬಸ್ಸನ್ನು ಆಸ್ಪತ್ರೆಯ ಹತ್ತಿರ ನಿಲ್ಲಿಸಿ ಅವರನ್ನು ಅಲ್ಲಿಯೇ ಬಿಟ್ಟು ಬಸ್ಸು ಬೆಂಗಳೂರಿಗೆ ನಡೆಯಿತು. 
    ನಿಜಕ್ಕೂ ಇಂಥ ಜನರು ಇದ್ದಾರ ನಮ್ಮ ನಡುವೆ ಎಂದು ಅಶ್ಚರ್ಯ ಪಟ್ಟೆ ಅಂದು ಎಂಥ ಮಾನವೀಯತೆ ನಮ್ಮ ಜನದ್ದು ಎಂದು ಖುಷಿ ಪಟ್ಟೆ. 
                                                    ಮಂಜುನಾಥ ಹೆಚ್.ಆರ್.
E-mail : manjunathahr1991@gmail.com

Thursday 3 March 2016

ಅದ್ದೂರಿ ಮದುವೆ ಏಕೆ .......... ?

ಅದ್ದೂರಿ ಮದುವೆಗೆ ಆರ್ಶಿವಾದವೇ ಶ್ರೀರಕ್ಷೆ ...........