ಯಾರೇ ಆಗಲಿ ಲವ್ ಮಾಡಿ ಅದು ಬ್ರೇಕಪ್ ಆದಮೇಲೆ ನಮ್ಮ ಜೀವನ ಇಷ್ಟೇ, ನಾನಿನ್ನು ಬದುಕಲು ಯೋಗ್ಯ ಅಲ್ಲಾ ಸಾಯಬೇಕು ಎನ್ನುವ ನಿರ್ಧಾರ ಇಂದಿನ ದಿನದಲ್ಲಿ ಸಾಮಾನ್ಯ. ಅಂಥವರಿಗೊಂದು ಮಾತು.
• ಸುಖಾ ಸುಮ್ಮನೆ ಯೋಚಿಸುವುದನ್ನು ಬಿಡಿ ಸದಾ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿ. ನೆನಪು ಮಾಡಿಕೊಳ್ಳುವುದಕ್ಕೂ ಬಿಜಿಯಾದಾಗ ಯಾರೊಬ್ಬರು ನೆನಪಿಗೆ ಬರುವುದಿಲ್ಲ.
• ಆತ್ಮೀಯರೊಂದಿಗೆ ಹೆಚ್ಚು ಮಾತನಾಡಿ ಒಬ್ಬರೆ ಇರುವುದಕ್ಕಿಂತ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ಲೇಸು. ಕೆಲಸಕ್ಕೆ ಬಾರದ ಮಾತುಗಳು ನಿಮ್ಮ ಬದಲಾವಣೆಗೆ ಬರುತ್ತವೆ.
• ಅಳು ಬಂದರೆ ನಿಮಗೆ ಸಾಕಾಗುವಷ್ಟು ಅತ್ತುಬಿಡಿ ಮುಂದೆ ಅಳಬೇಕೆಂದರು ಕಣ್ಣಿಂದ ಒಂದು ಹನಿಯು ಬರುವುದಿಲ್ಲ. ಅತ್ತಾಗ ಮನಸ್ಸು ಹಗುರಾಗುತ್ತದೆ.
• ನಿಮ್ಮ ಮೇಲೆ ನೀವು ಪ್ರೀತಿ ಅಭಿಮಾನ ಬೆಳೆಸಿಕೊಳ್ಳಿ, ಅದೊಂದು ವಿಚಾರದಲ್ಲಿ ಈಗೋ ಇದ್ದರೆ ನಿಮ್ಮಿಂದ ಬದಲಾವಣೆ ಸಾಧ್ಯ.
• ಮುಂಜಾನೆ ಎದ್ದು ತಂಪಾದ ಗಾಳಿಯಲ್ಲಿ ವಾಕ್ ಮಾಡಿ. ಸಾಧ್ಯವಾದರೆ ನಿಮ್ಮ ಮನಸ್ಸಿಗೆ ಮುದ ನೀಡುವ ಜಾಗಗಳಿಗೆ ಸ್ನೇಹಿರ ಜೊತೆ ಟ್ರಿಪ್ ಹೋಗಿ ಜಾಗ ಬದಲಾದರೆ ಮನಸ್ಸು ಬದಲಾಗುತ್ತದೆ.
• ನೀವು ಪ್ರೀತಿಯಲ್ಲಿ ಸೋತಿದ್ದಿರಾ ಆದರೆ ಪ್ರೀತಿಲಿ ಅಲ್ಲಾ ನಿಮಗೆ ಅಂತಾ ಒಂದು ಜೀವಾ ಕಾಯ್ತಾ ಇರುತ್ತೆ. ನಿಮ್ಮನ್ನ ಬಿಟ್ಟು ಹೋದವರನ್ನು ನೆನೆಯುತಾ, ಅವರಿಗೆ ಮೋಸ ಮಾಡಬೇಡಿ ಯಾಕೆಂದರೆ ಅವರು ತಮ್ಮ ಪ್ರೀತಿಯನ್ನ ಕಳೆದುಕೊಂಡಿರಬಹುದಲ್ಲವೇ. ಪ್ರೀತಿಯಲ್ಲಿ ಬೀಳದವರು ಯಾರೊಬ್ಬರು ಇಲ್ಲಾ.
ಮಂಜುನಾಥ ಹೆಚ್.ಆರ್
email :
manjunathahr1991@gmail.com
No comments:
Post a Comment