Friday 22 April 2016

ಸಾವಿನ ಕದ ತಟ್ಟಿದಾಗಿನ ಆ ಕ್ಷಣ


    ಡಿಗ್ರಿ ಅಂದ್ರೆ, ಅಲ್ಲಿ ಎಂಜಾಯ್ ಮೆಂಟ್ ಗೆ ಏನು ಬರ ಇರೊದಿಲ್ಲ, ಕಾಲೇಜ್ ಪ್ರೋಗ್ರಾಂ, ಸಿಂಪಲ್ ಸೆಮಿನಾರಸ್, ಕಲರ್ ಫೂಲ್ ಕ್ಲಾಸ್ ರೂಮ್, ಬೋರಿಂಗ್ ಟಿಚಿಂಗ್, ಬೇಕಾ ಬಿಟ್ಟಿ ವಾಕಿಂಕ್. ಇವೆಲ್ಲ ಒಂದು ಭಾಗ ಅಂತ ಅಂದು ಕೊಳ್ಳದವರು ಸ್ಟೂಡೆಂಟೆ ಅಲ್ಲಾ. ಅನ್ನೋ ರೇಂಜಿಗೆ ಥಿಂಕ್ ಮಾಡೋ ಜಾಯಮಾನ ನಮ್ಮದು. ಅದನ್ನ ಬಿಟ್ಟು ಕೊಡದ ಮನಸ್ಸು, ಏನನ್ನು ಬೇಕಾದರೂ ಮಾಡೂ ಹುಮ್ಮಸ್ಸು ಆಗ ಇಲ್ಲಾ ಅಂದ್ರೆ ಹೇಗೆ.
   ಹೀಗೆ ಒಂದಿನ ಕಾಲೇಜಿಗೆ ಮಾಸ್ ಬಂಕ್ ಹೊಡೆದು ಸಿನಿಮಾಗೆ ಹೊಗೋಣ ಅಂಥ ಪ್ಲಾನ್ ಮಾಡಿಕೊಂಡು, ಕಾಲೇಜಿನ ಕಾಂಪೌಂಡ್ ಹಾರಿದ್ವಿ. ನಮಗೇನು ಅದು ಬಂಕ್ ಆಗಿರ್ಲಿಲ್ಲ ಯಾಕೆಂದ್ರೆ, ಕಾಲೇಜಿಕೆ ಅಪರೂಪಕ್ಕೆ ಹೋಗುವವರಿಗೆ, ಕ್ಲಾಸ್ ಗೆ ಹೋದ್ರೂ ಒಂದೇ ಹೋಗದೇ ಇದ್ರು ಒಂದೇ. ಕಾಂಪೌಂಡ್ ಹಾರಿದ್ದಕ್ಕು ಕಾರಣ ಇದೆ. ಸೋಶಿಯಾಲಜಿ ಲೆಚ್ಚರರ್ ಸ್ವಲ್ಪ ಸ್ಟ್ರಿಟ್ ಕಾಲೇಜಿಗೆ ಬರದೆ ಹೊರಗೆ ಹೋಗ್ತಿದರೆ ಅಂತ ಗೊತ್ತಾದರಂತೂ ಮುಗಿಯಿತೂ ಕಥೆ. ಯಾವೂದೋ ಓಬಿರಾಯನ ಕಾಲದ ಕಥೆಯನ್ನು ರಿವೈಮಡ್ ಮಾಡಿ ನಮ್ ಕಾಲದಲ್ಲಿ ಹಾಗೆ ಓದಿದ್ವಿ, ಆಗ ಹೀಗೆ ಇರ್ಲಿಲ್ಲ. ತಮ್ಮ ಮಾತಿನ ಚಾಟಿಯನ್ನು ಬೀಸುತ್ತ ಇದ್ರು. ಇವರಿಗೆ ಎದುರು ಮಾತನಾಡಲು ಭಯ ಅಂತ ಅಲ್ಲಾ, ಯಾರ ಮೇಲು ಇಲ್ಲದ ಗೌರವ, ಅಭಿಮಾನ, ಪ್ರೀತಿ ಶಂಕರಪ್ಪ ಸರ್ ಅಂದರೆ, ತಂದೆಯ ವಯಸ್ಸಿನವರಾದ ಇವರನ್ನು ಕಂಡರೆ ಎಲ್ಲಾ ಸ್ಟೂಡೆಂಟ್ಸ್ಗೂ ಒಂದೇ ರೀತಿಯ ಗೌರವ.
    ಕಾಂಪೌಂಡ್ ಹಾರಿ ಸಾಲು ಸಾಲಾಗಿ ಗೋಡೆಯನ್ನು ಒರಗಿಕೊಂಡು ಮೋರಿಯನ್ನು ನೆಗೆದು, ರೋಡನ್ನು ದಾಟಿ ಸಿಟಿಯ ಒಳಗೆ ಹೊರಟ್ವಿ. ಯಾವ ಥಿಯೇಟರ್ ಗೆ ಹೋಗ್ಬೇಕು, ಯಾವ ಸಿನಿಮಾವನ್ನು ನೋಡ್ಬೇಕು ಒಬ್ಬರಿಗೂ ಐಡಿಯಾ ಇಲ್ಲಾ, ಒಬ್ಬೋಬ್ಬರು ಒಂದೊಂದು ಸಿನಿಮಾ ಹೆಸರನ್ನು ಬಾಯಿಂದ ಒಗೆದರು. ಒಬ್ಬ ತೆಲುಗು ಸಿನಿಮಾ ಎಂದರೆ, ಮತ್ತೊಬ್ಬ ಹಿಂದಿ ಎನ್ನುತ್ತಾನೆ, ಇನ್ನೊಬ್ಬ ತಮಿಳು ಎನ್ನುತ್ತಾನೆ. ನಾನು ದೃಡವಾಗಿ ಇವತ್ತು ಕನ್ನಡ ಸಿನಿಮಾ ನೋಡಲೇ ಬೇಕೆಂದು ಒತ್ತಾಯಿಸಿದ ಮೇಲೆ ಎಲ್ಲರು ಒಪ್ಪಿ ತುಮಕೂರಿನ ದೊಡ್ಡ ಥಿಯೇಟರ್ ‘ಮಾರುತಿ ಥಿಯೇಟರ್’ ಬಳಿಗೆ ಸುತ್ತಾಡಿಕೊಂಡು ಬಂದೆವು.
   ಜನ ಕಡಿಮೆ ಇದ್ದರು ಹಾಗೇ ಸುಲಭವಾಗಿ ಟಿಕೇಟ್ ಕೂಡ ಸಿಕ್ಕಿತು. ಒಳಗೆ ಹೋದೆವು. ಕೈಬೆರಳಿನಿಂದ ಎಲ್ಲರನ್ನು ಎಣಿಸಬಹುದಿತ್ತು, ಅಷ್ಟು ಜನ ನಮ್ಮ ಕನ್ನಡ ಸಿನಿಮಾವನ್ನ ಉದ್ದಾರ ಮಾಡಲು ಬಂದಿದ್ದರು. ನಮ್ಮ ಬಂದು ಭಾಂದವರು ನಮ್ಮ ಗೆಳೆಯರು ಸಿನಿಮಾ ಆರಭವಾಗಿ 10 ನಿಮಿಷವಾಗಿತ್ತು ಅಷ್ಟೇ ಅಷ್ಟರಲ್ಲೇ ನನ್ನನ್ನು ಬೈದುಕೊಳ್ಳುವುದಕ್ಕೆ ಸ್ಟ್ರಾಟ್ ಮಾಡಿದ್ರು. ಯಾಕೆಂದರೆ ಅವರ ಆಲೋಚನೆಗೆ ತಕ್ಕನಾಗಿ ಸಿನಿಮಾ ಇಲ್ಲದ್ದು ಎಲ್ಲರಿಗೂ ಬೇಜಾರು ತರಿಸಿತ್ತು.
  ಅಂಗೂ ಇಂಗೋ ಸಿನಿಮಾ ನೋಡಿ, ಆಚೆ ಬಂದರು ಅವರ ಹೊಗಳಿಕೆ (ಬೈಗುಳ) ಇನ್ನೂ ನಿಂತಿರಲಿಲ್ಲ. ಅದೇ ಆಲೋಚನೆಯಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಹೈವೇ ಪಕ್ಕದಲ್ಲಿ ನಿದಾನವಾಗಿ ನಡೆದುಕೊಂಡು. ಹಿಂದಿನಿಂದ ಗೌರ್ನ್ ಮೆಂಟ್ ಬಸ್ಸೋಂದು ನಿಧಾನವಾಗಿ ನನ್ನ ಬೆನ್ನಿಗೆ ತಾಕಿತು. ನಿಧಾನವಾಗಿ ಹಿಂತಿರುಗಿ ನೋಡಿದ ತಕ್ಷಣ ಹೆದರಿ ಏನು ಮಾಡುತ್ತಿದ್ದೇನೆ, ಏನು ಮಾಡಬೇಕು ಎಂದು ತಿಳಿಯದೆ ಕರೆಂಟ್ ಹೊಡೆದ ಕಾಗೆಯ ಹಾಗೆ ಆಗಿತ್ತು ಆಗಿನ ಪರಿಸ್ಥಿತಿ. ಸ್ನೇತರೆಲ್ಲರು ಅವನ ಮೇಲೆ ಜೋರು ಮಾಡುತ್ತಿದ್ದರೆ. ನನಗೆ ಏನು ಮಾತನಾಡದೆ ಹೊರಗೆ ಬಂದಿದ್ದೆ ರೋಡ್ನಿಂದ. ಇಂತ ಅನುಭವ ಜೀವನದಲ್ಲಿ ಎಂದು ಮರಯುವುದಕ್ಕೆ ಸಾಧ್ಯ ಆಗಿಲ್ಲ. ಸಾವನ್ನು ಸಮೀಪಕ್ಕೆ ಬಂದು ಹೋಯಿತು.
ಮಂಜುನಾಥ ಹೆಚ್.ಆರ್.

Email : manjunathahr1991@gmail.com 

No comments:

Post a Comment